<p>ಬೇಸಿಗೆ ಬಂತೆಂದರೆ ಹೆಚ್ಚಿನವರ ಮನಸ್ಸು ಬೇಡುವುದು ದೇಹ ತಂಪಾಗಿಸುವ ಮಜ್ಜಿಗೆಯನ್ನು. ಆಯುರ್ವೇದದಲ್ಲಿ ‘ಭೂಮಿಯ ಮೇಲಿನ ಅಮೃತ’ ಎಂದೇ ಕರೆಯಲಾಗುವ ಮಜ್ಜಿಗೆಯನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?</p>.<p>ಮಜ್ಜಿಗೆ ಅದರಲ್ಲೂ ಹಸುವಿನ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ಹಲವು ಬಗೆಯ ವ್ಯಾಧಿಯನ್ನು ಉಪಶಮನಗೊಳಿಸುತ್ತದೆ. ಪಿತ್ತವಾಂತಿ, ಹೊಟ್ಟೆಯುಬ್ಬರ, ಸ್ಥೂಲಕಾಯದಂತಹ ಸಮಸ್ಯೆಗಳು ಇರುವವರು ಮಜ್ಜಿಗೆ ಸೇವನೆ ಮಾಡುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.</p>.<p>ಮಜ್ಜಿಗೆಯನ್ನು ಘೋಲ, ಮಥಿತ, ತಕ್ರ ಹಾಗೂ ಉದಧಿತ ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ವಾತ, ಪಿತ್ತನಾಶಕ, ಪೌಷ್ಟಿಕ ಹಾಗೂ ಶಕ್ತಿವರ್ಧಕವಾದ ಮಜ್ಜಿಗೆಯನ್ನು ‘ಘೋಲ’ ಮಜ್ಜಿಗೆ ಎಂದು ಕರೆಯಲಾಗುತ್ತದೆ. ಈ ಬಗೆಯ ಮಜ್ಜಿಗೆಯನ್ನು ತಯಾರಿಸುವಾಗ ಸ್ವಲ್ಪವೂ ನೀರನ್ನು ಬೆರೆಸದೆ, ಬೆಣ್ಣೆಯನ್ನು ತೆಗೆಯದೆ ಮೊಸರನ್ನು ಕಡೆದು, ದಪ್ಪ ದ್ರವವಾಗಿ ಉಪಯೋಗಿಲಾಗುತ್ತದೆ. ಚಿಟಿಕೆ ಇಂಗು ಮತ್ತು ಜೀರಿಗೆ ಸೇರಿಸಿ ಕುಡಿದರೆ ಮೂಲವ್ಯಾಧಿ, ಅತಿಸಾರ, ಕಫ, ವಾತವಿಕಾರ, ಮಲ-ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೆ ಈ ಮಜ್ಜಿಗೆಯು ದಿವ್ಯೌಷಧಿಯಾಗಿದೆ. ಚಳಿಗಾಲದಲ್ಲಿ ಇದು ದೇಹಕ್ಕೆ ಒಳ್ಳೆಯದು.</p>.<p>ಇನ್ನು ಮೊಸರಿಗೆ ನೀರನ್ನು ಸೇರಿಸದೇ ಕಡೆದು ಬೆಣ್ಣೆಯನ್ನು ತೆಗೆದು ಉಪಯೋಗಿಸುವುದನ್ನು ‘ಮಥಿತ’ ಎಂದು ಕರೆಯುತ್ತಾರೆ. ಹೀಗೆ ತಯಾರಿಸಿದ ಮಜ್ಜಿಗೆಯನ್ನು ಉಪಯೋಗಿಸುವುದು ಕಫನಾಶಕ ಹಾಗೂ ಕೆಮ್ಮಿನಲ್ಲಿ ಕಫ ಕಟ್ಟುವುದನ್ನು ತಡೆಯುತ್ತದೆ.</p>.<p>ಮೊಸರಿನ ಕಾಲು ಭಾಗದಷ್ಟು ನೀರನ್ನು ಸೇರಿಸಿ ಕಡೆದು ಬೆಣ್ಣೆ ತೆಗೆದರೆ ಅದನ್ನು ‘ತಕ್ರ’ ಎಂದು ಕರೆಯುತ್ತಾರೆ.</p>.