<p>ಯಶಸ್ಸು ಯಶಸ್ಸನ್ನು ಹಿಂಬಾಲಿಸುತ್ತದೆ ಎನ್ನುತ್ತಾರೆ...!<br /> ಈ ಮಾತು ಕರ್ನಾಟಕದ ಕ್ರಿಕೆಟ್ ಪಾಲಿಗೆ ನಿಜ ಎನಿಸುತ್ತದೆ. ರಾಷ್ಟ್ರ ಕ್ರಿಕೆಟ್ಗೆ ರಾಜ್ಯದ ಕೊಡುಗೆ ಅದ್ಭುತ. ಅದರಲ್ಲೂ ಬೌಲಿಂಗ್ನಲ್ಲಿ ಆ ಪಾಲು ಮತ್ತಷ್ಟು ಹೆಚ್ಚು. ಆರಂಭದಲ್ಲಿ ಸ್ಪಿನ್ನರ್ಗಳಾದ ಇ.ಎ.ಎಸ್.ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ ಅಮೋಘ ಪ್ರದರ್ಶನದ ಮೂಲಕ ಇತಿಹಾಸ ಬರೆದಿದ್ದು ಗೊತ್ತೇ ಇದೆ.<br /> <br /> ಹಾಗೇ, ವೇಗದ ಬೌಲಿಂಗ್ನಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್ ಹಾಗೂ ಡೇವಿಡ್ ಜಾನ್ಸನ್ ಭಾರತ ತಂಡ ಪ್ರತಿನಿಧಿಸಿ ಮಿಂಚಿದ್ದರು. <br /> <br /> ಅವರು ನಡೆದ ಹಾದಿಯಲ್ಲಿ ಈಗ ಹೆಜ್ಜೆ ಇಡುತ್ತಿದ್ದಾರೆ ಪ್ರತಿಭಾವಂತ ವೇಗಿಗಳಾದ ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಎಸ್.ಅರವಿಂದ್. ದೇಶಿ ಕ್ರಿಕೆಟ್ನಲ್ಲಿ ಯಶಸ್ವಿ ಪ್ರದರ್ಶನ ತೋರುತ್ತಿರುವ ಈ ಬೌಲರ್ಗಳು ಭಾರತ ತಂಡದ ಭವಿಷ್ಯದ ತಾರೆಗಳು ಎನಿಸಿದ್ದಾರೆ.<br /> <br /> ಅಷ್ಟು ಮಾತ್ರವಲ್ಲದೇ, ಶ್ರೀನಾಥ್, ವೆಂಕಿ, ಗಣೇಶ್ ಅವರ ಕಾಲ ಮತ್ತೆ ನೆನಪಾಗಲು ಕಾರಣರಾಗಿದ್ದಾರೆ. ಜೊತೆಗೆ ಪ್ರಸಾದ್, ಶ್ರೀನಾಥ್ ಹಾಗೂ ಕುಂಬ್ಳೆ ಮಾರ್ಗದರ್ಶನ ಇವರ ನೆರವಿಗೆ ಬರುತ್ತಿದೆ. <br /> ಕರ್ನಾಟಕದಿಂದ 1996ರಲ್ಲಿ ರಾಹುಲ್ ದ್ರಾವಿಡ್ ಪದಾರ್ಪಣೆ ಮಾಡಿದ್ದರು. <br /> <br /> ಬಳಿಕ ಜೋಶಿ, ಜಾನ್ಸನ್ (1996), ಗಣೇಶ್ (1997) ಹಾಗೂ ವಿಜಯ್ ಭಾರದ್ವಾಜ್ (1999) ಸ್ಥಾನ ಪಡೆದಿದ್ದರು. 2006ರಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಗಿಟ್ಟಿಸಿದರಾದರೂ ಅದು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ಗೆ ಸೀಮಿತವಾಗಿತ್ತು.<br /> <br /> 11 ವರ್ಷಗಳ ಅವಧಿಯಲ್ಲಿ ಯಾರೊಬ್ಬರೂ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ಆದರೆ ಮಿಥುನ್ 2010ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಕೆಲವೇ ದಿನಗಳಲ್ಲಿ ವಿನಯ್ ಏಕದಿನ ತಂಡ ಪ್ರವೇಶಿಸಿದರು. ಈಗ ಅರವಿಂದ್ ಸ್ಥಾನ ಗಿಟ್ಟಿಸಿದ್ದಾರೆ. <br /> <br /> ಕೊನೆಗೂ ಕರ್ನಾಟಕದ ಕ್ರಿಕೆಟಿಗರತ್ತ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಕಣ್ಣು ಹರಿಯುತ್ತಿದೆ ಎನ್ನುವುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ. ಆಯ್ಕೆದಾರರ ಕಣ್ಣು ಬಿದ್ದಿದೆ ಎನ್ನುವುದಕ್ಕಿಂತ ಅವರ ದೃಷ್ಟಿಯನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎನ್ನಬಹುದು!