ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿ, ‘ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳಲು ʻಮಹಾನಾಯಕ ಅಂಬೇಡ್ಕರ್ʼ ಧಾರಾವಾಹಿ ಮುಂದಾಗಿದೆ. ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು. ಇದೀಗ ‘ಮಹಾನಾಯಕ ಅಂಬೇಡ್ಕರ್’ ರವರ ಜೀವನದ ವಿನೂತನ ವಿವರಗಳು ಮೂಡಿಬರಲಿವೆ’ ಎಂದು ಹೇಳಿದರು.