ಹೋಳಿಗೆ ಕಜ್ಜಾಯ ಎಂದಾಕ್ಷಣ ಥಟ್ಟನೆ ಕೇಳುವುದು ಕಾಯಿ ಹೋಳಿಗೆಯಾ ? ಕಡಲೆ ಬೇಳೆ ಹೋಳಿಗೆಯಾ ? ಇವೆರಡು ಬಗೆಯ ಹೋಳಿಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹೋಳಿಗೆಯಲ್ಲೇ ಹೊಸ ರುಚಿ ಪ್ರಯೋಗ ಮಾಡಬೇಕು, ಅದು ಸ್ವಾದಿಷ್ಟವೂ ಇರಬೇಕು ಜೊತೆಗೆ ಕೃಷಿಕರಿಗೆ ಇದರಿಂದ ಅನುಕೂಲ ಆಗಬೇಕು ಎಂಬ ಮಹದಾಸೆಯಿಂದ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರು ಅಡಿಕೆ ಮತ್ತು ಕೋಕೊದಿಂದ ಹೋಳಿಗೆ ತಯಾರಿಸಿ, ಗ್ರಾಹಕ ಮನಗೆದ್ದಿದ್ದಾರೆ.