<br /> <br /> `ಈ ವರ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಾನು ಪಕ್ಕೆಲುಬು ನೋವಿನಿಂದ ಚೇತರಿಸಿಕೊಂಡಿದ್ದೆ. ಹಾಗಾಗಿ ದೇಶಿ ಕ್ರಿಕೆಟ್ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರಿ ಮುಂದಿನ ವರ್ಷ ಸ್ಥಾನ ಪಡೆಯುವ ಗುರಿ ನನ್ನದಾಗಿತ್ತು.<br /> <br /> ಅದೇನೇ ಇರಲಿ, ಸಿಕ್ಕಿರುವ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅದರಲ್ಲಿ ಯಶಸ್ವಿಯಾಗುವ ಭರವಸೆ ಇದೆ~ ಎಂದು ಅರವಿಂದ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. <br /> <br /> 2009-10ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ತಲುಪಲು ವಿನಯ್, ಮಿಥುನ್ ಹಾಗೂ ಅರವಿಂದ್ ಕಾರಣ. ಈ ವೇಗಿಗಳ ನೆರವಿನಿಂದ 2010-11ರ ಟೂರ್ನಿಯಲ್ಲಿ ರಾಜ್ಯ ತಂಡ ಸೆಮಿಫೈನಲ್ ಪ್ರವೇಶಿಸಿತ್ತು.</p>.<p>ಎಡಗೈ ಮಧ್ಯಮ ವೇಗದ ಬೌಲರ್ ಅರವಿಂದ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 20 ಪಂದ್ಯಗಳಿಂದ 68 ಕಬಳಿಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರ ಪ್ರತಿಭೆಯನ್ನು ಯಾರೂ ಗುರುತಿಸಿರಲಿಲ್ಲ.<br /> <br /> ಆದರೆ ಐಪಿಎಲ್ ಎಂಬ ಚುಟುಕು ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುವ ಅವರು ಐಪಿಲ್ ನಾಲ್ಕನೇ ಅವತರಣಿಕೆಯಲ್ಲಿ 21 ವಿಕೆಟ್ ಪಡೆದಿದ್ದರು. ಇದು ಆಯ್ಕೆದಾರರ ಗಮನ ಸೆಳೆಯಿತು. <br /> <br /> ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಉದಯೋನ್ಮುಖ ಆಟಗಾರರ ತಂಡದಲ್ಲಿ ಅರವಿಂದ್ ಸ್ಥಾನ ಪಡೆದಿದ್ದರು. ಆದರೆ ಸಿದ್ಧತಾ ಶಿಬಿರದ ವೇಳೆ ಪಕ್ಕೆಲುಬು ನೋವು ಕಾಣಿಸಿಕೊಂಡಿದ್ದರಿಂದ ಆ ಪ್ರವಾಸಕ್ಕೆ ತೆರಳಿರಲಿಲ್ಲ. <br /> <br /> `ವಿನಯ್, ಮಿಥುನ್ ಹಾಗೂ ಅರವಿಂದ್ ಭರವಸೆಯ ವೇಗಿಗಳು. ರಾಜ್ಯ ರಣಜಿ ತಂಡದ ಯಶಸ್ಸಿಗೆ ಕಾರಣ ಈ ಮೂರು ಮಂದಿ ಬೌಲರ್ಗಳು. ಅವರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ~ ಎನ್ನುತ್ತಾರೆ ಮಾಜಿ ವೇಗಿ ಜಾವಗಲ್ ಶ್ರೀನಾಥ್. <br /> <br /> ಬೀದಿಗಳಲ್ಲಿ ಪಕ್ಕದ ಮನೆಯ ಸ್ನೇಹಿತರೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದ ಹುಡುಗ ಇಷ್ಟು ಬೇಗ ಈ ಎತ್ತರಕ್ಕೆ ಬೆಳೆಯಲು ಅವರ ಕಠಿಣ ಪ್ರಯತ್ನ ಕಾರಣ. <br /> <br /> ಗಾಯದ ಸಮಸ್ಯೆಗಳು ಅವರ ಕನಸಿನ ಹಾದಿಗೆ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಕ್ರಿಕೆಟ್ ಮೇಲಿನ ಪ್ರೀತಿ. ಆ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಈಗ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. <br /> <br /> `ಐಪಿಎಲ್ ಕ್ರಿಕೆಟ್ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಅತ್ಯುತ್ತಮ ಆಟಗಾರರ ನಡುವೆ ಮಿಂಚಲು ಅದು ನನಗೆ ವೇದಿಕೆಯಾಯಿತು. ಹಿರಿಯ ಹಾಗೂ ಶ್ರೇಷ್ಠ ಆಟಗಾರರೊಡನೆ ಬೆರೆಯಲು ನೆರವಾಯಿತು. ಅವರ ಮಾರ್ಗದರ್ಶನ ಸ್ಥಿರ ಪ್ರದರ್ಶನ ತೋರಲು ಸಹಾಯವಾಗಿದೆ~ ಎಂದು ಅರವಿಂದ್ ನುಡಿಯುತ್ತಾರೆ. <br /> <br /> ಜಹೀರ್, ಇಶಾಂತ್, ಎಸ್.