ರಾಹುಲ್ ಅವರು 2021ರ ಡಿಸೆಂಬರ್ 13ರಂದು ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾಡಿದ್ದ ಭಾಷಣದ ವಿಡಿಯೊ ಇದಾಗಿದ್ದು, ಅವರು ಬಿಜೆಪಿಯನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಇಂಡಿಯಾಟುಡೇ‘ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ‘ಹಿಂದುತ್ವವಾದಿಗಳಿಗೆ ಏನೇ ಆಗಲಿ ಅಧಿಕಾರವೊಂದೇ ಬೇಕು. ಮಹಾತ್ಮಾ ಗಾಂಧಿ ಅವರು ‘ನನಗೆ ಸತ್ಯ ಬೇಕು. ನಾನು ಅದನ್ನು ಬಯಸುತ್ತೇನೆ. ನನಗೆ ಅಧಿಕಾರ ಬೇಕಿಲ್ಲ’ ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಗಾಂಧೀಜಿ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದು, ‘ನನಗೆ ಅಧಿಕಾರ ಬೇಕು, ಸತ್ಯದ ಗೊಡವೆ ಬೇಕಿಲ್ಲ’ ಎಂದು ಹೇಳುತ್ತಿದ್ದಾರೆ’ ಎಂಬುದಾಗಿ ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ್ದ ಮಾತುಗಳನ್ನುರಾಹುಲ್ ತಮ್ಮ ಬಗ್ಗೆಯೇ ಆಡಿರುವ ಮಾತು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದೆ.