ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ಪಾರು’ ಸಾವಿರಸಂಚಿಕೆಗಳನ್ನುಪೂರೈಸುತ್ತಿದೆ.
ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಸಾದ್, ಪಾರು ಪಾತ್ರದ ಮೋಕ್ಷಿತಾ ಪೈ, ಆದಿ ಪಾತ್ರದ ಶರತ್, ವೀರಯ್ಯ ದೇವನಾಗಿ ಕಾಣಿಸಿಕೊಂಡ ಎಸ್.ನಾರಾಯಣ್, ನಾಗೇಂದ್ರ ಶಾ ಅವರ ತಾರಾಗಣ ವೀಕ್ಷಕರನ್ನು ರಂಜಿಸುತ್ತಲೇ ಸಾಗಿದೆ.
ವಿನೂತನ ನಿರೂಪಣೆಯ ಶೈಲಿಯ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ಪಾರು ಧಾರಾವಾಹಿ ತನ್ನ ಅದ್ಧೂರಿತನವನ್ನು ಎಲ್ಲಿಯೂ ಬಿಟ್ಟಿಲ್ಲ. ಅದ್ಧೂರಿ ಸೆಟ್, ಭವ್ಯ ಬಂಗಲೆ, ಪ್ರತಿದೃಶ್ಯದ ಸಿರಿವಂತಿಕೆವೀಕ್ಷಕರಿಗೆ ಸಿನಿಮಾದ ಅನುಭವ ನೀಡುವ ಪ್ರಯತ್ನ ಮಾಡಿದೆ.
ಪ್ರೀತಿ, ಸ್ನೇಹ , ಕಾಳಜಿ, ಆದರ್ಶ ಮತ್ತು ಮನೋರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 1000 ಸಂಚಿಕೆಗಳನ್ನುಪೂರೈಸುತ್ತಿರುವಹೊತ್ತಿನಲ್ಲಿಅಖಿಲಾಂಡೇಶ್ವರಿಯುಪಾರುವನ್ನುಸೊಸೆಯಾಗಿಒಪ್ಪಿಕೊಳ್ಳುವಹಂತದಲ್ಲಿದೆ. ಮುಂದಿನಕಥೆಯಾವರೀತಿಯಲ್ಲಿತಿರುವುಪಡೆದುಕೊಳ್ಳಲಿದೆಎಂಬ ಕುತೂಹಲ ಉಳಿದಿದೆ.
ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ, ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಮತ್ತು ಗುರುಪ್ರಸಾದ್ಮುಡೇನಹಳ್ಳಿಅವರು ನಿರ್ದೇಶನ ಮಾಡುತ್ತಿದ್ದಾರೆ.
ಸೋಮವಾರದಿಂದ– ಶುಕ್ರವಾರದವರೆಗೂಪ್ರತಿದಿನಸಂಜೆ6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.