ಶ್ರೀಶಾಂತ್ ಗಾಯಗೊಂಡು ಹೊರಗುಳಿದಿರುವ ಕಾರಣ ಯುವ ವೇಗಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ಎದುರಿನ ಇತ್ತೀಚಿನ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಭಾರತದ ಮುಂದೆ ಈಗ ದೊಡ್ಡ ಸವಾಲಿದೆ.<br /> <br /> ಈ ಸರಣಿಯಲ್ಲಿ ಅರವಿಂದ್ ಸಹಪಾಠಿ ವಿನಯ್ ಕೂಡ ಆಡಲಿದ್ದಾರೆ. 10 ವರ್ಷಗಳ ಬಳಿಕ ರಾಷ್ಟ್ರ ತಂಡದಲ್ಲಿ ರಾಜ್ಯದ ಇಬ್ಬರು ವೇಗಿಗಳು ಕಾಣಿಸಿಕೊಂಡಿದ್ದಾರೆ. 2001ರಲ್ಲಿ ಶ್ರೀನಾಥ್ ಹಾಗೂ ವೆಂಕಿ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟಿಗೆ ಆಡಿದ್ದರು. <br /> <br /> ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಸ್ಥಾನ ಪಡೆದಿರುವ ಅರವಿಂದ್ ಈ ಅವಕಾಶವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಈಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ... </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಶಸ್ಸು ಯಶಸ್ಸನ್ನು ಹಿಂಬಾಲಿಸುತ್ತದೆ ಎನ್ನುತ್ತಾರೆ...!<br /> ಈ ಮಾತು ಕರ್ನಾಟಕದ ಕ್ರಿಕೆಟ್ ಪಾಲಿಗೆ ನಿಜ ಎನಿಸುತ್ತದೆ. ರಾಷ್ಟ್ರ ಕ್ರಿಕೆಟ್ಗೆ ರಾಜ್ಯದ ಕೊಡುಗೆ ಅದ್ಭುತ. ಅದರಲ್ಲೂ ಬೌಲಿಂಗ್ನಲ್ಲಿ ಆ ಪಾಲು ಮತ್ತಷ್ಟು ಹೆಚ್ಚು. ಆರಂಭದಲ್ಲಿ ಸ್ಪಿನ್ನರ್ಗಳಾದ ಇ.ಎ.ಎಸ್.ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ ಅಮೋಘ ಪ್ರದರ್ಶನದ ಮೂಲಕ ಇತಿಹಾಸ ಬರೆದಿದ್ದು ಗೊತ್ತೇ ಇದೆ.<br /> <br /> ಹಾಗೇ, ವೇಗದ ಬೌಲಿಂಗ್ನಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್ ಹಾಗೂ ಡೇವಿಡ್ ಜಾನ್ಸನ್ ಭಾರತ ತಂಡ ಪ್ರತಿನಿಧಿಸಿ ಮಿಂಚಿದ್ದರು. <br /> <br /> ಅವರು ನಡೆದ ಹಾದಿಯಲ್ಲಿ ಈಗ ಹೆಜ್ಜೆ ಇಡುತ್ತಿದ್ದಾರೆ ಪ್ರತಿಭಾವಂತ ವೇಗಿಗಳಾದ ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಎಸ್.ಅರವಿಂದ್. ದೇಶಿ ಕ್ರಿಕೆಟ್ನಲ್ಲಿ ಯಶಸ್ವಿ ಪ್ರದರ್ಶನ ತೋರುತ್ತಿರುವ ಈ ಬೌಲರ್ಗಳು ಭಾರತ ತಂಡದ ಭವಿಷ್ಯದ ತಾರೆಗಳು ಎನಿಸಿದ್ದಾರೆ.<br /> <br /> ಅಷ್ಟು ಮಾತ್ರವಲ್ಲದೇ, ಶ್ರೀನಾಥ್, ವೆಂಕಿ, ಗಣೇಶ್ ಅವರ ಕಾಲ ಮತ್ತೆ ನೆನಪಾಗಲು ಕಾರಣರಾಗಿದ್ದಾರೆ. ಜೊತೆಗೆ ಪ್ರಸಾದ್, ಶ್ರೀನಾಥ್ ಹಾಗೂ ಕುಂಬ್ಳೆ ಮಾರ್ಗದರ್ಶನ ಇವರ ನೆರವಿಗೆ ಬರುತ್ತಿದೆ. <br /> ಕರ್ನಾಟಕದಿಂದ 1996ರಲ್ಲಿ ರಾಹುಲ್ ದ್ರಾವಿಡ್ ಪದಾರ್ಪಣೆ ಮಾಡಿದ್ದರು. <br /> <br /> ಬಳಿಕ ಜೋಶಿ, ಜಾನ್ಸನ್ (1996), ಗಣೇಶ್ (1997) ಹಾಗೂ ವಿಜಯ್ ಭಾರದ್ವಾಜ್ (1999) ಸ್ಥಾನ ಪಡೆದಿದ್ದರು. 