‘ಗಂಗಾ ಮಾತೆಯ ಸೇವೆ ಮಾಡುವುದು ನನ್ನ ವಿಧಿ ಲಿಖಿತ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ವಾರಾಣಸಿಯಲ್ಲಿ ಗೆಲುವು ಸಾಧಿಸಿದ ಬಳಿಕ ಹೇಳಿದ್ದರು. ಗಂಗಾ ನದಿಯನ್ನು ಶುದ್ಧೀಕರಿಸುವ ಘೋಷಣೆಯನ್ನು ಮಾಡಿದ್ದರು. ಸರ್ಕಾರ ಇದೇ ಉದ್ದೇಶದಿಂದ ನಮಾಮಿ ಗಂಗೆ ಯೋಜನೆಯನ್ನೂ ಆರಂಭಿಸಿತ್ತು. ಇದಾಗಿ 11 ವರ್ಷಗಳು ಕಳೆದಿವೆ. ಗಂಗೆ ಇನ್ನೂ ಶುದ್ಧವಾಗಿಲ್ಲ. ಪ್ರಯಾಗರಾಜ್ನಲ್ಲಿ ಮಹಾಕುಂಭ ಮೇಳದ ಸಮಯದಲ್ಲಿ ನದಿಯ ನೀರಿನ ಗುಣಮಟ್ಟದ ಕುರಿತಾಗಿ ಬಹಿರಂಗಗೊಂಡಿರುವ ಅಂಕಿಅಂಶ ಮತ್ತು ಮಾಹಿತಿ ಆತಂಕ ಹುಟ್ಟಿಸುವಂತಿವೆ. ಅದರ ಪ್ರಕಾರ, ಸಂಗಮದ ನೀರು ಕುಡಿಯುವುದಕ್ಕೆ ಇರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ
2019ರಲ್ಲಿ ಪ್ರಯಾಗರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಅವರು ಪುಣ್ಯ ಸ್ನಾನ ಮಾಡಿದ ಸಂದರ್ಭ