ಮುಂಬೆಳಕು ಹೊತ್ತಿಹುದು, ಮಂದಿ ಮುಸುಕನು ಮಥಿಸಿ, ಹೊಂಗಿರಣ ಹೂ ಚೆಲ್ಲಿ, ಏರುತಿದೆ ಹಬೆಯು; ಆ ಗಾಜಲೋಟ, ಏನದರ ಮಾಟ, ಅದರೊಳಗೆ ಕುದಿಯುತಿದೆ ಕಾಫಿ, ಮುಂಜಾವ ಸಂತೈಸೊ ಕಾಫಿ ಎಂದು ಆರಂಭವಾಗುವ ಕಾಫಿಗೀತೆ ಒತ್ತಡ ನಿವಾರಣೆಗೆ, ಪ್ರೇಮ ನಿವೇದನೆಗೆ, ಒಗ್ಗಟ್ಟಿನ ಬಲಕ್ಕೆ ಪೂರಕವಾಗಿ ಜನ ಮನದ ಅಸ್ವಾದನೆಗೆ ಸಂಗಾತಿಯಾಗುವುದು ಎಂಬುದು ಕವಿಯ ಕಲ್ಪನೆ.