ತಾತಯ್ಯ ಅವರ ಇನ್ನೊಂದಷ್ಟು ತತ್ವಪದಗಳಿಗೂ ರಾಗ ಸಂಯೋಜಿಸಿ ಅಲ್ಪಂ ಗುಚ್ಛ ಹೊರ ತರುವ ಆಲೋಚನೆ ಅವರಿಗೆ ಇದೆಯಂತೆ. ಈಗ ಹೊರ ತಂದಿರುವ ‘ಎಲ್ಲಿದೆ ಬಂದೆ ನೀ ತುಂಬಿಯೇ’ ಅಲ್ಬಂನ ನಿರ್ದೇಶನ ಮತ್ತು ಪರಿಕಲ್ಪನೆ ಕಥೆಗಾರ ಮಂಜುನಾಥ್ ಎಂ.ವಿ ಅವರದ್ದು. ಮನು ಅವರ ಕ್ಯಾಮೆರಾ ಕೆಲಸ ತಾಜಾತನದಿಂದ ಕೂಡಿದೆ. ರಿದಂ ಕಲಾವಿದ ಮಂಜುನಾಥ್ ಎನ್.ಎಸ್, ವರುಣ್ ಪ್ರದೀಪ್, ಚೌವ್ಹಾಣ್, ವಾಜೀದ್ ಮೊಯಿನುದ್ದೀನ್ ತಂಡದ ಸದಸ್ಯರ ಪರಿಶ್ರಮ ಈ ಅಲ್ಬಂ ನಿರ್ಮಾಣ ಕಾರ್ಯದಲ್ಲಿ ಅಡಗಿದೆ.