ನಿಧಿ ಸುಬ್ಬಯ್ಯ ಬಗ್ಗೆ ಅವಾಚ್ಯ ಶಬ್ದ ಬಳಕೆ, 3ನೇ ಬಾರಿ ನಾಯಕರಾಗುವ ವೇಳೆ ಅರವಿಂದ್, ಪ್ರಶಾಂತ್ ಸಂಬರಗಿ ಜೊತೆಗಿನ ಅನಗತ್ಯ ಟಾಕ್ ಫೈಟ್ ಎಲ್ಲರ ಗಮನ ಸೆಳೆದಿತ್ತು. ಗೆಲ್ಲುವುದರಲ್ಲಿ ಹೆಚ್ಚು ಗಮನ ಹರಿಸುತ್ತಿದ್ದ ಅವರು ನಿಯಮಗಳನ್ನು ಮರೆತರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಸೀಸನ್ ಅಂತ್ಯದ ವೇಳೆಗೆ ಆ ಎಲ್ಲ ಗೊಂದಲಗಳಿಂದ ಹೊರಬಂದ ಅರವಿಂದ್, ಶಾಂತಚಿತ್ತರಾಗಿ ಗಮನಸೆಳೆದರು. ತಮ್ಮ ಪ್ರತಿಸ್ಪರ್ಧಿ ಮಂಜು ಪಾವಗಡ ಅವರ ಜೊತೆಗಿನ ಅವರ ಒಡನಾಟ ಗಮನಾರ್ಹವಾಗಿತ್ತು. ಎಲ್ಲರ ಬಗ್ಗೆಯೂ ಪ್ರೀತಿ, ಗೌರವ ವ್ಯಕ್ತಪಡಿಸುತ್ತಿದ್ದ ಅವರ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.