ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರವಾದ ಬಳಿಕ ಅವರವಿಂದ್ ತ್ರಿವೇದಿ ಟ್ವಿಟರ್ ಖಾತೆ ತೆರೆದಿದ್ದಾರೆ. ಸುಳ್ಳು ಸುದ್ದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು'ಯಾರೊಬ್ಬರ ಸಾವಿನ ಬಗ್ಗೆ ನಿಖರವಾಗಿ ಪರಿಶೀಲಿಸದೇ ಸುದ್ದಿ ಹರಡುವುದು ತಪ್ಪು. ಈ ಬಗ್ಗೆ ಕ್ಷಮೆಯಾಚಿಸಿ, ಆ ಟ್ವೀಟ್ ಅನ್ನು ಅಳಿಸಿ ಹಾಕಿ' ಎಂದು ಟ್ವೀಟ್ ಮಾಡಿದ್ದಾರೆ.