<p>ಮೊಸರಿನ ಅರ್ಧದಷ್ಟು ನೀರು ಸೇರಿಸಿ, ಮೊಸರನ್ನು ಕಡೆದು ಬೆಣ್ಣೆ ತೆಗೆದಾಗ ಅದನ್ನು ‘ಉದಧಿತ’ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ತಯಾರಿಸಿದ ಮಜ್ಜಿಗೆಯು ಕಣ್ಣುಗಳಿಗೆ ಶಕ್ತಿ ನೀಡುತ್ತದೆ.</p>.<p>ಹುಳಿ ಮಜ್ಜಿಗೆಗೆ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ವಾತ ರೋಗ ಕಡಿಮೆಯಾಗುತ್ತದೆ. ಸಿಹಿ ಮಜ್ಜಿಗೆಗೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಪಿತ್ತ ಮಾಯವಾಗುತ್ತದೆ. ಉದಧಿತ ಮಜ್ಜಿಗೆಗೆ ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪನ್ನು ಬೆರೆಸಿ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ.</p>.<p>ಸಿಹಿ ಮಜ್ಜಿಗೆಯನ್ನು ಎಲ್ಲಾ ಬಗೆಯ ರೋಗಿಗಳು ದಿನವೂ ಉಪಯೋಗಿಸಬಹುದು. ಹೆಚ್ಚು ಖರ್ಚಿಲ್ಲದ, ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸಬಹುದಾದ ಮಜ್ಜಿಗೆಯನ್ನು, ಅದರಿಂದಾಗುವ ಪ್ರಯೋಜನಗಳ ದೃಷ್ಟಿಯಿಂದ ನಿಜಕ್ಕೂ ಭೂಮಿಯ ಮೇಲಿನ ಅಮೃತ ಎಂದೇ ಹೇಳಬಹುದು.</p>
<p>ಬೇಸಿಗೆ ಬಂತೆಂದರೆ ಹೆಚ್ಚಿನವರ ಮನಸ್ಸು ಬೇಡುವುದು ದೇಹ ತಂಪಾಗಿಸುವ ಮಜ್ಜಿಗೆಯನ್ನು. ಆಯುರ್ವೇದದಲ್ಲಿ ‘ಭೂಮಿಯ ಮೇಲಿನ ಅಮೃತ’ ಎಂದೇ ಕರೆಯಲಾಗುವ ಮಜ್ಜಿಗೆಯನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?</p>.<p>ಮಜ್ಜಿಗೆ ಅದರಲ್ಲೂ ಹಸುವಿನ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ಹಲವು ಬಗೆಯ ವ್ಯಾಧಿಯನ್ನು ಉಪಶಮನಗೊಳಿಸುತ್ತದೆ. ಪಿತ್ತವಾಂತಿ, ಹೊಟ್ಟೆಯುಬ್ಬರ, ಸ್ಥೂಲಕಾಯದಂತಹ ಸಮಸ್ಯೆಗಳು ಇರುವವರು ಮಜ್ಜಿಗೆ ಸೇವನೆ ಮಾಡುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.</p>.<p>ಮಜ್ಜಿಗೆಯನ್ನು ಘೋಲ, ಮಥಿತ, ತಕ್ರ ಹಾಗೂ ಉದಧಿತ ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ವಾತ, ಪಿತ್ತನಾಶಕ, ಪೌಷ್ಟಿಕ ಹಾಗೂ ಶಕ್ತಿವರ್ಧಕವಾದ ಮಜ್ಜಿಗೆಯನ್ನು ‘ಘೋಲ’ ಮಜ್ಜಿಗೆ ಎಂದು ಕರೆಯಲಾಗುತ್ತದೆ. ಈ ಬಗೆಯ ಮಜ್ಜಿಗೆಯನ್ನು ತಯಾರಿಸುವಾಗ ಸ್ವಲ್ಪವೂ ನೀರನ್ನು ಬೆರೆಸದೆ, ಬೆಣ್ಣೆಯನ್ನು ತೆಗೆಯದೆ ಮೊಸರನ್ನು ಕಡೆದು, ದಪ್ಪ ದ್ರವವಾಗಿ ಉಪಯೋಗಿಲಾಗುತ್ತದೆ. ಚಿಟಿಕೆ ಇಂಗು ಮತ್ತು ಜೀರಿಗೆ ಸೇರಿಸಿ ಕುಡಿದರೆ ಮೂಲವ್ಯಾಧಿ, ಅತಿಸಾರ, ಕಫ, ವಾತವಿಕಾರ, ಮಲ-ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೆ ಈ ಮಜ್ಜಿಗೆಯು ದಿವ್ಯೌಷಧಿಯಾಗಿದೆ. ಚಳಿಗಾಲದಲ್ಲಿ ಇದು ದೇಹಕ್ಕೆ ಒಳ್ಳೆಯದು.</p>.<p>ಇನ್ನು ಮೊಸರಿಗೆ ನೀರನ್ನು ಸೇರಿಸದೇ ಕಡೆದು ಬೆಣ್ಣೆಯನ್ನು ತೆಗೆದು ಉಪಯೋಗಿಸುವುದನ್ನು ‘ಮಥಿತ’ ಎಂದು ಕರೆಯುತ್ತಾರೆ. ಹೀಗೆ ತಯಾರಿಸಿದ ಮಜ್ಜಿಗೆಯನ್ನು ಉಪಯೋಗಿಸುವುದು ಕಫನಾಶಕ ಹಾಗೂ ಕೆಮ್ಮಿನಲ್ಲಿ ಕಫ ಕಟ್ಟುವುದನ್ನು ತಡೆಯುತ್ತದೆ.</p>.<p>ಮೊಸರಿನ ಕಾಲು ಭಾಗದಷ್ಟು ನೀರನ್ನು ಸೇರಿಸಿ ಕಡೆದು ಬೆಣ್ಣೆ ತೆಗೆದರೆ ಅದನ್ನು ‘ತಕ್ರ’ ಎಂದು ಕರೆಯುತ್ತಾರೆ.</p>.<p>ಮೊಸರಿನ ಅರ್ಧದಷ್ಟು ನೀರು ಸೇರಿಸಿ, ಮೊಸರನ್ನು ಕಡೆದು ಬೆಣ್ಣೆ ತೆಗೆದಾಗ ಅದನ್ನು ‘ಉದಧಿತ’ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ತಯಾರಿಸಿದ ಮಜ್ಜಿಗೆಯು ಕಣ್ಣುಗಳಿಗೆ ಶಕ್ತಿ ನೀಡುತ್ತದೆ.</p>.<p>ಹುಳಿ ಮಜ್ಜಿಗೆಗೆ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ವಾತ ರೋಗ ಕಡಿಮೆಯಾಗುತ್ತದೆ. ಸಿಹಿ ಮಜ್ಜಿಗೆಗೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಪಿತ್ತ ಮಾಯವಾಗುತ್ತದೆ. ಉದಧಿತ ಮಜ್ಜಿಗೆಗೆ ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪನ್ನು ಬೆರೆಸಿ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ.</p>.<p>ಸಿಹಿ ಮಜ್ಜಿಗೆಯನ್ನು ಎಲ್ಲಾ ಬಗೆಯ ರೋಗಿಗಳು ದಿನವೂ ಉಪಯೋಗಿಸಬಹುದು. ಹೆಚ್ಚು ಖರ್ಚಿಲ್ಲದ, ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸಬಹುದಾದ ಮಜ್ಜಿಗೆಯನ್ನು, ಅದರಿಂದಾಗುವ ಪ್ರಯೋಜನಗಳ ದೃಷ್ಟಿಯಿಂದ ನಿಜಕ್ಕೂ ಭೂಮಿಯ ಮೇಲಿನ ಅಮೃತ ಎಂದೇ ಹೇಳಬಹುದು.</p>