2006ರಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಗಿಟ್ಟಿಸಿದರಾದರೂ ಅದು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ಗೆ ಸೀಮಿತವಾಗಿತ್ತು.<br /> <br /> 11 ವರ್ಷಗಳ ಅವಧಿಯಲ್ಲಿ ಯಾರೊಬ್ಬರೂ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ಆದರೆ ಮಿಥುನ್ 2010ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಕೆಲವೇ ದಿನಗಳಲ್ಲಿ ವಿನಯ್ ಏಕದಿನ ತಂಡ ಪ್ರವೇಶಿಸಿದರು. ಈಗ ಅರವಿಂದ್ ಸ್ಥಾನ ಗಿಟ್ಟಿಸಿದ್ದಾರೆ. <br /> <br /> ಕೊನೆಗೂ ಕರ್ನಾಟಕದ ಕ್ರಿಕೆಟಿಗರತ್ತ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಕಣ್ಣು ಹರಿಯುತ್ತಿದೆ ಎನ್ನುವುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ. ಆಯ್ಕೆದಾರರ ಕಣ್ಣು ಬಿದ್ದಿದೆ ಎನ್ನುವುದಕ್ಕಿಂತ ಅವರ ದೃಷ್ಟಿಯನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎನ್ನಬಹುದು!<br /> <br /> `ಈ ವರ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಾನು ಪಕ್ಕೆಲುಬು ನೋವಿನಿಂದ ಚೇತರಿಸಿಕೊಂಡಿದ್ದೆ. ಹಾಗಾಗಿ ದೇಶಿ ಕ್ರಿಕೆಟ್ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರಿ ಮುಂದಿನ ವರ್ಷ ಸ್ಥಾನ ಪಡೆಯುವ ಗುರಿ ನನ್ನದಾಗಿತ್ತು.<br /> <br /> ಅದೇನೇ ಇರಲಿ, ಸಿಕ್ಕಿರುವ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅದರಲ್ಲಿ ಯಶಸ್ವಿಯಾಗುವ ಭರವಸೆ ಇದೆ~ ಎಂದು ಅರವಿಂದ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. <br /> <br /> 2009-10ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ತಲುಪಲು ವಿನಯ್, ಮಿಥುನ್ ಹಾಗೂ ಅರವಿಂದ್ ಕಾರಣ. ಈ ವೇಗಿಗಳ ನೆರವಿನಿಂದ 2010-11ರ ಟೂರ್ನಿಯಲ್ಲಿ ರಾಜ್ಯ ತಂಡ ಸೆಮಿಫೈನಲ್ ಪ್ರವೇಶಿಸಿತ್ತು.</p>.<p>ಎಡಗೈ ಮಧ್ಯಮ ವೇಗದ ಬೌಲರ್ ಅರವಿಂದ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 20 ಪಂದ್ಯಗಳಿಂದ 68 ಕಬಳಿಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರ ಪ್ರತಿಭೆಯನ್ನು ಯಾರೂ ಗುರುತಿಸಿರಲಿಲ್ಲ.