ಶುಕ್ರವಾರ, ಮಾರ್ಚ್ 31, 2023
23 °C

Bigg Boss 8: ಎಲಿಮಿನೇಶನ್‌ನಿಂದ ಪಾರಾಗಲು ‘ವಿಜಯದಂಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಎರಡನೇ ಇನಿಂಗ್ಸ್‌ನ 4ನೇ ವಾರ ನಾಮಿನೇಟ್ ಆದ ಮನೆಯ ಸದಸ್ಯರಿಗೆ ಎಲಿಮಿನೇಶನ್ ತಪ್ಪಿಸಿಕೊಳ್ಳಲು ಬಿಗ್ ಬಾಸ್, ಹೊಸ ಆಯ್ಕೆ ನೀಡಿದ್ದಾರೆ. ಹಾಗಾಗಿ, ಎಲಿಮಿನೇಶನ್‌ನಿಂದ ಪಾರಾಗಲು ಎಲ್ಲ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಗೆಲ್ಲುವ ಪೈಪೋಟಿಗೆ ಬಿದ್ದಿದ್ದಾರೆ.

ಏನಿದು ಟ್ವಿಸ್ಟ್?: ಕ್ಯಾಪ್ಟನ್ ಅರವಿಂದ್ ಸೇರಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡಕ್ಕೆ ಕೆ.ಪಿ. ಅರವಿಂದ್ ಮತ್ತು ಮತ್ತೊಂದು ತಂಡಕ್ಕೆ ಮಂಜು ಪಾವಗಡ ಅವರು ನಾಯಕರಾಗಿದ್ದಾರೆ. ತಲಾ 5 ಸದಸ್ಯರಿರುವ ತಂಡ ಆಗಾಗ್ಗೆ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಗೆದ್ದು ವಿಜಯದಂಡ ಪಡೆಯಬೇಕು. ಅಂತಿಮವಾಗಿ, ಅತಿ ಹೆಚ್ಚು ದಂಡ ಪಡೆದ ತಂಡ ಎಲಿಮಿನೇಶನ್‌ನಿಂದ ಪಾರಾಗಲಿದೆ. ಸೋತ ತಂಡದ ಒಬ್ಬ ಸದಸ್ಯ ಈ ವಾರಾಂತ್ಯದಲ್ಲಿ ವೀಕ್ಷಕರ ಮತಗಳ ಆಧಾರದ ಮೇಲೆ ಎಲಿಮಿನೇಟ್ ಅಗುತ್ತಾರೆ.
  
ತಲಾ 4 ದಂಡ ಪಡೆದಿರುವ ತಂಡಗಳು: ಬುಧವಾರದ ಹೊತ್ತಿಗೆ ಮಂಜು ಪಾವಗಡ ನೇತೃತ್ವದ ‘ನಿಂಗೈತೆ ಇರು’ ತಂಡ ಮತ್ತು ಕೆ.ಪಿ ಅರವಿಂದ್ ಅವರ ‘ವಿಜಯಯಾತ್ರೆ’ ತಂಡ ತಲಾ 4 ದಂಡಗಳನ್ನು ಗೆದ್ದಿದ್ದು, ಸಮಬಲ ಸಾಧಿಸಿವೆ. ಹೀಗಾಗಿ, ಮನೆಯ ಟಾಸ್ಕ್‌ಗಳು ಮತ್ತಷ್ಟು ಕಾವು ಪಡೆದಿವೆ. ಈ ಹಿಂದೆ ಟಾಸ್ಕ್ ಗೆದ್ದಾಗ ನಾಯಕರಾಗುವ ಆಯ್ಕೆ ಕೊಡುತ್ತಿದ್ದ ಬಿಗ್ ಬಾಸ್ ಈ ಬಾರಿ ಎಲಿಮಿನೆಶನ್ನಿನಿಂದ ಸೇಫ್ ಆಗುವ ಅವಕಾಶ ನೀಡಿರುವುದು ಇದಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು