<p><strong>ಬೆಂಗಳೂರು</strong>: ಸೂಪರ್ ಸ್ಟಾರ್ ನಾಗಾರ್ಜುನ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತೆಲುಗು ಸೀಸನ್ 8 ಡಿಸೆಂಬರ್ 15ಕ್ಕೆ ಕೊನೆಗೊಂಡಿತು. ಭಾನುವಾರ ನಡೆದ ಫಿನಾಲೆಯಲ್ಲಿ ಕರ್ನಾಟಕ ಮೂಲದ ತೆಲುಗು ನಟ ನಿಖಿಲ್ ಮಲಿಯಕ್ಕಲ್ ಪ್ರಥಮ ಬಹುಮಾನ ಪಡೆದು ಬಿಗ್ ಬಾಸ್ ಟ್ರೋಫಿ, 55 ಲಕ್ಷ ನಗದು ಬಹುಮಾನ ಮತ್ತು ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.</p><p>ರಾಮ್ ಚರಣ್ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಿರುವ ಅವರು ಸಂಪೂರ್ಣ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಬರಿಗಾಲಿನಲ್ಲಿ ವೇದಿಕೆಗೆ ತೆರಳಿ ಅವರ ಮುಂಬರುವ ‘ಗೇಮ್ ಚೇಂಜರ್’ ಚಿತ್ರವನ್ನು ಪ್ರಚಾರ ಮಾಡಿದರು.</p><p>ಈ ಬಾರಿ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ಟ್ವಿಸ್ಟ್ ಇಡಲಾಗಿತ್ತು, ಫೈನಲ್ಗೆ ಬಂದಿದ್ದ ಇಬ್ಬರು ಸ್ಪರ್ಧಿಗಳಾದ ನಿಖಿಲ್ ಮಲಿಯಕ್ಕಲ್ ಮತ್ತು ಗೌತಮ್ ಕೃಷ್ಣ ಅವರಿಗೆ ವಿಶೇಷ ಅವಕಾಶ ನೀಡಲಾಯಿತು. ಫೈನಲಿಸ್ಟ್ಗಳ ಪೈಕಿ ಒಬ್ಬರು ₹55 ಲಕ್ಷ ಬಹುಮಾನದ ಮೊತ್ತವನ್ನು ಆಯ್ಕೆ ಮಾಡಬಹುದು, ಇನ್ನೊಬ್ಬರು ಟ್ರೋಫಿ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂಬ ಆಫರ್ ನೀಡಲಾಯಿತು. ಆದರೆ ಅಂತಿಮ ಸ್ಪರ್ಧಿಗಳಿಬ್ಬರೂ ಆಫರ್ ಅನ್ನು ನಿರಾಕರಿಸಿದರು.</p><p>ಅಂತಿಮವಾಗಿ ರಾಮ್ ಚರಣ್ ನಿಖಿಲ್ ಮಲಿಯಕ್ಕಲ್ರನ್ನು ಬಿಗ್ ಬಾಸ್ ತೆಲುಗು ಸೀಸನ್ 8ರ ವಿನ್ನರ್ ಮತ್ತು ಗೌತಮ್ ಕೃಷ್ಣ ಮೊದಲ ರನ್ನರ್ ಅಪ್ ಎಂದು ಘೋಷಿಸಿದರು.</p><p>ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ತಮ್ಮ ಗೆಲುವನ್ನು ಅರ್ಪಿಸಿ ಇನ್ಸ್ಟಾಗ್ರಾಮ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.</p><p>105 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ನಬೀಲ್, ಪ್ರೇರಣಾ ಮತ್ತು ಅವಿನಾಶ್ ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ರನ್ನರ್–ಅಪ್ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸೂಪರ್ ಸ್ಟಾರ್ ನಾಗಾರ್ಜುನ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ತೆಲುಗು ಸೀಸನ್ 8 ಡಿಸೆಂಬರ್ 15ಕ್ಕೆ ಕೊನೆಗೊಂಡಿತು. ಭಾನುವಾರ ನಡೆದ ಫಿನಾಲೆಯಲ್ಲಿ ಕರ್ನಾಟಕ ಮೂಲದ ತೆಲುಗು ನಟ ನಿಖಿಲ್ ಮಲಿಯಕ್ಕಲ್ ಪ್ರಥಮ ಬಹುಮಾನ ಪಡೆದು ಬಿಗ್ ಬಾಸ್ ಟ್ರೋಫಿ, 55 ಲಕ್ಷ ನಗದು ಬಹುಮಾನ ಮತ್ತು ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.</p><p>ರಾಮ್ ಚರಣ್ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಿರುವ ಅವರು ಸಂಪೂರ್ಣ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಬರಿಗಾಲಿನಲ್ಲಿ ವೇದಿಕೆಗೆ ತೆರಳಿ ಅವರ ಮುಂಬರುವ ‘ಗೇಮ್ ಚೇಂಜರ್’ ಚಿತ್ರವನ್ನು ಪ್ರಚಾರ ಮಾಡಿದರು.</p><p>ಈ ಬಾರಿ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ಟ್ವಿಸ್ಟ್ ಇಡಲಾಗಿತ್ತು, ಫೈನಲ್ಗೆ ಬಂದಿದ್ದ ಇಬ್ಬರು ಸ್ಪರ್ಧಿಗಳಾದ ನಿಖಿಲ್ ಮಲಿಯಕ್ಕಲ್ ಮತ್ತು ಗೌತಮ್ ಕೃಷ್ಣ ಅವರಿಗೆ ವಿಶೇಷ ಅವಕಾಶ ನೀಡಲಾಯಿತು. ಫೈನಲಿಸ್ಟ್ಗಳ ಪೈಕಿ ಒಬ್ಬರು ₹55 ಲಕ್ಷ ಬಹುಮಾನದ ಮೊತ್ತವನ್ನು ಆಯ್ಕೆ ಮಾಡಬಹುದು, ಇನ್ನೊಬ್ಬರು ಟ್ರೋಫಿ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂಬ ಆಫರ್ ನೀಡಲಾಯಿತು. ಆದರೆ ಅಂತಿಮ ಸ್ಪರ್ಧಿಗಳಿಬ್ಬರೂ ಆಫರ್ ಅನ್ನು ನಿರಾಕರಿಸಿದರು.</p><p>ಅಂತಿಮವಾಗಿ ರಾಮ್ ಚರಣ್ ನಿಖಿಲ್ ಮಲಿಯಕ್ಕಲ್ರನ್ನು ಬಿಗ್ ಬಾಸ್ ತೆಲುಗು ಸೀಸನ್ 8ರ ವಿನ್ನರ್ ಮತ್ತು ಗೌತಮ್ ಕೃಷ್ಣ ಮೊದಲ ರನ್ನರ್ ಅಪ್ ಎಂದು ಘೋಷಿಸಿದರು.</p><p>ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ತಮ್ಮ ಗೆಲುವನ್ನು ಅರ್ಪಿಸಿ ಇನ್ಸ್ಟಾಗ್ರಾಮ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.</p><p>105 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ನಬೀಲ್, ಪ್ರೇರಣಾ ಮತ್ತು ಅವಿನಾಶ್ ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ರನ್ನರ್–ಅಪ್ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>