1027 ಚದರ ಕಿ. ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಾವೇರಿ ಅಭಯಾರಣ್ಯ,ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಖ್ಯಾತಿ ಹೊಂದಿದೆ. ಜೇನು ಹಿರ್ಕ (ಹನಿ ಬ್ಯಾಡ್ಜರ್), ಕೃಷ್ಣಮೃಗ, ಮಾಷಿರ್ ಫಿಶ್ ಸೇರಿದಂತೆ ಹಲವು ಅಪರೂಪದ ಪ್ರಾಣಿಗಳು ಇಲ್ಲಿ ಕಂಡು ಬಂದಿದ್ದು, ಈಗ ಬೆಟ್ಟಳಿಲು ಕೂಡ ಈ ಸಾಲಿಗೆ ಸೇರಿದೆ.