<p><strong>ನವದೆಹಲಿ</strong>: ದೇಶದಲ್ಲಿ ಬಹುತೇಕ ಜನರು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಗಮನ ಕೊಡದೇ ಹೆಚ್ಚೆಚ್ಚು ಆಹಾರವನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ದೆಹಲಿಯ ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಏಮ್ಸ್ನ ಮುಖ್ಯ ಆಹಾರತಜ್ಞೆ ಪರಮೀತ್ ಕೌರ್ ಅವರು ಸ್ಥೂಲಕಾಯತೆಯ ಪರಿಣಾಮದ ಬಗೆಗಿನ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.</p><p>ಹೆಚ್ಚುತ್ತಿರುವ ಸ್ಥೂಲಕಾಯವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೂ ಪ್ರಮುಖ ಕಾರಣವಾಗಿ ಬದಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಮುಂದುವರೆದ ಹಾಗೂ ಇತರ ಕೆಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಅತಿ ಹೆಚ್ಚು ಆಹಾರ ಸೇವಿಸುತ್ತಾರೆ. ಅಗತ್ಯ ಇಲ್ಲದಿದ್ದರೂ ತಿನ್ನುತ್ತಾರೆ. ಅದರಲ್ಲೂ ಬಹುತೇಕರು ಹೀಗೆ ತಿನ್ನುವಾಗ ಸಮತೋಲಿತ ಆಹಾರಕ್ಕೆ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.</p><p>ಧಾನ್ಯಗಳು, ಸೊಪ್ಪು, ತರಕಾರಿ, ಹಣ್ಣನ್ನು ಆಹಾರವಾಗಿ ಬಳಸುವವರ ಹಾಗೂ ಪ್ರೊಟೀನ್ ಅನ್ನು ಸಮರ್ಪಕವಾಗಿ ಬಳಸುವವ ಭಾರತೀಯರ ಪ್ರಮಾಣ ಇತ್ತೀಚೆಗೆ ತೀರಾ ಕಡಿಮೆಯಾಗುತ್ತಿದೆ. ಇದರಿಂದ ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದಲ್ಲಿ ಬಹುತೇಕ ಜನರು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಗಮನ ಕೊಡದೇ ಹೆಚ್ಚೆಚ್ಚು ಆಹಾರವನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ದೆಹಲಿಯ ಏಮ್ಸ್ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಏಮ್ಸ್ನ ಮುಖ್ಯ ಆಹಾರತಜ್ಞೆ ಪರಮೀತ್ ಕೌರ್ ಅವರು ಸ್ಥೂಲಕಾಯತೆಯ ಪರಿಣಾಮದ ಬಗೆಗಿನ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.</p><p>ಹೆಚ್ಚುತ್ತಿರುವ ಸ್ಥೂಲಕಾಯವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೂ ಪ್ರಮುಖ ಕಾರಣವಾಗಿ ಬದಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.</p><p>ಮುಂದುವರೆದ ಹಾಗೂ ಇತರ ಕೆಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಅತಿ ಹೆಚ್ಚು ಆಹಾರ ಸೇವಿಸುತ್ತಾರೆ. ಅಗತ್ಯ ಇಲ್ಲದಿದ್ದರೂ ತಿನ್ನುತ್ತಾರೆ. ಅದರಲ್ಲೂ ಬಹುತೇಕರು ಹೀಗೆ ತಿನ್ನುವಾಗ ಸಮತೋಲಿತ ಆಹಾರಕ್ಕೆ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.</p><p>ಧಾನ್ಯಗಳು, ಸೊಪ್ಪು, ತರಕಾರಿ, ಹಣ್ಣನ್ನು ಆಹಾರವಾಗಿ ಬಳಸುವವರ ಹಾಗೂ ಪ್ರೊಟೀನ್ ಅನ್ನು ಸಮರ್ಪಕವಾಗಿ ಬಳಸುವವ ಭಾರತೀಯರ ಪ್ರಮಾಣ ಇತ್ತೀಚೆಗೆ ತೀರಾ ಕಡಿಮೆಯಾಗುತ್ತಿದೆ. ಇದರಿಂದ ಭಾರತೀಯರಲ್ಲಿ ಶೇ 56 ರಷ್ಟು ರೋಗಗಳು ಕೆಟ್ಟ ಆಹಾರ ಪದ್ದತಿಯಿಂದಲೇ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>