ನಾಗಪುರದ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದ, ಆರ್ಎಸ್ಎಸ್ನ ಸ್ವಯಂಸೇವಕ85 ವರ್ಷದ ನಾರಾಯಣ ದಭಾಡ್ಕರ್ ಅವರು ಬೇರೆ ವ್ಯಕ್ತಿಗೆ ಹಾಸಿಗೆ ಬಿಟ್ಟುಕೊಟ್ಟಿದ್ದರು. 40 ವರ್ಷದ ಕೋವಿಡ್ ರೋಗಿಯೊಬ್ಬರಿಗೆ ಹಾಸಿಗೆ ಸಿಗದ ಕಾರಣ, ಆ ವ್ಯಕ್ತಿಯ ಪತ್ನಿ ಆಸ್ಪತ್ರೆ ಸಿಬ್ಬಂದಿಯನ್ನು ಅಂಗಲಾಚುತ್ತಿದ್ದರು. ಅದನ್ನು ನೋಡಿ ನಾರಾಯಣ ತನ್ನ ಹಾಸಿಗೆ ಬಿಟ್ಟುಕೊಟ್ಟಿದ್ದರು. ಹಾಸಿಗೆ ಬಿಟ್ಟುಕೊಟ್ಟ ನಾಲ್ಕೇ ದಿನದಲ್ಲಿ ನಾರಾಯಣ ಮೃತರಾದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದು ವೈರಲ್ ಸಹ ಆಗಿತ್ತು.