<p>ಕೊರೊನಾ ಸೋಂಕು ಮನುಕುಲವನ್ನಷ್ಟೇ ಅಲ್ಲ, ಪ್ರಾಣಿ ಸಂಕುಲವನ್ನೂ ಕಾಡುತ್ತಿದೆ. ಲಾಕ್ಡೌನ್ ಅವಧಿಯಲ್ಲಿ ಸರಿಯಾದ ನೀರು, ಆಹಾರ ಸಿಗದೆ ಪ್ರಾಣಿ, ಪಕ್ಷಿಗಳಿಗೂ ಸಂಕಷ್ಟ ಎದುರಾಗಿದೆ.</p>.<p>ಅರಮನೆ ಮೈದಾನ, ಜಯಮಹಲ್ ಪ್ಯಾಲೇಸ್ ಮತ್ತುನಗರದ ಇತರ ಕಡೆಗಳಲ್ಲಿ ನಡೆಯುತ್ತಿದ್ದ ಮದುವೆ ದಿಬ್ಬಣ, ಮೆರವಣಿಗೆಯಲ್ಲಿ ವೈಯ್ಯಾರದಿಂದ ಹೆಜ್ಜೆ ಹಾಕುತ್ತ ಗಮನ ಸೆಳೆಯುತ್ತಿದ್ದ ಕುದುರೆಗಳ ಆಹಾರಕ್ಕೂ ಕೊರೊನಾ ಸಂಚಕಾರ ತಂದಿದೆ.</p>.<p>ಕೊರೊನಾದಿಂದಾಗಿ ಇಡೀ ದೇಶ ಲಾಕ್ಡೌನ್ ಆಗಿದೆ. ಮದುವೆ, ಜನ್ಮದಿನ, ಸಿನಿಮಾ ಬಿಡುಗಡೆಯಂತಹ ಮೊದಲಾದ ಅದ್ಧೂರಿ ಸಮಾರಂಭಗಳಿಗೆ ಸರಕಾರ ನಿರ್ಬಂಧ ಹೇರಿದೆ. ಇದರಿಂದ ಸಹಜವಾಗಿ ಸಾರೋಟ ಮತ್ತು ಕುದರೆ ಮಾಲೀಕರ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದು ಅಂತಿಮವಾಗಿ ಕುದುರೆಗಳ ಮೇಲೂ ಪರಿಣಾಮ ಬೀರಿದೆ.</p>.<p>ಕುದುರೆಗಳಿಗೆ ದುಬಾರಿ ಓಟ್ಸ್, ಹುರುಳಿಕಾಳು ಸೇರಿದಂತೆ ಮೇವು ಸಂಗ್ರಹಿಸುವುದು ಅವುಗಳ ಮಾಲೀಕರಿಗೆ ಸಮಸ್ಯೆಯಾಗಿದೆ. ಮೊದಲಿನಂತೆ ಪೌಷ್ಟಿಕಆಹಾರ ಸಿಗದೆ ಕುದುರೆಗಳು ಸೊರಗುತ್ತಿವೆ. ಕುದುರೆಗಳ ಮಾಲೀಕರು ಅಸಹಾಯಕರಾಗಿದ್ದಾರೆ.</p>.<p>ಇದನ್ನು ಮನಗಂಡ ಬೆಂಗಳೂರಿನಬನ್ನೇರುಘಟ್ಟ ರಸ್ತೆಯ ಆರ್ಆರ್ ಲೇಔಟ್ನಲ್ಲಿನ ‘ಸಮಭಾವ’ ಎಂಬ ಸ್ವಯಂಸೇವಾ ಸಂಸ್ಥೆಯು ‘ಓಟ್ಸ್ ಫಾರ್ ಎ ಕಾಸ್’ ಎಂಬ ಅಭಿಯಾನದ ಮೂಲಕ ಕುದುರೆಗಳಿಗೆ ಮೇವು ಸಂಗ್ರಹಿಸುತ್ತಿದೆ. ಸಂಕಷ್ಟದಲ್ಲಿರುವ ಕುದುರೆ ಮಾಲೀಕರನ್ನು ಸಂಪರ್ಕಿಸಿ ಕುದುರೆಗಳಿಗೆ ಅಗತ್ಯ ಆಹಾರ ವಿತರಿಸುತ್ತಿದೆ. ಲಾಕ್ಡೌನ್ನಲ್ಲಿ ನಗರದ ಬಿಡಾಡಿ ಕುದುರೆಗಳಿಗೂ ಮೇವು ನೀಡುವ ಕೆಲಸ ಮಾಡುತ್ತಿದೆ. ಸದ್ಯ ಸಂಸ್ಥೆಯು 20ಕ್ಕೂ ಹೆಚ್ಚು ಕುದುರೆಗಳ ಆರೈಕೆ ನೋಡಿಕೊಳ್ಳುತ್ತಿದೆ. </p>.