<p><strong>ಚಿತ್ರದುರ್ಗ</strong>: ‘ದಾವಣಗೆರೆ–ಚಿತ್ರದುರ್ಗ–ತುಮಕೂರು ನಡುವೆ ನೇರ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ಮುಂದಿನ ವರ್ಷಾಂತ್ಯಕ್ಕೆ (2027ರ ಡಿಸೆಂಬರ್) ಪೂರ್ಣಗೊಳ್ಳ ಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.</p>. <p>ತಾಲ್ಲೂಕಿನ ಹಂಪನೂರು ಗ್ರಾಮದ ಬಳಿ ಗುರುವಾರ ರೈಲ್ವೆ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.</p>. <p>‘ದಾವಣಗೆರೆ–ತುಮಕೂರು ಮಾರ್ಗಮಾತ್ರವಲ್ಲದೇ ಗದಗ–ವಾಡಿ, ರಾಯದುರ್ಗ–ತುಮಕೂರು ನಡುವಣ ಮಾರ್ಗವನ್ನೂ 2027ರ ಅಂತ್ಯಕ್ಕೆ ಪೂರ್ಣಗೊಳಿ ಸಲಾಗುವುದು’ ಎಂದರು.</p>. <p>‘ದಾವಣಗೆರೆಯಿಂದ ಹೆಬ್ಬಾಳ ಗ್ರಾಮದವರೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ನಾನು ಮೋಟಾರ್ ಟ್ರಾಲಿ ಮೂಲಕ ಸಂಚರಿಸಿ ಪರಿಶೀಲಿಸಿದ್ದೇನೆ. ಚಿತ್ರದುರ್ಗದ ಬಳಿ ಕಾಮಗಾರಿ ಸ್ವಲ್ಪ ತಡ<br>ವಾಗಿದೆ. 6 ತಿಂಗಳ ಒಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದರು.</p>. <p>‘ಸದ್ಯ ದೇಶದ ವಿವಿಧೆಡೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳಲ್ಲಿ ತುಮಕೂರು– ದಾವಣಗೆರೆ ಮಾರ್ಗಕ್ಕೆ ಹೆಚ್ಚು ಮೇಲ್ಸೇತುವೆ, ಕೆಳಸೇತುವೆಗಳನ್ನು ನೀಡಲಾಗಿದೆ. ಸ್ಥಳೀಯ ಗ್ರಾಮಸ್ಥರ ಅಗತ್ಯಗಳಿಗೆ ಅನುಗುಣ ವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಸಿರಿಗೆರೆಬಳಿ ನಿಲ್ದಾಣ ನಿರ್ಮಿಸುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೋರಿದ್ದಾರೆ. ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳ<br>ಲಾಗುವುದು’ ಎಂದರು.</p>. <p>‘ನಾನು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟೆ. ದಾವಣಗೆರೆ ತಲುಪಲು 5 ಗಂಟೆ ಹಿಡಿ<br>ಯಿತು. ನೇರ ರೈಲು ಮಾರ್ಗ ಪೂರ್ಣಗೊಂಡರೆ ಎರಡೂವರೆ ಗಂಟೆಯಲ್ಲಿ ತಲುಪಬಹುದು’ ಎಂದರು.</p>.<div><div class="bigfact-title">ಸಿದ್ದರಾಮಯ್ಯ–ಡಿಕೆಶಿ ಕಿಲಾಡಿಗಳು</div><div class="bigfact-description">‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಳ ಕಿಲಾಡಿಗಳು. ಅವರ ಕಪಟ ನಾಟಕವನ್ನು ನೋಡಿ ಜನ ತಬ್ಬಲಿ ಗಳಾಗಿದ್ದಾರೆ. ನನ್ನ ರಾಜಕೀಯ ಬದುಕಿನಲ್ಲಿ ಇಂತಹ ಕಿಲಾಡಿಗಳನ್ನು ನೋಡಿಲ್ಲ’ ಎಂದು ವಿ. ಸೋಮಣ್ಣ ವ್ಯಂಗ್ಯವಾಡಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ದಾವಣಗೆರೆ–ಚಿತ್ರದುರ್ಗ–ತುಮಕೂರು ನಡುವೆ ನೇರ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ಮುಂದಿನ ವರ್ಷಾಂತ್ಯಕ್ಕೆ (2027ರ ಡಿಸೆಂಬರ್) ಪೂರ್ಣಗೊಳ್ಳ ಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.</p>. <p>ತಾಲ್ಲೂಕಿನ ಹಂಪನೂರು ಗ್ರಾಮದ ಬಳಿ ಗುರುವಾರ ರೈಲ್ವೆ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.</p>. <p>‘ದಾವಣಗೆರೆ–ತುಮಕೂರು ಮಾರ್ಗಮಾತ್ರವಲ್ಲದೇ ಗದಗ–ವಾಡಿ, ರಾಯದುರ್ಗ–ತುಮಕೂರು ನಡುವಣ ಮಾರ್ಗವನ್ನೂ 2027ರ ಅಂತ್ಯಕ್ಕೆ ಪೂರ್ಣಗೊಳಿ ಸಲಾಗುವುದು’ ಎಂದರು.</p>. <p>‘ದಾವಣಗೆರೆಯಿಂದ ಹೆಬ್ಬಾಳ ಗ್ರಾಮದವರೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ನಾನು ಮೋಟಾರ್ ಟ್ರಾಲಿ ಮೂಲಕ ಸಂಚರಿಸಿ ಪರಿಶೀಲಿಸಿದ್ದೇನೆ. ಚಿತ್ರದುರ್ಗದ ಬಳಿ ಕಾಮಗಾರಿ ಸ್ವಲ್ಪ ತಡ<br>ವಾಗಿದೆ. 6 ತಿಂಗಳ ಒಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದರು.</p>. <p>‘ಸದ್ಯ ದೇಶದ ವಿವಿಧೆಡೆ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳಲ್ಲಿ ತುಮಕೂರು– ದಾವಣಗೆರೆ ಮಾರ್ಗಕ್ಕೆ ಹೆಚ್ಚು ಮೇಲ್ಸೇತುವೆ, ಕೆಳಸೇತುವೆಗಳನ್ನು ನೀಡಲಾಗಿದೆ. ಸ್ಥಳೀಯ ಗ್ರಾಮಸ್ಥರ ಅಗತ್ಯಗಳಿಗೆ ಅನುಗುಣ ವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಸಿರಿಗೆರೆಬಳಿ ನಿಲ್ದಾಣ ನಿರ್ಮಿಸುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೋರಿದ್ದಾರೆ. ಈ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳ<br>ಲಾಗುವುದು’ ಎಂದರು.</p>. <p>‘ನಾನು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟೆ. ದಾವಣಗೆರೆ ತಲುಪಲು 5 ಗಂಟೆ ಹಿಡಿ<br>ಯಿತು. ನೇರ ರೈಲು ಮಾರ್ಗ ಪೂರ್ಣಗೊಂಡರೆ ಎರಡೂವರೆ ಗಂಟೆಯಲ್ಲಿ ತಲುಪಬಹುದು’ ಎಂದರು.</p>.<div><div class="bigfact-title">ಸಿದ್ದರಾಮಯ್ಯ–ಡಿಕೆಶಿ ಕಿಲಾಡಿಗಳು</div><div class="bigfact-description">‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಳ ಕಿಲಾಡಿಗಳು. ಅವರ ಕಪಟ ನಾಟಕವನ್ನು ನೋಡಿ ಜನ ತಬ್ಬಲಿ ಗಳಾಗಿದ್ದಾರೆ. ನನ್ನ ರಾಜಕೀಯ ಬದುಕಿನಲ್ಲಿ ಇಂತಹ ಕಿಲಾಡಿಗಳನ್ನು ನೋಡಿಲ್ಲ’ ಎಂದು ವಿ. ಸೋಮಣ್ಣ ವ್ಯಂಗ್ಯವಾಡಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>