ಬೆಂಗಳೂರು: ವಾರ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್, ಟಾಸ್ಕ್, ಗುಂಪುಗಾರಿಕೆ ಜೋರಾಗುತ್ತಲೇ ಇದೆ. ಈ ವಾರ ಒಟ್ಟು 6 ಜನ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್ ಮಹೇಶ್ ನಾಮಿನೇಟ್ ಆಗಿದ್ದಾರೆ.
ಎರಡನೇ ವಾರ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಲಾಗಿದ್ದು ಮಾಣಿಕ್ಯ ತಂಡಕ್ಕೆ ವಿನಯ್ಗೌಡ ನಾಯಕನಾದರೆ, ಶಕ್ತಿ ತಂಡಕ್ಕೆ ಕಾರ್ತಿಕ್ ನಾಯಕರಾಗಿದ್ದಾರೆ.
ಟಾಸ್ಕ್ ಮಧ್ಯೆ ಕಿರುಚಾಡಿದ ತನಿಷಾ
ಬಾಕ್ಸ್ವೊಂದರ ಮೇಲೆ ತಂತ್ರಗಾರಿಕೆ ಬಳಿಸಿ ಅತಿ ಹೆಚ್ಚು ಜನರು ನಿಲ್ಲಬೇಕೆಂಬ ಟಾಸ್ಕ್ ನೀಡಲಾಗಿತ್ತು. ಈ ವೇಳೆ ತನಿಷಾ ಮತ್ತು ವಿನಯ ಗೌಡ ಮಧ್ಯೆ ಮಾತಿನ ಯುದ್ಧ ನಡೆದಿದ್ದು,‘ನಾವೇನು ಬಿಕಾರಿಗಳಲ್ಲ’ ಎಂದು ತನಿಷಾ ಕೂಗಾಡಿದ್ದಾರೆ. ಇವೆಲ್ಲದರ ಮಧ್ಯೆ ತುಕಾಲಿ ಸಂತೋಷ್ ಕೂಡ ಜಗಳವಾಡಿದ್ದಾರೆ.