ಕೊನೆಯ ಕ್ಷಣದಲ್ಲಿ ಸಿಗ್ನಲ್ ಬದಲಾವಣೆ ಆಗಿದ್ದರಿಂದ ಬಾಲೇಶ್ವರ ಅವಘಡ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಸಚಿವರು ಸಹ ಇದನ್ನೇ ಹೇಳಿದ್ದಾರೆ. 2017ರಿಂದ 2021ರ ಮಧ್ಯೆ ದೇಶದಲ್ಲಿ ಒಟ್ಟು 1,800 ರೈಲು ಅವಘಡಗಳು ಸಂಭವಿಸಿವೆ. ಅವುಗಳಲ್ಲಿ ಸಿಗ್ನಲ್ ಸಮಸ್ಯೆಗೆ ಸಂಬಂಧಿಸಿದ ಅವಘಡಗಳ ಸಂಖ್ಯೆ 211. ಸಿಗ್ನಲ್ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶದ ಸಂಪನ್ಮೂಲ, ಜನರ ಜೀವಕ್ಕೆ ಹಾನಿಯಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಸಿಎಜಿ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.