ಪ್ರಚಲಿತದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿ ವಿವಾದ ಮೈಗಂಟಿಸಿಕೊಳ್ಳುವ ನಟ ಚೇತನ್, ನಿನ್ನೆ ಲೋಕಾಪರ್ಣೆಗೊಂಡ ಡಾ.ವಿಷ್ಣು ಸ್ಮಾರಕಕ್ಕೂ ಖ್ಯಾತೆ ತೆಗೆದಿದ್ದಾರೆ. ಚಲನಚಿತ್ರ ನಟರ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳಿಂದ ಆಕ್ರೋಶವೂ ವ್ಯಕ್ತವಾಗಿದೆ.