ಇದು ಹಳೆಯ ಚಿತ್ರ ಎಂದು ದಿ ಪ್ರಿಂಟ್, ಆಲ್ಟ್ ನ್ಯೂಸ್ 2020ರ ಸೆಪ್ಟೆಂಬರ್ನಲ್ಲಿಯೇ ಫ್ಯಾಕ್ಟ್ಚೆಕ್ ಪ್ರಕಟಿಸಿವೆ. 2020ರ ಸೆಪ್ಟೆಂಬರ್ 20ರಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್, ಟ್ವಿಟರ್ನಲ್ಲಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ಮುಸ್ಲಿಮರು ಕಾಳಿ ಮಾತೆಯ ಮೂರ್ತಿಯನ್ನು ಸುಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೆ, 'ಬೆಂಕಿ ಅವಘಡದಿಂದ ಮೂರ್ತಿ ಸುಟ್ಟುಹೋಗಿದೆ. ಇದರಲ್ಲಿ ಬೇರೆ ಧರ್ಮವನ್ನು ಎಳೆದು ತರುವುದು ಬೇಡ. ನಮ್ಮ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ಇದ್ದೇವೆ' ಎಂದು ದೇವಾಲಯದ ಟ್ರಸ್ಟಿ ಸುಖದೇವ್ ವಾಜಪೇಯಿ ಅವರು ಹೇಳಿಕೆ ನೀಡಿದ್ದರು. ಮುರ್ಶಿದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಸಹ ಇದನ್ನು ದೃಢಪಡಿಸಿದ್ದರು. ಆದರೆ, ಈಗ ಈ ಚಿತ್ರವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.