<p><strong>ಬೆಂಗಳೂರು:</strong> ಜನವಸತಿ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳುಗಳು ಅಪಾಯ ಎದುರಿಸುತ್ತಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ರಾಜ್ಯದಲ್ಲಿ 2009ರಿಂದ 2020ರ ಅವಧಿಯಲ್ಲಿ 113 ಚಿರತೆಗಳು ತಂತಿ ಉರುಳಿಗೆ ಸಿಲುಕಿದ್ದು, 67 ಚಿರತೆಗಳು ಸಾವಿಗೀಡಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ನೇಚರ್ ಕನ್ಸರ್ವೇಟಿವ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ, ಅಪರ್ಣಾ ಕೊಳೆಕರ್ ಮತ್ತು ಡಾ.ವಿಜಯ ಕುಮಾರ್ ಅವರು ಈ ಕುರಿತು ಸಂಶೋಧನೆ ನಡೆಸಿದ್ದು, ಅಧ್ಯಯನ ವರದಿ ಬಿಡುಗಡೆ ಮಾಡಿದ್ದಾರೆ. ‘ಟ್ರಾಪಿಕಲ್ ಕನ್ಸರ್ವೇಶನ್ ಸೈನ್ಸ್’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.</p>.<p>ಮಾನವ ಪ್ರಾಬಲ್ಯವುಳ್ಳ ಪ್ರದೇಶಗಳಾದ, ಸಣ್ಣ ಕಾಡುಗಳು, ಅಡಿಕೆ ತೋಟ, ಜೋಳದ ಹೊಲ ಮತ್ತು ಕಬ್ಬಿನ ಗದ್ದೆಗಳಲ್ಲಿ ವ್ಯಾಪಕವಾಗಿ ಕಂಡುಬರುವ ಚಿರತೆಗಳು, ತಂತಿ ಉರುಳುಗಳಿಂದ ಅತಿ ಹೆಚ್ಚು ಅಪಾಯವನ್ನು ಎದುರಿಸುತ್ತಿವೆ ಎಂದು ವರದಿ ಹೇಳಿದೆ.</p>.<p>ಮಾನವ ಜನಸಂಖ್ಯೆಯ ಸಾಂದ್ರತೆಯು ಪ್ರತಿ ಚ.ಕಿ.ಮೀ.ಗೆ 225 ಜನಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳಿಗೆ ಸಿಲುಕುವ ಘಟನೆಗಳು ಹೆಚ್ಚಾಗಿವೆ ಎಂದೂ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.</p>.<p>ಹೆಚ್ಚಿನ ಪ್ರಕರಣಗಳಲ್ಲಿ, (ಶೇ 97.5) ಬೆಳೆಗಳನ್ನು ತಿನ್ನಲು ಬರುವ ಬಲಿಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಕಾಡುಹಂದಿಗಳನ್ನು ಬೇಟೆಯಾಡಲು ಅಳವಡಿಸಲಾಗಿದ್ದ ಉರುಳುಗಳಲ್ಲಿ ಚಿರತೆಗಳು ಬಲಿಪಶುವಾಗಿರುವುದು ಕಂಡು ಬಂದಿದೆ.</p>.<p>ಶೇಕಡಾ 50ರಷ್ಟು ಪ್ರಕರಣಗಳು ಮಳೆಗಾಲದಲ್ಲಿ ದಾಖಲಾಗಿದ್ದು, ಈ ಸಮಯದಲ್ಲಿ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಉರುಳುಗಳನ್ನು ಹೆಚ್ಚು ಅಳವಡಿಸಿರುವ ಕಾರಣ ಚಿರತೆಗಳು ಸಿಕ್ಕಿಹಾಕಿಕೊಂಡು ಸತ್ತಿರಬಹುದು ಎಂದೂ ವ್ಯಾಖ್ಯಾನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜನವಸತಿ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳುಗಳು ಅಪಾಯ ಎದುರಿಸುತ್ತಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ರಾಜ್ಯದಲ್ಲಿ 2009ರಿಂದ 2020ರ ಅವಧಿಯಲ್ಲಿ 113 ಚಿರತೆಗಳು ತಂತಿ ಉರುಳಿಗೆ ಸಿಲುಕಿದ್ದು, 67 ಚಿರತೆಗಳು ಸಾವಿಗೀಡಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ನೇಚರ್ ಕನ್ಸರ್ವೇಟಿವ್ ಫೌಂಡೇಷನ್ನ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ, ಅಪರ್ಣಾ ಕೊಳೆಕರ್ ಮತ್ತು ಡಾ.ವಿಜಯ ಕುಮಾರ್ ಅವರು ಈ ಕುರಿತು ಸಂಶೋಧನೆ ನಡೆಸಿದ್ದು, ಅಧ್ಯಯನ ವರದಿ ಬಿಡುಗಡೆ ಮಾಡಿದ್ದಾರೆ. ‘ಟ್ರಾಪಿಕಲ್ ಕನ್ಸರ್ವೇಶನ್ ಸೈನ್ಸ್’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.</p>.<p>ಮಾನವ ಪ್ರಾಬಲ್ಯವುಳ್ಳ ಪ್ರದೇಶಗಳಾದ, ಸಣ್ಣ ಕಾಡುಗಳು, ಅಡಿಕೆ ತೋಟ, ಜೋಳದ ಹೊಲ ಮತ್ತು ಕಬ್ಬಿನ ಗದ್ದೆಗಳಲ್ಲಿ ವ್ಯಾಪಕವಾಗಿ ಕಂಡುಬರುವ ಚಿರತೆಗಳು, ತಂತಿ ಉರುಳುಗಳಿಂದ ಅತಿ ಹೆಚ್ಚು ಅಪಾಯವನ್ನು ಎದುರಿಸುತ್ತಿವೆ ಎಂದು ವರದಿ ಹೇಳಿದೆ.</p>.<p>ಮಾನವ ಜನಸಂಖ್ಯೆಯ ಸಾಂದ್ರತೆಯು ಪ್ರತಿ ಚ.ಕಿ.ಮೀ.ಗೆ 225 ಜನಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಚಿರತೆಗಳು ಉರುಳಿಗೆ ಸಿಲುಕುವ ಘಟನೆಗಳು ಹೆಚ್ಚಾಗಿವೆ ಎಂದೂ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.</p>.<p>ಹೆಚ್ಚಿನ ಪ್ರಕರಣಗಳಲ್ಲಿ, (ಶೇ 97.5) ಬೆಳೆಗಳನ್ನು ತಿನ್ನಲು ಬರುವ ಬಲಿಪ್ರಾಣಿಗಳು, ಅದರಲ್ಲೂ ಮುಖ್ಯವಾಗಿ ಕಾಡುಹಂದಿಗಳನ್ನು ಬೇಟೆಯಾಡಲು ಅಳವಡಿಸಲಾಗಿದ್ದ ಉರುಳುಗಳಲ್ಲಿ ಚಿರತೆಗಳು ಬಲಿಪಶುವಾಗಿರುವುದು ಕಂಡು ಬಂದಿದೆ.</p>.<p>ಶೇಕಡಾ 50ರಷ್ಟು ಪ್ರಕರಣಗಳು ಮಳೆಗಾಲದಲ್ಲಿ ದಾಖಲಾಗಿದ್ದು, ಈ ಸಮಯದಲ್ಲಿ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಉರುಳುಗಳನ್ನು ಹೆಚ್ಚು ಅಳವಡಿಸಿರುವ ಕಾರಣ ಚಿರತೆಗಳು ಸಿಕ್ಕಿಹಾಕಿಕೊಂಡು ಸತ್ತಿರಬಹುದು ಎಂದೂ ವ್ಯಾಖ್ಯಾನಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>