ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಒಳನೋಟ: ಗೋಡಂಬಿಗೆ ‘ಆಪತ್ತಿನ’ ಕಾಲ

ರಾಜ್ಯದಲ್ಲಿ ಶತಮಾನೋತ್ಸವ ಅಂಚಿನಲ್ಲಿರುವ ಗೇರು ಸಂಸ್ಕರಣೆ
Published : 23 ನವೆಂಬರ್ 2024, 23:00 IST
Last Updated : 23 ನವೆಂಬರ್ 2024, 23:00 IST
ಫಾಲೋ ಮಾಡಿ
Comments
ಗೇರು ಬೀಜ ಸಂಸ್ಕರಣೆಯಲ್ಲಿ ತೊಡಗಿರುವ ಕಾರ್ಮಿಕರು  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಗೇರು ಬೀಜ ಸಂಸ್ಕರಣೆಯಲ್ಲಿ ತೊಡಗಿರುವ ಕಾರ್ಮಿಕರು  ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
 ನೇತ್ರ ಜಂಬೊ ತಳಿಯ ಗೇರುಬೀಜ
 ನೇತ್ರ ಜಂಬೊ ತಳಿಯ ಗೇರುಬೀಜ
ಕಾರ್ಖಾನೆಯಲ್ಲಿ ಗೋಡಂಬಿ ಸಂಸ್ಕರಣೆ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಕಾರ್ಖಾನೆಯಲ್ಲಿ ಗೋಡಂಬಿ ಸಂಸ್ಕರಣೆ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಮಾರಾಟಕ್ಕೆ ಸಿದ್ಧವಾಗಿರುವ ಗೋಡಂಬಿ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಮಾರಾಟಕ್ಕೆ ಸಿದ್ಧವಾಗಿರುವ ಗೋಡಂಬಿ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಕರ್ನಾಟಕದಲ್ಲಿ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸವನ್ನು ನಾವು 20 ವರ್ಷಗಳ ಹಿಂದೆಯೇ ಮಾಡಬೇಕಿತ್ತು. ರಾಜ್ಯದ 26 ಜಿಲ್ಲೆಗಳ ಹವಾಮಾನ (18ರಿಂದ 40 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ಸೂಕ್ತ. ಹೆಚ್ಚು ಚಳಿ ಅತಿಯಾದ ಉಷ್ಣತೆ ಪೂರಕವಲ್ಲ) ಗೇರು ಕೃಷಿಗೆ ಪೂರಕವಾಗಿದೆ ಎಂದು ಸಂಶೋಧನಾ ವರದಿ ಹೇಳಿವೆ. ಕರಾವಳಿಗೆ ಸೀಮಿತವಾಗಿರುವ ಗೇರು ಮಂಡಳಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಗೇರು ಬೆಳೆ ಹೆಚ್ಚಿಸಬೇಕು. ಗೇರು ಮರಕ್ಕೆ ಕಾಳುಮೆಣಸಿನ ಬಳ್ಳಿಯನ್ನು ಬೆಳೆಸಬಹುದು. ಮರ ದೊಡ್ಡವಾದರೆ ಅದರ ಕೆಳಗೆ ಮಿಶ್ರ ಬೇಸಾಯ ಸಹ ಮಾಡಬಹುದು. ಗೇರು ಕೃಷಿ ಮಾಡಿದರೆ ವಾತಾವರಣವೂ ತಂಪಾಗುತ್ತದೆ. ಆಫ್ರಿಕಾದಲ್ಲಿ ಇದು ಸಾಬೀತಾಗಿದೆ.  