<p>‘ಕಾಫಿ’..ವಿಶ್ವದ ಜನಪ್ರಿಯ ಪೇಯ. ಜನರ ಸಾಮೀಪ್ಯಗಳಿಸಿ ಬಾಂಧವ್ಯಗಳನ್ನು ಬೆಸೆಯುವಲ್ಲಿ, ಪ್ರೇಮವನ್ನು ಗಟ್ಟಿಗೊಳಿಸುವಲ್ಲಿ ‘ಕಾಫಿ’ ಕೈವಾಡವಿದೆ. ಪದ್ಮನಾಭನಗರದ ಒಂದಷ್ಟು ಗೆಳೆಯರು ಸೇರಿ ಈ ಕುರಿತ ದೃಶ್ಯಕಾವ್ಯವನ್ನು ಸಿದ್ಧಗೊಳಿಸಿದ್ದಾರೆ. ಬಹುರಾಷ್ಟ್ರೀಯ ಬ್ಯಾಂಕ್ ಉದ್ಯೋಗಿ ಅ.ರಾ.ತೇಜಸ್ ‘ಕಾಫಿ’ ಕುರಿತು ಬರೆದಿರುವ ಕವನಕ್ಕೆ ಗೆಳೆಯರು ಸೇರಿ ದೃಶ್ಯ ರೂಪ ನೀಡಿದ್ದಾರೆ.</p>.<p>ಮುಂಬೆಳಕು ಹೊತ್ತಿಹುದು, ಮಂದಿ ಮುಸುಕನು ಮಥಿಸಿ, ಹೊಂಗಿರಣ ಹೂ ಚೆಲ್ಲಿ, ಏರುತಿದೆ ಹಬೆಯು; ಆ ಗಾಜಲೋಟ, ಏನದರ ಮಾಟ, ಅದರೊಳಗೆ ಕುದಿಯುತಿದೆ ಕಾಫಿ, ಮುಂಜಾವ ಸಂತೈಸೊ ಕಾಫಿ ಎಂದು ಆರಂಭವಾಗುವ ಕಾಫಿಗೀತೆ ಒತ್ತಡ ನಿವಾರಣೆಗೆ, ಪ್ರೇಮ ನಿವೇದನೆಗೆ, ಒಗ್ಗಟ್ಟಿನ ಬಲಕ್ಕೆ ಪೂರಕವಾಗಿ ಜನ ಮನದ ಅಸ್ವಾದನೆಗೆ ಸಂಗಾತಿಯಾಗುವುದು ಎಂಬುದು ಕವಿಯ ಕಲ್ಪನೆ.</p>.<p>ಪೂರಕವಾಗುವಂತಹ ದೃಶ್ಯಗಳನ್ನು ಸೆರೆ ಹಿಡಿದು ‘ಭಾವ ಮಂದಾರ ಕ್ರಿಯೇಷನ್ಸ್’ ಸಂಸ್ಥೆಗಾಗಿ ಚಿತ್ರಿಸಿರುವ ಈ ಕಾಫಿ ಚಿತ್ರದ ಸಾಹಿತ್ಯ, ಛಾಯಾಗ್ರಹಣ ಹಾಗೂ ನಿರ್ದೇಶನ ಅ.ರಾ.ತೇಜಸ್.</p>.<p>ಪೂಜಾ ಐತಾಳ್ ತೇಜಸ್ ನಿರ್ದೇಶನ ಸಹಕಾರ ನೀಡಿದ್ದಾರೆ. ಶ್ರೀಕರ ಎಲಮೇಲಿ ನಿರ್ಮಾಣ ಮಾಡಿರುವ ದೃಶ್ಯಕಾವ್ಯದ ರಾಗ ಮತ್ತು ನಿರ್ವಹಣೆ ಎ.ಪಿ.ಶ್ರೇಯಸ್. ವಿವೇಕ್ ಗೋವಿಂದರಾಜು ಸಂಗೀತ ನೀಡಿದ್ದು, ಸಾಯಿ ಅರುಣ್ ಸಂಕಲನ ಮಾಡಿದ್ದಾರೆ.</p>.<p>ತೇಜಸ್ ಅವರ ನಿವಾಸದಲ್ಲಿ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ದೃಶ್ಯಕಾವ್ಯವನ್ನು ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ ಬಿಡುಗಡೆ ಮಾಡಿ ಶುಭ ಕೋರಿದರು. ಈಗಾಗಲೆ ಈ ದೃಶ್ಯಕಾವ್ಯ ಯೂಟ್ಯೂಬ್ನಲ್ಲಿದ್ದು, ನೋಡುಗರಿಂದ ಆಕರ್ಷಿತವಾಗುತ್ತಿದೆ.</p>.<p>ಲಿಂಕ್: https://www.youtube.com/watch?v=YzjHwAKrhKU⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕಾಫಿ’..