<br /> <br /> ಆದರೆ ಐಪಿಎಲ್ ಎಂಬ ಚುಟುಕು ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುವ ಅವರು ಐಪಿಲ್ ನಾಲ್ಕನೇ ಅವತರಣಿಕೆಯಲ್ಲಿ 21 ವಿಕೆಟ್ ಪಡೆದಿದ್ದರು. ಇದು ಆಯ್ಕೆದಾರರ ಗಮನ ಸೆಳೆಯಿತು. <br /> <br /> ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಉದಯೋನ್ಮುಖ ಆಟಗಾರರ ತಂಡದಲ್ಲಿ ಅರವಿಂದ್ ಸ್ಥಾನ ಪಡೆದಿದ್ದರು. ಆದರೆ ಸಿದ್ಧತಾ ಶಿಬಿರದ ವೇಳೆ ಪಕ್ಕೆಲುಬು ನೋವು ಕಾಣಿಸಿಕೊಂಡಿದ್ದರಿಂದ ಆ ಪ್ರವಾಸಕ್ಕೆ ತೆರಳಿರಲಿಲ್ಲ. <br /> <br /> `ವಿನಯ್, ಮಿಥುನ್ ಹಾಗೂ ಅರವಿಂದ್ ಭರವಸೆಯ ವೇಗಿಗಳು. ರಾಜ್ಯ ರಣಜಿ ತಂಡದ ಯಶಸ್ಸಿಗೆ ಕಾರಣ ಈ ಮೂರು ಮಂದಿ ಬೌಲರ್ಗಳು. ಅವರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ~ ಎನ್ನುತ್ತಾರೆ ಮಾಜಿ ವೇಗಿ ಜಾವಗಲ್ ಶ್ರೀನಾಥ್. <br /> <br /> ಬೀದಿಗಳಲ್ಲಿ ಪಕ್ಕದ ಮನೆಯ ಸ್ನೇಹಿತರೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದ ಹುಡುಗ ಇಷ್ಟು ಬೇಗ ಈ ಎತ್ತರಕ್ಕೆ ಬೆಳೆಯಲು ಅವರ ಕಠಿಣ ಪ್ರಯತ್ನ ಕಾರಣ. <br /> <br /> ಗಾಯದ ಸಮಸ್ಯೆಗಳು ಅವರ ಕನಸಿನ ಹಾದಿಗೆ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಕ್ರಿಕೆಟ್ ಮೇಲಿನ ಪ್ರೀತಿ. ಆ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಈಗ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. <br /> <br /> `ಐಪಿಎಲ್ ಕ್ರಿಕೆಟ್ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಅತ್ಯುತ್ತಮ ಆಟಗಾರರ ನಡುವೆ ಮಿಂಚಲು ಅದು ನನಗೆ ವೇದಿಕೆಯಾಯಿತು. ಹಿರಿಯ ಹಾಗೂ ಶ್ರೇಷ್ಠ ಆಟಗಾರರೊಡನೆ ಬೆರೆಯಲು ನೆರವಾಯಿತು. ಅವರ ಮಾರ್ಗದರ್ಶನ ಸ್ಥಿರ ಪ್ರದರ್ಶನ ತೋರಲು ಸಹಾಯವಾಗಿದೆ~ ಎಂದು ಅರವಿಂದ್ ನುಡಿಯುತ್ತಾರೆ. <br /> <br /> ಜಹೀರ್, ಇಶಾಂತ್, ಎಸ್.ಶ್ರೀಶಾಂತ್ ಗಾಯಗೊಂಡು ಹೊರಗುಳಿದಿರುವ ಕಾರಣ ಯುವ ವೇಗಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ಎದುರಿನ ಇತ್ತೀಚಿನ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಭಾರತದ ಮುಂದೆ ಈಗ ದೊಡ್ಡ ಸವಾಲಿದೆ.<br /> <br /> ಈ ಸರಣಿಯಲ್ಲಿ ಅರವಿಂದ್ ಸಹಪಾಠಿ ವಿನಯ್ ಕೂಡ ಆಡಲಿದ್ದಾರೆ. 10 ವರ್ಷಗಳ ಬಳಿಕ ರಾಷ್ಟ್ರ ತಂಡದಲ್ಲಿ ರಾಜ್ಯದ ಇಬ್ಬರು ವೇಗಿಗಳು ಕಾಣಿಸಿಕೊಂಡಿದ್ದಾರೆ. 2001ರಲ್ಲಿ ಶ್ರೀನಾಥ್ ಹಾಗೂ ವೆಂಕಿ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟಿಗೆ ಆಡಿದ್ದರು. <br /> <br /> ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಸ್ಥಾನ ಪಡೆದಿರುವ ಅರವಿಂದ್ ಈ ಅವಕಾಶವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಈಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ... </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>