<p class="Subhead">ಪ್ರತಿ ತಿಂಗಳು ಈ ಕುದುರೆಗಳಿಗೆ ಕನಿಷ್ಟ 27 ಮೇವಿನ ಚೀಲದ ಅವಶ್ಯಕತೆ ಇದೆ. ಪ್ರತಿ ಚೀಲಕ್ಕೆ ₹ 1,710 ವೆಚ್ಚವಾಗುತ್ತದೆ. ಪ್ರಾಣಿಪ್ರಿಯರು ಸಂಸ್ಥೆಯೊದಿಗೆ ಕೈ ಜೋಡಿಸಬಹುದು ಎಂದುಸಮಭಾವ ಸಂಸ್ಥೆಯ ಸಂಸ್ಥಾಪಕ ಸಂದೇಶ್ ರಾಜು ತಿಳಿಸಿದ್ದಾರೆ.</p>.<p>ಸಮಭಾವ ಸರ್ಕಾರೇತರ ಸೇವಾ ಸಂಸ್ಥೆಯುಪ್ರಾಣಿಗಳ ರಕ್ಷಣೆ ಮತ್ತುಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ. ಪ್ರಾಣಿಗಳ ಹಕ್ಕುಗಳ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.ವಿವರ: Samabhava.org,ದೂರವಾಣಿ ಸಂಪರ್ಕ: 80 40977216<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕು ಮನುಕುಲವನ್ನಷ್ಟೇ ಅಲ್ಲ, ಪ್ರಾಣಿ ಸಂಕುಲವನ್ನೂ ಕಾಡುತ್ತಿದೆ. ಲಾಕ್ಡೌನ್ ಅವಧಿಯಲ್ಲಿ ಸರಿಯಾದ ನೀರು, ಆಹಾರ ಸಿಗದೆ ಪ್ರಾಣಿ, ಪಕ್ಷಿಗಳಿಗೂ ಸಂಕಷ್ಟ ಎದುರಾಗಿದೆ.</p>.<p>ಅರಮನೆ ಮೈದಾನ, ಜಯಮಹಲ್ ಪ್ಯಾಲೇಸ್ ಮತ್ತುನಗರದ ಇತರ ಕಡೆಗಳಲ್ಲಿ ನಡೆಯುತ್ತಿದ್ದ ಮದುವೆ ದಿಬ್ಬಣ, ಮೆರವಣಿಗೆಯಲ್ಲಿ ವೈಯ್ಯಾರದಿಂದ ಹೆಜ್ಜೆ ಹಾಕುತ್ತ ಗಮನ ಸೆಳೆಯುತ್ತಿದ್ದ ಕುದುರೆಗಳ ಆಹಾರಕ್ಕೂ ಕೊರೊನಾ ಸಂಚಕಾರ ತಂದಿದೆ.</p>.<p>ಕೊರೊನಾದಿಂದಾಗಿ ಇಡೀ ದೇಶ ಲಾಕ್ಡೌನ್ ಆಗಿದೆ. ಮದುವೆ, ಜನ್ಮದಿನ, ಸಿನಿಮಾ ಬಿಡುಗಡೆಯಂತಹ ಮೊದಲಾದ ಅದ್ಧೂರಿ ಸಮಾರಂಭಗಳಿಗೆ ಸರಕಾರ ನಿರ್ಬಂಧ ಹೇರಿದೆ. ಇದರಿಂದ ಸಹಜವಾಗಿ ಸಾರೋಟ ಮತ್ತು ಕುದರೆ ಮಾಲೀಕರ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದು ಅಂತಿಮವಾಗಿ ಕುದುರೆಗಳ ಮೇಲೂ ಪರಿಣಾಮ ಬೀರಿದೆ.