‘ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮನ್ನು ತಾವು ನಾಸ್ತಿಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈಚೆಗೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾಗ ತಮ್ಮ ಅಧಿಕೃತ ಕಾರಿನ ನಾಲ್ಕೂ ಚಕ್ರಗಳ ಕೆಳಗೆ ನಿಂಬೆಹಣ್ಣು ಇರಿಸಿ, ದೃಷ್ಟಿ ನಿವಾರಿಸಿದ್ದರು. ದುಷ್ಟಶಕ್ತಿಗಳು ತಾಗದೇ ಇರಲಿ ಎಂದು ಹಾಗೆ ಮಾಡಿದ್ದರು’ ಎಂಬ ವಿವರ ಇರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರಿನ ಚಕ್ರಗಳ ಮುಂದೆ ನಿಂಬೆಹಣ್ಣು ಇರಿಸಿರುವ ಚಿತ್ರವೂ ವೈರಲ್ ಆಗಿದೆ.