ದುಬಾರೆ ಶಿಬಿರದಲ್ಲಿನ ಸಾಕಾನೆಗಳು, ಮದವೇರಿದ ಸಂದರ್ಭದಲ್ಲಿ ಕಾಡಿಗೆ ತೆರಳಿ ಹೆಣ್ಣಾನೆ ಸಂಗ ಮಾಡಿ ವಾಪಸ್ಸಾಗುವುದು ಸಾಮಾನ್ಯ. ಆದರೆ, ’ಕುಶ’ ಮಾತ್ರ ವಾಪಸ್ಸಾಗಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯ ಫಲವಾಗಿ, ಆ ಆನೆಯನ್ನು ಸೆರೆ ಹಿಡಿಯಲಾಗಿದ್ದು, ಬುಧವಾರ ಮತ್ತೆ ಶಿಬಿರಕ್ಕೆ ಕರೆತರಲಾಗಿದೆ.