<p><strong>ಬೆಂಗಳೂರು:</strong> ಬಿಗ್ ಬಾಸ್ ಎರಡನೇ ಇನಿಂಗ್ಸ್ನ 4ನೇ ವಾರ ನಾಮಿನೇಟ್ ಆದ ಮನೆಯ ಸದಸ್ಯರಿಗೆ ಎಲಿಮಿನೇಶನ್ ತಪ್ಪಿಸಿಕೊಳ್ಳಲು ಬಿಗ್ ಬಾಸ್, ಹೊಸ ಆಯ್ಕೆ ನೀಡಿದ್ದಾರೆ. ಹಾಗಾಗಿ, ಎಲಿಮಿನೇಶನ್ನಿಂದ ಪಾರಾಗಲು ಎಲ್ಲ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗೆಲ್ಲುವ ಪೈಪೋಟಿಗೆ ಬಿದ್ದಿದ್ದಾರೆ.</p>.<p><strong>ಏನಿದು ಟ್ವಿಸ್ಟ್?: </strong>ಕ್ಯಾಪ್ಟನ್ ಅರವಿಂದ್ ಸೇರಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡಕ್ಕೆ ಕೆ.ಪಿ. ಅರವಿಂದ್ ಮತ್ತು ಮತ್ತೊಂದು ತಂಡಕ್ಕೆ ಮಂಜು ಪಾವಗಡ ಅವರು ನಾಯಕರಾಗಿದ್ದಾರೆ. ತಲಾ 5 ಸದಸ್ಯರಿರುವ ತಂಡ ಆಗಾಗ್ಗೆ ಬಿಗ್ ಬಾಸ್ ಕೊಡುವ ಟಾಸ್ಕ್ಗಳನ್ನು ಗೆದ್ದು ವಿಜಯದಂಡ ಪಡೆಯಬೇಕು. ಅಂತಿಮವಾಗಿ, ಅತಿ ಹೆಚ್ಚು ದಂಡ ಪಡೆದ ತಂಡ ಎಲಿಮಿನೇಶನ್ನಿಂದ ಪಾರಾಗಲಿದೆ. ಸೋತ ತಂಡದ ಒಬ್ಬ ಸದಸ್ಯ ಈ ವಾರಾಂತ್ಯದಲ್ಲಿ ವೀಕ್ಷಕರ ಮತಗಳ ಆಧಾರದ ಮೇಲೆ ಎಲಿಮಿನೇಟ್ ಅಗುತ್ತಾರೆ.<br /><br /><strong>ತಲಾ 4 ದಂಡ ಪಡೆದಿರುವ ತಂಡಗಳು: </strong>ಬುಧವಾರದ ಹೊತ್ತಿಗೆ ಮಂಜು ಪಾವಗಡ ನೇತೃತ್ವದ ‘ನಿಂಗೈತೆಇರು’ ತಂಡ ಮತ್ತು ಕೆ.ಪಿ ಅರವಿಂದ್ ಅವರ ‘ವಿಜಯಯಾತ್ರೆ’ ತಂಡ ತಲಾ 4 ದಂಡಗಳನ್ನು ಗೆದ್ದಿದ್ದು, ಸಮಬಲ ಸಾಧಿಸಿವೆ. ಹೀಗಾಗಿ, ಮನೆಯ ಟಾಸ್ಕ್ಗಳು ಮತ್ತಷ್ಟು ಕಾವು ಪಡೆದಿವೆ. ಈ ಹಿಂದೆ ಟಾಸ್ಕ್ ಗೆದ್ದಾಗ ನಾಯಕರಾಗುವ ಆಯ್ಕೆ ಕೊಡುತ್ತಿದ್ದ ಬಿಗ್ ಬಾಸ್ ಈ ಬಾರಿ ಎಲಿಮಿನೆಶನ್ನಿನಿಂದ ಸೇಫ್ ಆಗುವ ಅವಕಾಶ ನೀಡಿರುವುದು ಇದಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಗ್ ಬಾಸ್ ಎರಡನೇ ಇನಿಂಗ್ಸ್ನ 4ನೇ ವಾರ ನಾಮಿನೇಟ್ ಆದ ಮನೆಯ ಸದಸ್ಯರಿಗೆ ಎಲಿಮಿನೇಶನ್ ತಪ್ಪಿಸಿಕೊಳ್ಳಲು ಬಿಗ್ ಬಾಸ್, ಹೊಸ ಆಯ್ಕೆ ನೀಡಿದ್ದಾರೆ. ಹಾಗಾಗಿ, ಎಲಿಮಿನೇಶನ್ನಿಂದ ಪಾರಾಗಲು ಎಲ್ಲ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗೆಲ್ಲುವ ಪೈಪೋಟಿಗೆ ಬಿದ್ದಿದ್ದಾರೆ.</p>.<p><strong>ಏನಿದು ಟ್ವಿಸ್ಟ್?: </strong>ಕ್ಯಾಪ್ಟನ್ ಅರವಿಂದ್ ಸೇರಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡಕ್ಕೆ ಕೆ.ಪಿ. ಅರವಿಂದ್ ಮತ್ತು ಮತ್ತೊಂದು ತಂಡಕ್ಕೆ ಮಂಜು ಪಾವಗಡ ಅವರು ನಾಯಕರಾಗಿದ್ದಾರೆ. ತಲಾ 5 ಸದಸ್ಯರಿರುವ ತಂಡ ಆಗಾಗ್ಗೆ ಬಿಗ್ ಬಾಸ್ ಕೊಡುವ ಟಾಸ್ಕ್ಗಳನ್ನು ಗೆದ್ದು ವಿಜಯದಂಡ ಪಡೆಯಬೇಕು. ಅಂತಿಮವಾಗಿ, ಅತಿ ಹೆಚ್ಚು ದಂಡ ಪಡೆದ ತಂಡ ಎಲಿಮಿನೇಶನ್ನಿಂದ ಪಾರಾಗಲಿದೆ. ಸೋತ ತಂಡದ ಒಬ್ಬ ಸದಸ್ಯ ಈ ವಾರಾಂತ್ಯದಲ್ಲಿ ವೀಕ್ಷಕರ ಮತಗಳ ಆಧಾರದ ಮೇಲೆ ಎಲಿಮಿನೇಟ್ ಅಗುತ್ತಾರೆ.<br /><br /><strong>ತಲಾ 4 ದಂಡ ಪಡೆದಿರುವ ತಂಡಗಳು: </strong>ಬುಧವಾರದ ಹೊತ್ತಿಗೆ ಮಂಜು ಪಾವಗಡ ನೇತೃತ್ವದ ‘ನಿಂಗೈತೆಇರು’ ತಂಡ ಮತ್ತು ಕೆ.ಪಿ ಅರವಿಂದ್ ಅವರ ‘ವಿಜಯಯಾತ್ರೆ’ ತಂಡ ತಲಾ 4 ದಂಡಗಳನ್ನು ಗೆದ್ದಿದ್ದು, ಸಮಬಲ ಸಾಧಿಸಿವೆ. ಹೀಗಾಗಿ, ಮನೆಯ ಟಾಸ್ಕ್ಗಳು ಮತ್ತಷ್ಟು ಕಾವು ಪಡೆದಿವೆ. ಈ ಹಿಂದೆ ಟಾಸ್ಕ್ ಗೆದ್ದಾಗ ನಾಯಕರಾಗುವ ಆಯ್ಕೆ ಕೊಡುತ್ತಿದ್ದ ಬಿಗ್ ಬಾಸ್ ಈ ಬಾರಿ ಎಲಿಮಿನೆಶನ್ನಿನಿಂದ ಸೇಫ್ ಆಗುವ ಅವಕಾಶ ನೀಡಿರುವುದು ಇದಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>