ರಾಜ್ಯ ಸರ್ಕಾರ ’ಶಕ್ತಿ‘ ಯೋಜನೆ ಮೂಲಕ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ನಿರ್ವಾಹಕರೊಬ್ಬರು ದಾಖಲೆ ಪರಿಶೀಲಿಸಿ ಟಿಕೆಟ್ ಕೊಡಲು ಹರಸಾಹಸ ಮಾಡುತ್ತಿರುವ ದೃಶ್ಯ ಕಲಬುರಗಿಯ ನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ಕಂಡುಬಂತು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಲ್ಲ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದು ಬಸ್ ರಸ್ತೆಗಿಳಿಯಲು ನಾಲ್ಕೈದು ತಿಂಗಳು ಬೇಕು. ಮುಂದಿನ ವರ್ಷ ಬಸ್ಗಳ ಕೊರತೆ ಇರುವುದಿಲ್ಲ. ಹೊಸ ಕಾಲೇಜು ಹೊಸ ಕೋರ್ಸ್ಗಳು ಆರಂಭವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಡೆಗಳಲ್ಲಿ ಹೆಚ್ಚು ಸಮಸ್ಯೆ ಉಂಟಾಗಿರುವುದು ನಿಜ. ಬೊಲೆರೊ ವಾಹನಗಳಲ್ಲಿ ನಮ್ಮ ಅಧಿಕಾರಿಗಳು ಹೋಗಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಅಗತ್ಯ ಇರುವಲ್ಲಿ ಬಸ್ ಟ್ರಿಪ್ಗಳನ್ನು ಜಾಸ್ತಿ ಮಾಡಿದ್ದೇವೆವಿ. ಅನ್ಬುಕುಮಾರ್ ವ್ಯವಸ್ಥಾಪಕ ನಿರ್ದೇಶಕ ಕೆಎಸ್ಆರ್ಟಿಸಿ
250 ಬಸ್ ಖರೀದಿಗೆ ಟೆಂಡರ್ 620 ಬಸ್ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಿದ್ದು ಮತ್ತೆ ಹೊಸದಾಗಿ 250 ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಿದ್ದೇವೆ. ಬೇಡಿಕೆ ಬಂದ ರೂಟ್ಗಳಲ್ಲಿ ಹೆಚ್ಚಿನ ಶೆಡ್ಯೂಲ್ಗಳಲ್ಲಿ ಬಸ್ಗಳನ್ನು ಓಡಿಸುತ್ತಿದ್ದೇವೆ. ಈಗೀಗ ಬಹುತೇಕ ಬಸ್ಗಳಲ್ಲಿ ಆಸನಗಳು ಸಿಗುತ್ತಿವೆಎಂ. ರಾಚಪ್ಪ ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್ಟಿಸಿ
2 ಸಾವಿರ ಡ್ರೈವರ್/ ಕಂಡಕ್ಟರ್ ಹುದ್ದೆಗಳ ಭರ್ತಿ ಗ್ರಾಮಾಂತರ ಪ್ರದೇಶಗಳ ಬಸ್ ಕೊರತೆ ನೀಗಿಸಲು 375 ಬಸ್ಗಳ ಖರೀದಿಗೆ ಸರ್ಕಾರದಿಂದ ಈಗಾಗಲೇ ಅನುಮತಿ ಸಿಕ್ಕಿದೆ. ಖರೀದಿ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಬಿ.ಆರ್.ಟಿ ಸೇವೆಗೆ ₹45 ಕೋಟಿ ವೆಚ್ಚದಲ್ಲಿ 100 ಹೊಸ ಬಸ್ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹16.20 ಕೋಟಿ ವೆಚ್ಚದಲ್ಲಿ ಎ.ಸಿ/ ನಾನ್ ಎ.ಸಿ 24 ಹೊಸ ಬಸ್ ಖರೀದಿಸಲು ಅನುಮೋದನೆ ನೀಡಿದೆ. ಸದ್ಯದಲ್ಲೇ ಒಟ್ಟು 499 ಬಸ್ ಸೇರ್ಪಡೆಯಾಗಲಿವೆ. ಇದರ ಜೊತೆಗೆ 2 ಸಾವಿರ ಡ್ರೈವರ್/ ಕಂಡಕ್ಟರ್ ಹುದ್ದೆಗಳ ಭರ್ತಿಗೂ ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ತಕ್ಕಮಟ್ಟಿಗೆ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಸಹಕಾರಿಯಾಗಲಿದೆ’ಭರತ್ ಎಸ್. ವ್ಯವಸ್ಥಾಪಕ ನಿರ್ದೇಶಕ ಎನ್ಡಬ್ಲ್ಯುಕೆಆರ್ಟಿಸಿ
ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರು ಹೆಚ್ಚಾಗಿರುವುದರಿಂದ ದಾವಣಗೆರೆಯಲ್ಲಿ ಕೆಎಸ್ಆರ್ಟಿಸಿ ಬಸ್ನ ಫುಟ್ಬೋರ್ಡ್ ಮೇಲೆ ಅಪಾಯಕಾರಿಯಾಗಿ ಜೋತುಬಿದ್ದು ಸಾಗುತ್ತಿರುವ ಪ್ರಯಾಣಿಕರು ಕಂಡು ಬಂದಿದ್ದು ಹೀಗೆ
–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.