ಇದು ಯಾವುದೋ ಇಂಗ್ಲಿಷ್ ಲೇಖಕ ಬರೆದ ಕಥೆ ಆಗಿರಲಿಲ್ಲ. ಇದು ನಟರ ಬದುಕಿನ ಶತ ಶತಮಾನಗಳ ಅನುಭವಗಳಾಗಿದ್ದವು. ಶಾಸ್ತ್ರೀಯವಾಗಿ ಸಂಗೀತ ಕಲಿತವರು ಈ ಕಥೆಗೆ ಸಂಗೀತ ನೀಡಿರಲಿಲ್ಲ. ಇವು ನಟರ ಶತ ಶತಮಾನಗಳ ಅನುಭವಗಳಿಂದ ಹುಟ್ಟಿದ ಪ್ರತಿರೋಧದ ಹಾಡುಗಳಾಗಿದ್ದವು. ನಟರು ಶತಮಾನಗಳ ಕಾಲ ನಡೆಸಿದ ಜೀವನ ಅವರು ಆಚರಿಸಿದ ಹಬ್ಬಗಳು ಆಚರಣೆಗಳೇ ರಂಗ ಪರಿಕರಗಳಾಗಿದ್ದವು. ಇದೇ ದಿಂಡಗೂರು ಗ್ರಾಮದ ಪರಿಶಿಷ್ಟ ಜನರ ‘ಕೇರಿ–ಹಾಡು’. ನಾನೇ ಈ ನಾಟಕವನ್ನು ನಿರ್ದೇಶಿಸಿದ್ದೆ
– ಚಂದ್ರಶೇಖರ್ ಕೆ.
ಚಂದ್ರಶೇಖರ್ ಕೆ.
ಯಾವುದೇ ಸಿದ್ಧ ಚೌಕಟ್ಟಿಗೆ ಜೋತು ಬೀಳದೆಯೇ ಬೇರೆ ಬೇರೆ ಸಮುದಾಯಗಳ ಜೊತೆಯಲ್ಲಿ ಅವರ ಬದುಕಿನ ಭಾಗವಾಗಿ ಅವರ ಕಥೆಗಳನ್ನು ‘ಕೇರಿ–ಹಾಡು’ ರೀತಿಯಲ್ಲಿಯೇ ರಂಗಭೂಮಿ ಮೇಲೆ ತರುವ ಕನಸಿದೆ. ರಂಗಭೂಮಿ ಈತನಕ ಇಂಥ ಕಥೆಗಳಿಗೆ ಸಾಕ್ಷಿಯಾಗಿಲ್ಲ.