ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ
Published 3 ಆಗಸ್ಟ್ 2025, 0:07 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೆಚ್ಚಿನ ಹೂಡಿಕೆಯ ಬಗ್ಗೆ ತಿಳಿದವರೊಂದಿಗೆ ಮಾತುಕತೆ ನಡೆಸಿ ತೀರ್ಮಾನಿಸಿ. ಔದಾರ್ಯದಿಂದ ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಏಳಿಗೆಯನ್ನು ಕಾಣುವಿರಿ. ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
03 ಆಗಸ್ಟ್ 2025, 00:07 IST
ವೃಷಭ
ಐಶ್ವರ್ಯವು ಅನಿರೀಕ್ಷಿತವಾಗಿ ಬಂದಾಗ ದುಂದುವೆಚ್ಚ ಮಾಡದೆ ಬುದ್ಧಿವಂತಿಕೆಯಿಂದ ಸದುಪಯೋಗ ಪಡಿಸಿಕೊಳ್ಳಿ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಸನ್ನಿವೇಶಗಳು ಈ ದಿನ ನಿಮಗೆ ಎದುರಾಗಲಿದೆ.
03 ಆಗಸ್ಟ್ 2025, 00:07 IST
ಮಿಥುನ
ಅಧಿಕಾರಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಲಿದ್ದು, ಆತ್ಮವಿಶ್ವಾಸ ಬೆಳೆಯುವುದು. ಬಳೆ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭ. ಮಕ್ಕಳಿಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ಹೆಚ್ಚುವುದು.
03 ಆಗಸ್ಟ್ 2025, 00:07 IST
ಕರ್ಕಾಟಕ
ಹಿರಿಯರ ಬಳಿಯಲ್ಲಿ ಅನಾವಶ್ಯಕವಾದ ವಿವಾದ, ಗೊಂದಲಗಳಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಶಿಕ್ಷಣಕ್ಕೆಂದು ವಿದೇಶಕ್ಕೆ ತೆರಳಿದ ಮಗನ ಆಗಮನವಾಗುವುದು. ನಿಮ್ಮ ಸ್ಪರ್ಧಾಮನೋಭಾವಗಳು ತೀವ್ರಗೊಳ್ಳುವುದು.
03 ಆಗಸ್ಟ್ 2025, 00:07 IST
ಸಿಂಹ
ಹೊಸ ಯೋಜನೆಗಳ ಜಂಟಿ ಕಾರ್ಯಾಚರಣೆಯ ವಿಷಯವಾಗಿ ಸ್ನೇಹಿತರೊಡನೆ ಮಾತುಕತೆ ನಡೆಯಲಿದೆ. ರಂಗಕರ್ಮಿಗಳಿಗೆ ಮತ್ತು ಟಿ.ವಿ ಕಲಾವಿದರಿಗೆ ಒಳ್ಳೆಯ ದಿನ. ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ.
03 ಆಗಸ್ಟ್ 2025, 00:07 IST
ಕನ್ಯಾ
ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ. ಆರ್ಥಿಕ ಬಲವನ್ನು ಮತ್ತು ನೆಮ್ಮದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಹೊಂದಿರುವ ನಿಮಗೆ ಗಣಪತಿಯ ಆರಾಧನೆ ಶುಭವನ್ನುಂಟುಮಾಡುವುದು.
03 ಆಗಸ್ಟ್ 2025, 00:07 IST
ತುಲಾ
ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಅಪಾರವೆಂದು ಅನಿಸಲಿದೆ. ಪರೋಪಕಾರ ಮಾಡಲು ಹೋಗಿ ಯಾವುದೋ ಅಪವಾದಕ್ಕೆ ಒಳಗಾಗುವಂತೆ ಆಗಲಿದೆ. ಕೆಲವು ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಬಯಸುವಿರಿ.
03 ಆಗಸ್ಟ್ 2025, 00:07 IST
ವೃಶ್ಚಿಕ
ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹತ್ತಾರು ರೀತಿಯಲ್ಲಿ ಯೋಚನೆ ಮಾಡುವುದಕ್ಕಿಂತ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಉತ್ತಮ.
03 ಆಗಸ್ಟ್ 2025, 00:07 IST
ಧನು
ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ. ಮುರಿದುಬಿದ್ದಿದ್ದ ಸಂಬಂಧ ಮತ್ತೆ ಚಿಗುರೊಡೆಯುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು.
03 ಆಗಸ್ಟ್ 2025, 00:07 IST
ಮಕರ
ಇಂದು ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಮನಸ್ಸಿಗೆ ಬೇಸರವಿರುವುದು. ವಿದ್ವಾಂಸರೊಡನೆ ಕೆಲ ಹೊತ್ತು ಕಳೆಯುವ ಸಂಭವವಿದೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಸಮಯ ಕಳೆಯುರಿ.
03 ಆಗಸ್ಟ್ 2025, 00:07 IST
ಕುಂಭ
ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಮಕ್ಕಳಿಂದ ದುಬಾರಿ ವಸ್ತುಗಳ ಖರೀದಿಯಾಗಬಹುದು. ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿಯೇ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ಮಹಾಲಕ್ಷ್ಮಿ ಆರಾಧಿಸಿ.
03 ಆಗಸ್ಟ್ 2025, 00:07 IST
ಮೀನ
ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ. ದುರಾಸೆಯ ಸ್ವಭಾವದಿಂದ ಹೊರಬನ್ನ. ಮಕ್ಕಳ ಮೊದಲ ತೊದಲ ನುಡಿಗಳು ನಿಮ್ಮ ಸಂತೋಷಕ್ಕೆ ಕಾರಣವಾಗುವುದು.
03 ಆಗಸ್ಟ್ 2025, 00:07 IST