ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಮೃತಪಟ್ಟ ಬಳಿಕ, ಎನ್ಡಿ ಟಿ.ವಿ.ಯ ಪತ್ರಕರ್ತ ರವೀಶ್ ಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಈ ಹೇಳಿಕೆಗೆ ಖಂಡನೆ ಕೂಡಾ ವ್ಯಕ್ತವಾಗುತ್ತಿದೆ. ‘ಬಿಪಿನ್ ರಾವತ್ ಅವರಪತ್ನಿ ಏಕೆ ಸೇನಾ ವಿಮಾನದಲ್ಲಿ ಇದ್ದರು’ ಎಂದು ರವೀಶ್ ಕುಮಾರ್ ಪ್ರಶ್ನಿಸಿದ್ದಾರೆ ಎಂದು ವೈರಲ್ ಆಗಿರುವ ಟ್ವೀಟ್ಗಳಲ್ಲಿ ಹೇಳಲಾಗಿದೆ.