ಹವಾಮಾನ ವೈಪರೀತ್ಯದ ಪರಿಣಾಮವು ಜಗತ್ತಿನ ಹಲವೆಡೆ ತಲೆದೋರಿದೆ. ಇದು ಆರಂಭದ ಹಂತದ ಪರಿಣಾಮಗಳಷ್ಟೆ. ಮುಂದಿನ ವರ್ಷಗಳಲ್ಲಿ ಈ ಪರಿಣಾಮದ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ. ಭೂಮಧ್ಯೆ ರೇಖೆಗಿಂತ ಕೆಳಗೆ ಇರುವ ದೇಶಗಳಲ್ಲಿ ಈಗ ಬಿರುಬೇಸಿಗೆ. ಅಂದರೆ, ಇತ್ತೀಚಿನ ದಶಕಗಳಲ್ಲೇ ಕಂಡರಿಯದಷ್ಟು ಬಿಸಿಲಿಗೆ ಈ ದೇಶಗಳು ಮೈಯೊಡ್ಡಿವೆ. ಈ ದೇಶಗಳ ಪಕ್ಕದಲ್ಲೇ ಇರುವ ಯುಎಇ, ಈಜಿಪ್ಟ್, ಕೆನ್ಯಾ, ಸೊಮಲಿಯಾಗಳಲ್ಲಿ ಪ್ರವಾಹ ಸ್ಥಿತಿ ತಲೆದೋರುವಷ್ಟು ಮಳೆ ಹೊಯ್ಯುತ್ತಿದೆ. ಭಾರತವೂ ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಒಂದು ವಾರದಿಂದ ಬಿಸಿಗಾಳಿಯ ಪರಿಸ್ಥಿತಿ ಇತ್ತು. ಆಗ್ನೇಯ ಏಷ್ಯಾದಲ್ಲಿ ಈಗ ಮಳೆಯಾಗುತ್ತಿದೆ. ಭಾರತದ ಕೆಲವೆಡೆ ಮಳೆ ಇದ್ದರೆ, ಕೆಲವೆಡೆ ಮಳೆಯಾಗುತ್ತಿದೆ. ದಕ್ಷಿಣ ಅಮೆರಿಕದ ದೇಶಗಳಲ್ಲೂ ಇಂಥದ್ದೇ ಸ್ಥಿತಿ ಇದೆ
ಈ ತೀರ್ಪು ನಮ್ಮ ಜಯವೊಂದೇ ಅಲ್ಲ. ಇದು ಎಲ್ಲ ಪೀಳಿಗೆಗಳ ಜಯ. ಹಲವು ವರ್ಷಗಳ ವಿಚಾರಣೆಯ ಉದ್ದಕ್ಕೂ ಹಾಜರಿದ್ದ ಯುವಕರು, ತಮ್ಮ ಭವಿಷ್ಯದ ಮಾನವ ಹಕ್ಕುಗಳ ರಕ್ಷಣೆಯನ್ನು ಎತ್ತಿತೋರಿಸಿದ್ದರು. ಅದು ನ್ಯಾಯಾಲಯವನ್ನು ಪ್ರಭಾವಿಸಿತು
ರೋಸ್ಮೆರಿ ವೇಡ್ಲೇರ್ವಾಲ್ಟಿ, ಸಹ ಅಧ್ಯಕ್ಷೆ, ಸೀನಿಯರ್ ವಿಮೆನ್ ಫಾರ್ ಕ್ಲೈಮೇಟ್ ಪ್ರೊಟೆಕ್ಷನ್
ಬದುಕಲು ಯೋಗ್ಯವಾದ ವಾತಾವರಣವು ಎಲ್ಲರಿಗೂ ಬೇಕು. ಈ ಕಾರಣಕ್ಕಾಗಿಯೇ ಇದೊಂದು ಐತಿಹಾಸಿಕ ತೀರ್ಪಾಗಿದೆ. ಇದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಗ್ರೀನ್ಪೀಸ್ನ ಸಹಕಾರದೊಂದಿಗೆ ಕಳೆದ 9 ವರ್ಷಗಳಿಂದ ಈ ಹೋರಾಟ ನಡೆಸುತ್ತಿದ್ದೇವೆ. ಸ್ವಿಟ್ಜರ್ಲೆಂಡ್ ನ್ಯಾಯಾಲಯಗಳು ನಮ್ಮ ವಾದವನ್ನು ಆಲಿಸಲು ನಿರಾಕರಿಸಿದವು. ಪರಿಸರ ಸಂರಕ್ಷಣೆ ಎನ್ನುವುದು ಮಾನವ ಹಕ್ಕು ಎಂಬುದನ್ನು ಹ್ಯೂಮನ್ ರೈಟ್ಸ್ ನ್ಯಾಯಾಲಯವು ಸಾಬೀತುಪಡಿಸಿದೆ
ಅನ್ನಾ ಮಾರೇರ್, ಸಹ ಅಧ್ಯಕ್ಷೆ, ಸೀನಿಯರ್ ವಿಮೆನ್ ಫಾರ್ ಕ್ಲೈಮೇಟ್ ಪ್ರೊಟೆಕ್ಷನ್