ಕಾರ್ಯಕ್ರಮದಲ್ಲಿ, ಯಕ್ಷಗಾನ ಹಿಮ್ಮೇಳದ ಭಾಗವತಿಕೆ, ಮೃದಂಗ, ಚಂಡೆ ಮೇಳೈಸಲಿದೆ. ಪ್ರಸಿದ್ಧ ಕಲಾವಿದರಾದ ವಿದ್ವಾನ್ ಗಣಪತಿ ಭಟ್ಟ, ಸರ್ವೇಶ್ವರ ಹೆಗಡೆ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರವೀಂದ್ರ ಭಟ್ಟ ಅಚವೆ, ಅನಂತ ದಂತಳಿಗೆ, ಗೋಪಾಲಕೃಷ್ಣ ಭಟ್ಟ ಜೋಗಿಮನೆ, ಕಾವ್ಯಶ್ರೀ ಅಜೇರು ಭಾಗವತಿಕೆ ಯಲ್ಲಿ, ಗಣಪತಿ ಭಾಗವತ ಕವಾಳೆ, ಸುನೀಲ್ ಭಂಡಾರಿ ಕಡತೋಕಾ, ಎನ್.ಜಿ.ಹೆಗಡೆ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಕೆ.ಹೆಗಡೆ ಹರಿಕೇರಿ ಮೃದಂಗದಲ್ಲಿ, ಕೃಷ್ಣ ಯಾಜಿ, ಗಣೇಶ ಗಾಂವ್ಕರ, ಮಹಾಬಲೇಶ್ವರ ನಾಯ್ಕನಕೆರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ, ಸುಜನ್ ಹಾಲಾಡಿ ಚಂಡೆಯಲ್ಲಿ ಗಮನ ಸೆಳೆಯಲಿದ್ದಾರೆ.