ನಮ್ಮ ಹಂತದಲ್ಲಿ ಪೇಜಾವರ ಮಠ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಿಜಯಲಕ್ಷ್ಮಿ ಫೌಂಡೇಷನ್‌ ಕೆಸಿಎಂಎ ಸಹಯೋಗದಲ್ಲಿ 2015ರಿಂದ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದೇವೆ.  ಕಸಿ ಮಾಡಿದ ಗೇರು ಸಸಿಯನ್ನು ‘ವೃಕ್ಷ ರಕ್ಷಾ ವಿಶ್ವ ರಕ್ಷಾ’ ಯೋಜನೆಯಡಿ ಉಚಿತವಾಗಿ ನೀಡುತ್ತಿದ್ದೇವೆ. ಈ ವರೆಗೆ 13 ಲಕ್ಷ ಸಸಿ ವಿತರಿಸಿದ್ದೇವೆ. ರಾಜ್ಯದಲ್ಲಿ 4.5 ಕೋಟಿ ಗಿಡ ನೆಟ್ಟರೆ ಮುಂದಿನ 810 ವರ್ಷಗಳಲ್ಲಿ ಇಂದಿನ ಅಗತ್ಯದ ಕಚ್ಚಾ ಗೇರು ಪೂರೈಸಬಹುದು. ಒಂದು ಗಿಡ ನೆಡಲು ₹100 ಖರ್ಚು ಹಿಡಿದರೂ 4.5 ಕೋಟಿ ಗಿಡ ನೆಡಲು ₹450 ಕೋಟಿ ಬೇಕು. 1 ಗಿಡಕ್ಕೆ ವರ್ಷಕ್ಕೆ 10 ಕೆ.ಜಿ. ಕಚ್ಚಾ ಗೇರು ಉತ್ಪಾದನೆಯಾಗುತ್ತದೆ. ಹೀಗಾಗಿ ಇವುಗಳಿಂದ 4.5 ಲಕ್ಷ ಟನ್‌ ಉತ್ಪಾದನೆಯಾದರೆ 810 ವರ್ಷಗಳಲ್ಲಿ ರೈತರಿಗೆ ₹6500 ಕೋಟಿ ಆದಾಯ ಬರುತ್ತದೆ. ಸಂಸ್ಕರಿಸಿದ ಗೇರಿಗೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು ಸರ್ಕಾರಕ್ಕೆ ಒಂದು ದಶಕದಲ್ಲಿ ಹೂಡಿಕೆ ಹಣ ವಾಪಸ್‌ ಬರುತ್ತದೆ. ಉದ್ಯೊಗ ಸೃಜನೆಯೂ ಆಗುತ್ತದೆ.
-ಎಸ್. ಅನಂತ ಕೃಷ್ಣ ರಾವ್‌ ಅಧ್ಯಕ್ಷ ಕರ್ನಾಟಕ ಗೇರು ಉತ್ಪಾದಕರ ಸಂಘ
ಗೇರು ಹಣ್ಣಿನಿಂದ ಕಚ್ಚಾ ಗೇರು ಬೀಜ ಹೊರ ತೆಗೆದ ನಂತರ ಆ ಹಣ್ಣು (ಹಣ್ಣಿನ ಶೇ 80ರಷ್ಟು ಭಾಗ) ಈಗ ಸಂಪೂರ್ಣ ವ್ಯರ್ಥವಾಗುತ್ತಿದೆ. ಇದರಿಂದ ಜ್ಯೂಸ್‌ ಎಥೆನಾಲ್‌ ಫೆನ್ನಿ (ಮದ್ಯ) ತಯಾರಿಸಲು ಅವಕಾಶ ಇದೆ. ಇದು ಸಾಧ್ಯವಾದರೆ ಹೀಗೆ ವ್ಯರ್ಥವಾಗುವ ಗೇರು ಹಣ್ಣಿಗೆ ಕೆ.ಜಿಗೆ ₹10 ದೊರೆತರೂ ರೈತರಿಗೆ ಇದು ಲಾಭದಾಯಕ ಕೃಷಿ ಆಗುತ್ತದೆ. ಗೋವಾದಲ್ಲಿ ತೆರಿಗೆ ವಿಧಿಸದೇ ಫೆನ್ನಿ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದಕ್ಕೆ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಗೇರು ಕೃಷಿಕರು ಹಾಗೂ ಸಂಸ್ಕರಣಾ ಘಟಕಗಳ ನೆರವಿಗೆ ಸರ್ಕಾರ ಬರಬೇಕು. ಸಣ್ಣ ಘಟಕಗಳಿಗೆ ಸಬ್ಸಿಡಿ ನೀಡುವ ಯೋಜನೆ ರೂಪಿಸಬೇಕು. ಕೆಲ ಕಾನೂನು ಸರಳೀಕರಣಗೊಳಿಸಿ ತೆರಿಗೆ ಕಡಿಮೆ ಮಾಡಬೇಕು.