ವಿಶ್ವದ ಜನಪ್ರಿಯ ಪೇಯ. ಜನರ ಸಾಮೀಪ್ಯಗಳಿಸಿ ಬಾಂಧವ್ಯಗಳನ್ನು ಬೆಸೆಯುವಲ್ಲಿ, ಪ್ರೇಮವನ್ನು ಗಟ್ಟಿಗೊಳಿಸುವಲ್ಲಿ ‘ಕಾಫಿ’ ಕೈವಾಡವಿದೆ. ಪದ್ಮನಾಭನಗರದ ಒಂದಷ್ಟು ಗೆಳೆಯರು ಸೇರಿ ಈ ಕುರಿತ ದೃಶ್ಯಕಾವ್ಯವನ್ನು ಸಿದ್ಧಗೊಳಿಸಿದ್ದಾರೆ. ಬಹುರಾಷ್ಟ್ರೀಯ ಬ್ಯಾಂಕ್ ಉದ್ಯೋಗಿ ಅ.ರಾ.ತೇಜಸ್ ‘ಕಾಫಿ’ ಕುರಿತು ಬರೆದಿರುವ ಕವನಕ್ಕೆ ಗೆಳೆಯರು ಸೇರಿ ದೃಶ್ಯ ರೂಪ ನೀಡಿದ್ದಾರೆ.</p>.<p>ಮುಂಬೆಳಕು ಹೊತ್ತಿಹುದು, ಮಂದಿ ಮುಸುಕನು ಮಥಿಸಿ, ಹೊಂಗಿರಣ ಹೂ ಚೆಲ್ಲಿ, ಏರುತಿದೆ ಹಬೆಯು; ಆ ಗಾಜಲೋಟ, ಏನದರ ಮಾಟ, ಅದರೊಳಗೆ ಕುದಿಯುತಿದೆ ಕಾಫಿ, ಮುಂಜಾವ ಸಂತೈಸೊ ಕಾಫಿ ಎಂದು ಆರಂಭವಾಗುವ ಕಾಫಿಗೀತೆ ಒತ್ತಡ ನಿವಾರಣೆಗೆ, ಪ್ರೇಮ ನಿವೇದನೆಗೆ, ಒಗ್ಗಟ್ಟಿನ ಬಲಕ್ಕೆ ಪೂರಕವಾಗಿ ಜನ ಮನದ ಅಸ್ವಾದನೆಗೆ ಸಂಗಾತಿಯಾಗುವುದು ಎಂಬುದು ಕವಿಯ ಕಲ್ಪನೆ.</p>.<p>ಪೂರಕವಾಗುವಂತಹ ದೃಶ್ಯಗಳನ್ನು ಸೆರೆ ಹಿಡಿದು ‘ಭಾವ ಮಂದಾರ ಕ್ರಿಯೇಷನ್ಸ್’ ಸಂಸ್ಥೆಗಾಗಿ ಚಿತ್ರಿಸಿರುವ ಈ ಕಾಫಿ ಚಿತ್ರದ ಸಾಹಿತ್ಯ, ಛಾಯಾಗ್ರಹಣ ಹಾಗೂ ನಿರ್ದೇಶನ ಅ.ರಾ.ತೇಜಸ್.</p>.<p>ಪೂಜಾ ಐತಾಳ್ ತೇಜಸ್ ನಿರ್ದೇಶನ ಸಹಕಾರ ನೀಡಿದ್ದಾರೆ. ಶ್ರೀಕರ ಎಲಮೇಲಿ ನಿರ್ಮಾಣ ಮಾಡಿರುವ ದೃಶ್ಯಕಾವ್ಯದ ರಾಗ ಮತ್ತು ನಿರ್ವಹಣೆ ಎ.ಪಿ.ಶ್ರೇಯಸ್. ವಿವೇಕ್ ಗೋವಿಂದರಾಜು ಸಂಗೀತ ನೀಡಿದ್ದು, ಸಾಯಿ ಅರುಣ್ ಸಂಕಲನ ಮಾಡಿದ್ದಾರೆ.</p>.<p>ತೇಜಸ್ ಅವರ ನಿವಾಸದಲ್ಲಿ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ದೃಶ್ಯಕಾವ್ಯವನ್ನು ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ ಬಿಡುಗಡೆ ಮಾಡಿ ಶುಭ ಕೋರಿದರು. ಈಗಾಗಲೆ ಈ ದೃಶ್ಯಕಾವ್ಯ ಯೂಟ್ಯೂಬ್ನಲ್ಲಿದ್ದು, ನೋಡುಗರಿಂದ ಆಕರ್ಷಿತವಾಗುತ್ತಿದೆ.</p>.<p>ಲಿಂಕ್: https://www.youtube.com/watch?v=YzjHwAKrhKU⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>