‘ಸಾಧನೆಯ ಹಾದಿಯಲ್ಲಿ ಇರುವುದಕ್ಕಿಂತಲೂ, ದಶಕಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದವರಿಗೆ ಪ್ರಶಸ್ತಿ ನೀಡಲು ಆದ್ಯತೆ ನೀಡಬೇಕಾಗುತ್ತದೆ. ಆದರೆ, ಯುವ ಕಲಾವಿದರಿಗೆ ಪ್ರಶಸ್ತಿ ನೀಡಬಾರದು ಎಂದಲ್ಲ. ನಿರ್ದಿಷ್ಟ ಅನುಪಾತ ಅನುಸರಿಸಿ ಮುಂದಿನ ವರ್ಷದಿಂದ ಯುವ ಕಲಾವಿದರಿಗೂ ಪ್ರಶಸ್ತಿ ನೀಡಲಾಗುವುದು’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್. ಭೀಮಸೇನ ‘ಪ್ರಜಾವಾಣಿ’ಗೆ ತಿಳಿಸಿದರು.