<p>ಕನ್ನಡದ ಬಿಗ್ಬಾಸ್ ಮನೆಯಿಂದ ಕಳೆದ ವಾರ ಅಭಿಷೇಕ್ ಶ್ರೀಕಾಂತ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕ್ಯಾಪ್ಟನ್ ಆಗಿರುವಾಗಲೇ ಬಿಗ್ಬಾಸ್ ಮನೆಯಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಿಗ್ಬಾಸ್ನಿಂದ ಆಚೆ ಬಂದಿರುವ ಅಭಿಷೇಕ್ ಶ್ರೀಕಾಂತ್ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.</p><p>ಇದೇ ವಿಡಿಯೊವನ್ನು ನಟ ಅಭಿಷೇಕ್ ಶ್ರೀಕಾಂತ್ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ ಪಯಣದ ಕುರಿತು ಮೆಲುಕು ಹಾಕಿದ್ದಾರೆ. </p>.BBK12: ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಬದಲಾಯ್ತು ಚೈತ್ರಾ ಕುಂದಾಪುರ ಅದೃಷ್ಟ.ಬಿಷ್ಣೋಯಿ ಗ್ಯಾಂಗ್ನಿಂದ ಬಿಗ್ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?.<p><strong>ಅಭಿಷೇಕ್ ಶ್ರೀಕಾಂತ್ ಪೋಸ್ಟ್ನಲ್ಲಿ ಏನಿದೆ?</strong></p><p>‘ಬಿಗ್ಬಾಸ್ ಮನೆಯಲ್ಲಿ ಕಳೆದ ಈ ಪ್ರಯಾಣಕ್ಕೆ, ನೀವು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಯಾವ ಪರಿಸ್ಥಿತಿ ಬಂದರೂ ನಾನು ನನ್ನ ಶಾಂತತೆ ಹಾಗೂ ನಿಜವಾದ ಸ್ವಭಾವವನ್ನು ಕಳೆದುಕೊಳ್ಳದೇ ಇರಲು ಪ್ರಯತ್ನಿಸಿದೆ. ಪ್ರತಿ ಟಾಸ್ಕ್ನಲ್ಲಿ ನಿಮ್ಮನ್ನು ಮನರಂಜಿಸಲು ನನ್ನ 100% ಶ್ರಮ ನೀಡಿದೆ. ನಾಟಕ ಮಾಡದೆ, ಮುಖವಾಡ ಹಾಕದೆ, ನನ್ನ ನಾನಾಗಿಯೇ ಇರುವುದೇ ನನ್ನ ಗುರಿ. ಈ ನಿಜವಾದ ನನ್ನನ್ನು ನೀವು ಸ್ವೀಕರಿಸಿ ಪ್ರೀತಿಸಿದದ್ದು ಇದೇ ನನ್ನ ದೊಡ್ಡ ಗೆಲುವು ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.</p><p>ಇನ್ನು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರಾವಾಹಿಯಲ್ಲಿ ಮೌರ್ಯ ಪಾತ್ರದಲ್ಲಿ ಅಭಿಷೇಕ್ ಶ್ರೀಕಾಂತ್ ನಟಿಸಿದ್ದರು. ಈ ಮೂಲಕವೇ ನಟ ಅಭಿಷೇಕ್ ಮನೆಮಾತಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ಬಿಗ್ಬಾಸ್ ಮನೆಯಿಂದ ಕಳೆದ ವಾರ ಅಭಿಷೇಕ್ ಶ್ರೀಕಾಂತ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕ್ಯಾಪ್ಟನ್ ಆಗಿರುವಾಗಲೇ ಬಿಗ್ಬಾಸ್ ಮನೆಯಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಬಿಗ್ಬಾಸ್ನಿಂದ ಆಚೆ ಬಂದಿರುವ ಅಭಿಷೇಕ್ ಶ್ರೀಕಾಂತ್ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.</p><p>ಇದೇ ವಿಡಿಯೊವನ್ನು ನಟ ಅಭಿಷೇಕ್ ಶ್ರೀಕಾಂತ್ ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ ಪಯಣದ ಕುರಿತು ಮೆಲುಕು ಹಾಕಿದ್ದಾರೆ. </p>.BBK12: ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಬದಲಾಯ್ತು ಚೈತ್ರಾ ಕುಂದಾಪುರ ಅದೃಷ್ಟ.ಬಿಷ್ಣೋಯಿ ಗ್ಯಾಂಗ್ನಿಂದ ಬಿಗ್ಬಾಸ್ ಸ್ಪರ್ಧಿಗೂ ಕೊಲೆ ಬೆದರಿಕೆ: ಕಾರಣವೇನು?.<p><strong>ಅಭಿಷೇಕ್ ಶ್ರೀಕಾಂತ್ ಪೋಸ್ಟ್ನಲ್ಲಿ ಏನಿದೆ?</strong></p><p>‘ಬಿಗ್ಬಾಸ್ ಮನೆಯಲ್ಲಿ ಕಳೆದ ಈ ಪ್ರಯಾಣಕ್ಕೆ, ನೀವು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಯಾವ ಪರಿಸ್ಥಿತಿ ಬಂದರೂ ನಾನು ನನ್ನ ಶಾಂತತೆ ಹಾಗೂ ನಿಜವಾದ ಸ್ವಭಾವವನ್ನು ಕಳೆದುಕೊಳ್ಳದೇ ಇರಲು ಪ್ರಯತ್ನಿಸಿದೆ. ಪ್ರತಿ ಟಾಸ್ಕ್ನಲ್ಲಿ ನಿಮ್ಮನ್ನು ಮನರಂಜಿಸಲು ನನ್ನ 100% ಶ್ರಮ ನೀಡಿದೆ. ನಾಟಕ ಮಾಡದೆ, ಮುಖವಾಡ ಹಾಕದೆ, ನನ್ನ ನಾನಾಗಿಯೇ ಇರುವುದೇ ನನ್ನ ಗುರಿ. ಈ ನಿಜವಾದ ನನ್ನನ್ನು ನೀವು ಸ್ವೀಕರಿಸಿ ಪ್ರೀತಿಸಿದದ್ದು ಇದೇ ನನ್ನ ದೊಡ್ಡ ಗೆಲುವು ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.</p><p>ಇನ್ನು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರಾವಾಹಿಯಲ್ಲಿ ಮೌರ್ಯ ಪಾತ್ರದಲ್ಲಿ ಅಭಿಷೇಕ್ ಶ್ರೀಕಾಂತ್ ನಟಿಸಿದ್ದರು. ಈ ಮೂಲಕವೇ ನಟ ಅಭಿಷೇಕ್ ಮನೆಮಾತಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>