ಆದರೆ ಜನಾಂಗೀಯ ಗುಣದ ಕುರಿತಂತೆ ಸದ್ಯಕ್ಕೆ ಯಾವದೇ ಅಧ್ಯಯನ ಕೈಗೊಂಡಿಲ್ಲ ಎಂದು ಐಸಿಎಂಆರ್ ಡಿಜಿ ಪ್ರೊ. ಬಲರಾಮ್ ಭಾರ್ಗವ ಸ್ಪಷ್ಟಪಡಿಸಿದ್ದಾರೆ. ‘ಯಾವುದೇ ಜನಾಂಗ, ಜಾತಿ, ಧರ್ಮ, ಭಾಷೆ, ಗಡಿಗಳೆನ್ನದೆ ಎಲ್ಲರ ಮೇಲೂ ಸೋಂಕು ದಾಳಿ ಮಾಡಬಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಚ್ಚರಿಸಿದ್ದರು. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಐಬಿ ಪ್ರಕಟಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.