ಗಾಯಗೊಂಡಿರುವ ಚಾಲಕ ಮುಜೀಬ್, ಖರೀದಿದಾರ ಅಬ್ದುಲ್ ಸಲೀಂ, ಬಸವಕುಮಾರ ಚೌಕನಪಳ್ಳೆ, ವಿಶಾಲ, ಪ್ರೇಮ ರಾಠೋಡ್ ಸೇರಿ ಆರು ಜನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ.