<p>ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯಲ್ಲಿ 3ನೇ ರನ್ನರ್ ಅಪ್ ಆಗಿರುವ ಕಾವ್ಯ ಶೈವ ಅವರು ನಟ ಸುದೀಪ್ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾವ್ಯ ಅವರು, ಸುದೀಪ್ ಜತೆಗಿನ ಫೋಟೊ ಮತ್ತು ಬಿಗ್ಬಾಸ್ ಮನೆಯಿಲ್ಲಿದ್ದಾಗ ಸುದೀಪ್ ಅವರು ನೀಡಿದ್ದ ಪತ್ರದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. </p>.‘...ಅಶೋಕ’ನ ಹೊಸ ಹಾಡು.ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ .<p>ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೊನೆಯ ವಾರದಲ್ಲಿ ಸುದೀಪ್ ಅವರು ಪತ್ರಗಳನ್ನು ನೀಡುತ್ತಾರೆ. ಈ ಬಾರಿ ಕಾವ್ಯ ಅವರಿಗೆ ಬರೆದ ಪತ್ರದಲ್ಲಿ ‘Hey Kaav.. ohh sorry.. Sorry.. Hello Kavya... ಕಲ್ಲು ತೂರಾಟದಿಂದ ಏನಾಗಬಹುದು… ಸಾಯುವುದಿಲ್ಲ. ಸಾಧನೆಯು ನಿಲ್ಲುವುದಿಲ್ಲ’ ಎಂದು ಬರೆದಿರುವ ಪತ್ರವನ್ನು ಕಾವ್ಯ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.</p><p>ಕಿಚ್ಚನ ಜೊತೆಗಿನ ಫೋಟೊ ಹಂಚಿಕೊಂಡ ಕಾವ್ಯ ಅವರು, 'ಬಿಗ್ಬಾಸ್ ಸಂಪೂರ್ಣ ಪ್ರಯಾಣದಲ್ಲಿ ನೀವು ನೀಡಿದ ಎಲ್ಲಾ ಮಾರ್ಗದರ್ಶನಕ್ಕೆ ಧನ್ಯವಾದಗಳು. ನಿಮ್ಮ ಪತ್ರವು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ’ ಎಂದು ಬರೆದುಕೊಳ್ಳುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯಲ್ಲಿ 3ನೇ ರನ್ನರ್ ಅಪ್ ಆಗಿರುವ ಕಾವ್ಯ ಶೈವ ಅವರು ನಟ ಸುದೀಪ್ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ. </p><p>ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾವ್ಯ ಅವರು, ಸುದೀಪ್ ಜತೆಗಿನ ಫೋಟೊ ಮತ್ತು ಬಿಗ್ಬಾಸ್ ಮನೆಯಿಲ್ಲಿದ್ದಾಗ ಸುದೀಪ್ ಅವರು ನೀಡಿದ್ದ ಪತ್ರದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. </p>.‘...ಅಶೋಕ’ನ ಹೊಸ ಹಾಡು.ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಮನಸೋತ ಶಿವಣ್ಣ .<p>ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೊನೆಯ ವಾರದಲ್ಲಿ ಸುದೀಪ್ ಅವರು ಪತ್ರಗಳನ್ನು ನೀಡುತ್ತಾರೆ. ಈ ಬಾರಿ ಕಾವ್ಯ ಅವರಿಗೆ ಬರೆದ ಪತ್ರದಲ್ಲಿ ‘Hey Kaav.. ohh sorry.. Sorry.. Hello Kavya... ಕಲ್ಲು ತೂರಾಟದಿಂದ ಏನಾಗಬಹುದು… ಸಾಯುವುದಿಲ್ಲ. ಸಾಧನೆಯು ನಿಲ್ಲುವುದಿಲ್ಲ’ ಎಂದು ಬರೆದಿರುವ ಪತ್ರವನ್ನು ಕಾವ್ಯ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.</p><p>ಕಿಚ್ಚನ ಜೊತೆಗಿನ ಫೋಟೊ ಹಂಚಿಕೊಂಡ ಕಾವ್ಯ ಅವರು, 'ಬಿಗ್ಬಾಸ್ ಸಂಪೂರ್ಣ ಪ್ರಯಾಣದಲ್ಲಿ ನೀವು ನೀಡಿದ ಎಲ್ಲಾ ಮಾರ್ಗದರ್ಶನಕ್ಕೆ ಧನ್ಯವಾದಗಳು. ನಿಮ್ಮ ಪತ್ರವು ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ’ ಎಂದು ಬರೆದುಕೊಳ್ಳುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>