</p>.<p>ಕುದುರೆಗಳಿಗೆ ದುಬಾರಿ ಓಟ್ಸ್, ಹುರುಳಿಕಾಳು ಸೇರಿದಂತೆ ಮೇವು ಸಂಗ್ರಹಿಸುವುದು ಅವುಗಳ ಮಾಲೀಕರಿಗೆ ಸಮಸ್ಯೆಯಾಗಿದೆ. ಮೊದಲಿನಂತೆ ಪೌಷ್ಟಿಕಆಹಾರ ಸಿಗದೆ ಕುದುರೆಗಳು ಸೊರಗುತ್ತಿವೆ. ಕುದುರೆಗಳ ಮಾಲೀಕರು ಅಸಹಾಯಕರಾಗಿದ್ದಾರೆ.</p>.<p>ಇದನ್ನು ಮನಗಂಡ ಬೆಂಗಳೂರಿನಬನ್ನೇರುಘಟ್ಟ ರಸ್ತೆಯ ಆರ್ಆರ್ ಲೇಔಟ್ನಲ್ಲಿನ ‘ಸಮಭಾವ’ ಎಂಬ ಸ್ವಯಂಸೇವಾ ಸಂಸ್ಥೆಯು ‘ಓಟ್ಸ್ ಫಾರ್ ಎ ಕಾಸ್’ ಎಂಬ ಅಭಿಯಾನದ ಮೂಲಕ ಕುದುರೆಗಳಿಗೆ ಮೇವು ಸಂಗ್ರಹಿಸುತ್ತಿದೆ. ಸಂಕಷ್ಟದಲ್ಲಿರುವ ಕುದುರೆ ಮಾಲೀಕರನ್ನು ಸಂಪರ್ಕಿಸಿ ಕುದುರೆಗಳಿಗೆ ಅಗತ್ಯ ಆಹಾರ ವಿತರಿಸುತ್ತಿದೆ. ಲಾಕ್ಡೌನ್ನಲ್ಲಿ ನಗರದ ಬಿಡಾಡಿ ಕುದುರೆಗಳಿಗೂ ಮೇವು ನೀಡುವ ಕೆಲಸ ಮಾಡುತ್ತಿದೆ. ಸದ್ಯ ಸಂಸ್ಥೆಯು 20ಕ್ಕೂ ಹೆಚ್ಚು ಕುದುರೆಗಳ ಆರೈಕೆ ನೋಡಿಕೊಳ್ಳುತ್ತಿದೆ. </p>.<p class="Subhead">ಪ್ರತಿ ತಿಂಗಳು ಈ ಕುದುರೆಗಳಿಗೆ ಕನಿಷ್ಟ 27 ಮೇವಿನ ಚೀಲದ ಅವಶ್ಯಕತೆ ಇದೆ. ಪ್ರತಿ ಚೀಲಕ್ಕೆ ₹ 1,710 ವೆಚ್ಚವಾಗುತ್ತದೆ. ಪ್ರಾಣಿಪ್ರಿಯರು ಸಂಸ್ಥೆಯೊದಿಗೆ ಕೈ ಜೋಡಿಸಬಹುದು ಎಂದುಸಮಭಾವ ಸಂಸ್ಥೆಯ ಸಂಸ್ಥಾಪಕ ಸಂದೇಶ್ ರಾಜು ತಿಳಿಸಿದ್ದಾರೆ.</p>.<p>ಸಮಭಾವ ಸರ್ಕಾರೇತರ ಸೇವಾ ಸಂಸ್ಥೆಯುಪ್ರಾಣಿಗಳ ರಕ್ಷಣೆ ಮತ್ತುಹಕ್ಕುಗಳಿಗಾಗಿ ಕೆಲಸ ಮಾಡುತ್ತಿದೆ. ಪ್ರಾಣಿಗಳ ಹಕ್ಕುಗಳ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.ವಿವರ: Samabhava.org,ದೂರವಾಣಿ ಸಂಪರ್ಕ: 80 40977216<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>