-ಕೆ.ಪ್ರಕಾಶ್‌ ಕಲ್ಬಾವಿ ಗೇರು ಸಂಸ್ಕರಣಾ ಉದ್ಯಮಿ ಮಂಗಳೂರು
ಮಂಗಳೂರಿನ ನವಮಂಗಳೂರು ಬಂದರಿನಲ್ಲಿ ಆಮದು– ರಫ್ತು ದಟ್ಟಣೆ ಇಲ್ಲ. ಹೀಗಾಗಿ ಆಫ್ರಿಕಾ ಖಂಡದಿಂದ ಇಲ್ಲಿಗೆ ಹಡಗಿನಲ್ಲಿ ಕಚ್ಚಾ ಗೇರು ಬೀಜ ತರಿಸಿಕೊಂಡು ಅದನ್ನು ಕೇರಳ ಮತ್ತಿತರ ರಾಜ್ಯಗಳ ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಮಂಗಳೂರು ಕಚ್ಚಾ ಗೇರು ಬೀಜ ಮಾರಾಟದ ಹಬ್‌ ಆಗಿಯೂ ಬೆಳೆಯುತ್ತಿತ್ತು. ಎಪಿಎಂಸಿ ಕಾಯ್ದೆ ರದ್ದಾಗಿದ್ದರಿಂದಾಗಿ ರಾಜ್ಯದಲ್ಲಿ ಐದಾರು ವರ್ಷ ಎಪಿಎಂಸಿ ಶುಲ್ಕ ಇರಲಿಲ್ಲ. ಈ ಕಾರಣ ವರ್ಷಕ್ಕೆ ಸರಾಸರಿ 5 ಲಕ್ಷ ಟನ್‌ ಕಚ್ಚಾ ಗೇರು ಬೀಜ ಮಂಗಳೂರು ಬಂದರಿಗೆ ಬರುತ್ತಿತ್ತು. ಆದರೆ ಈಗ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಮರುಜಾರಿಗೊಳಿಸಿದ್ದು ಅಧಿಸೂಚಿತ ಉತ್ಪನ್ನ ಎಂಬ ಕಾರಣಕ್ಕೆ ಟ್ರೇಡಿಂಗ್‌ ಮಾಡುವ ಕಚ್ಚಾ ಗೇರುಬೀಜಕ್ಕೂ ಎಪಿಎಂಸಿ ಸೆಸ್‌ ವಿಧಿಸಲಾಗುತ್ತಿದೆ. ಇದರ ಪರಿಣಾಮ ಹೊರರಾಜ್ಯದವರು ಇಲ್ಲಿಂದ ಖರೀದಿಸುವುದನ್ನು ನಿಲ್ಲಿಸಿದ್ದರಿಂದ ಈ ವರ್ಷ ಮಂಗಳೂರಿನ ಬಂದರಿಗೆ ಆಮದಾಗುವ ಕಚ್ಚಾ ಗೇರು 2 ಲಕ್ಷ ಟನ್‌ಗೆ ಕುಸಿದಿದೆ. ಅಂದರೆ ₹3000 ಕೋಟಿ ಮೌಲ್ಯದ ಕಚ್ಚಾ ಮಾಲು ಆಮದು ಕಡಿಮೆಯಾಗಿದೆ. ಇದರಿಂದ ₹150 ಕೋಟಿ ಜಿಎಸ್‌ಟಿ ಖೋತಾ ಆಗಿದೆ. ಎಪಿಎಂಸಿಯ (ಶೇ 0.6) ಸೆಸ್‌ನ ₹18 ಕೋಟಿಯ ಆಸೆಗಾಗಿ ₹150 ಕೋಟಿಯ ತೆರಿಗೆಯನ್ನು ಸರ್ಕಾರ ಕಳೆದುಕೊಂಡಿದೆ. 
–ಎಂ. ತುಕಾರಾಮ ಪ್ರಭು ಉಪಾಧ್ಯಕ್ಷ ಕರ್ನಾಟಕ ಗೇರು ಉತ್ಪಾದಕರ ಸಂಘ 
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ನಿಗಮವು ಸುಮಾರು 1 ಸಾವಿರ ಹೆಕ್ಟೇರ್‌ಗಳಷ್ಟು ಗೇರು ತೋಪು ಪುನರುಜ್ಜಿವನಕ್ಕೆ ಕ್ರಮ ಕೈಗೊಂಡಿದೆ. ಗೇರು ಸಸಿ ನರ್ಸರಿ ಅಭಿವೃದ್ಧಿ ಗೇರು ಗಿಡಗಳ ನಾಟಿ ಹಾಗೂ ಹೊಸ ಕಸಿ ಗಿಡಗಳನ್ನು ಬೆಳೆಸಿ ಹಳೆ ಗೇರು ತೋಪುಗಳ ಪುನರುಜ್ಜಿವನಗೊಳಿಸಲು ಒಟ್ಟು ₹ 50 ಕೋಟಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ರಾಷ್ಟ್ರೀಯ ತೋಟಗಾರಿಕಾ ಅಭಿಯಾನದಡಿ ₹ 10 ಕೋಟಿ ಒದಗಿಸುವಂತೆ ಕೋರಿದ್ದೇವೆ.
–ಕಮಲಾ ಕರಿಕಾಳನ್ ವ್ಯವಸ್ಥಾಪಕ ನಿರ್ದೇಶಕಿ ಕರ್ನಾಕ ಗೇರು ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT