ಶಾಶ್ವತ ರಸ್ತೆ ಬೇಕು ದಸರಾ ದಶಮಂಟಪಗಳು ಸಾಗುವ ದಾರಿಯಲ್ಲಿ ಶಾಶ್ವತವಾದ ರಸ್ತೆ ನಿರ್ಮಾಣವಾಗಬೇಕು. ಈಗ ಪ್ರತಿ ವರ್ಷವೂ ಕೇವಲ ಗುಂಡಿ ಮುಚ್ಚುವ ಕಾರ್ಯವಷ್ಟೇ ನಡೆಯುತ್ತಿದೆ. ಇದರ ಬದಲು ಉತ್ತಮ ಗುಣಮಟ್ಟದಿಂದ ಕೂಡಿದ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕುಬಿ.ಎಂ.ಹರೀಶ್ ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ
ಕರಗೋತ್ಸವ ಆರಂಭಕ್ಕೂ ಮುನ್ನವೇ ದುರಸ್ತಿ ಮಾಡಿ ಮಡಿಕೇರಿ ನಗರದಲ್ಲಿ ಕರಗೋತ್ಸವ ಆರಂಭವಾಗುವ ಮುನ್ನವೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿ. ಕರಗಧಾರಿಗಳು ಬರಿಗಾಲಿನಲ್ಲಿ ನಡೆಯುವುದರಿಂದ ಕೇವಲ ಮುಖ್ಯರಸ್ತೆಗಳನ್ನು ಮಾತ್ರವಲ್ಲ ನಗರದ ಒಳಭಾಗದ ರಸ್ತೆಗಳನ್ನು ದುರಸ್ತಿಪಡಿಸಿ. ಈ ಕೆಲಸ ಜರೂರು ಎಂದು ಪರಿಗಣಿಸಿ ಆದಷ್ಟು ಬೇಗ ಮಾಡಿರಿಜಿ.ವಿ.ರವಿಕುಮಾರ್ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿಯ ಗೌರವಾಧ್ಯಕ್ಷ
ಟೆಂಡರ್ ಆಗಿದೆ ಕಾರ್ಯಾದೇಶವೂ ನೀಡಲಾಗಿದೆ ಮಳೆ ನಿಂತಿಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲು ₹ 10 ಲಕ್ಷದ ಟೆಂಡರ್ ಆಗಿದೆ. ಕಾರ್ಯಾದೇಶವನ್ನೂ ನೀಡಲಾಗಿದೆ. ಕೆಲಸ ಮಾಡಲು ಗುತ್ತಿಗೆದಾರರೂ ತಯಾರಾಗಿ ಎಲ್ಲ ಪರಿಕರಗಳೊಂದಿಗೆ ಬಂದಿದ್ದಾರೆ. ಆದರೆ ಶನಿವಾರ ಮತ್ತೆ ಮಳೆ ಸುರಿದಿದೆ. ಇದರಿಂದ ನೀರಿನ ತೇವಾಂಶ ಹೆಚ್ಚಾಗಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ಈಗ ಗುಂಡಿ ಮುಚ್ಚಿದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಾಗಿ ತೇವಾಂಶ ಹೋಗಿ ಗುಂಡಿ ಒಣಗಲಿ ಎಂದು ಕಾಯುತ್ತಿದ್ದೇವೆ. ಆದರೆ ಭಾನುವಾರವೂ ಮೋಡಮುಸುಕಿದ ವಾತಾವರಣ ಇದೆ. ಸ್ವಲ್ಪ ಬಿಸಿಲು ಬಂದರೂ ಸಾಕು ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು. ಇನ್ನು ಶಾಶ್ವತ ರಸ್ತೆ ನಿರ್ಮಾಣ ಕುರಿತು ಹೇಳುವುದಾದರೆ ರಾಜಾಸೀಟ್ ರಸ್ತೆಯನ್ನು ನಗರೋತ್ಥಾನ ನಿಧಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶ ಇದೆ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ.
ಗುಂಡಿ ಮುಚ್ಚಲಾಗುತ್ತಿದೆ ಶಾಶ್ವತ ರಸ್ತೆ ಬೇಕಾಗಿದೆ ಈಗ ಕೆಲವು ದಿನಗಳಿಂದ ಮಡಿಕೇರಿ ನಗರದ ಅಲ್ಲಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಪ್ರತಿ ವರ್ಷವೂ ದಸರೆಯ ಹೊಸ್ತಿಲಲ್ಲಿ ಈ ಕಾರ್ಯ ನಡೆಯುತ್ತಲೇ ಇರುತ್ತದೆ. ಇದಕ್ಕೆ ಬದಲಾಗಿ ದಶಮಂಟಪಗಳು ಸಾಗುವ ರಸ್ತೆಯನ್ನು ಉತ್ತಮ ಗುಣಮಟ್ಟದಿಂದ ಶಾಶ್ವತವಾದ ರಸ್ತೆಯನ್ನಾಗಿ ನಿರ್ಮಿಸಿದರೆ ಪ್ರತಿ ವರ್ಷ ಗುಂಡಿ ಮುಚ್ಚುವುದಕ್ಕೆ ತಗುಲುವ ವೆಚ್ಚವಾದರೂ ಉಳಿತಾಯವಾಗುತ್ತದೆ.ಅರುಣ್ ಕುಮಾರ್ ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷ
ಗುಂಡಿಯನ್ನೂ ಮುಚ್ಚುತ್ತೇವೆ ಶಾಶ್ವತ ರಸ್ತೆಯನ್ನೂ ನಿರ್ಮಿಸುತ್ತೇವೆ ಮಳೆ ಇದ್ದುದ್ದರಿಂದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಇಂದಿನಿಂದ ಆರಂಭವಾಗಲಿದೆ. ದಸರೆಯ ಒಳಗೆ ಈ ಕಾರ್ಯ ಪೂರ್ಣವಾಗಲಿದೆ. ಮಳೆಗಾಲ ಮುಗಿದ ಬಳಿಕ ಎನ್ಡಿಆರ್ಎಫ್ ನಿಧಿಯಿಂದ ಮಡಿಕೇರಿ ನಗರದ ಪ್ರಮುಖ ರಸ್ತೆಗಳನ್ನು ಶಾಶ್ವತ ರಸ್ತೆಗಳನ್ನಾಗಿ ನಿರ್ಮಾಣ ಮಾಡುವ ಚಿಂತನೆ ಇದೆಮಹೇಶ್ ಜೈನಿ ಮಡಿಕೇರಿ ನಗರಸಭೆಯ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.