ನಾನು ಆಗ 2 ನೇ ತರಗತಿ ಓದುತ್ತಿದ್ದೆ, ಅಂದು ದೀಪಾವಳಿ ಹಬ್ಬ, ಅಮ್ಮ ಮನೆಯಲ್ಲಿರಲಿಲ್ಲ. ಕಂಠಪೂರ್ತಿ ಕುಡಿದಿದ್ದ ಅಪ್ಪ, ಅನ್ನಕ್ಕೆ ವಿಷ ಹಾಕಿ ನನಗೆ ಮತ್ತು ಸಹೋದರನಿಗೆ ತಿನಿಸಿದರು. ಅವರೂ ಸಹ ಅದೇ ಅನ್ನ ತಿಂದಿದ್ದರು. ಯಾವುದೋ ವಿಷಯಕ್ಕೆ ನಾವು ಮೂವರೂ ಸಾಯಬೇಕೆಂದು ಅಪ್ಪ ನಿರ್ಧರಿಸಿದ್ದರು. ನೆರವಿಗೆ ಬಂದ ಊರಿನ ಜನನಮಗೆ ಉಪ್ಪು ನೀರು ಕುಡಿಸಿ ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್, ನಾವು ಬದುಕಿದೆವು. ಈಗಲೂ ಆ ಘಟನೆ ಕಣ್ಣೆದುರಿಗೆ ಬರುತ್ತದೆ ಎಂದು ಕಣ್ಣೀರು ಹಾಕಿದರು.