ಗಣಿಹಗರಣಕ್ಕೆ ಸಂಬಂಧಪಟ್ಟ ಪ್ರಕರಣಗಳು ಜನಾರ್ದನ ರೆಡ್ಡಿ ವಿರುದ್ಧ ಐದಾರು ಇದ್ದರೆ, ಸಚಿವ ಬಿ.ನಾಗೇಂದ್ರ ಅವರು ವಿರುದ್ದ 20ಕ್ಕೂ ಹೆಚ್ಚಿವೆ. ಇವೆಲ್ಲವೂ ಸಿದ್ದರಾಮಯ್ಯನವರೇ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದು, ನಾಗೇಂದ್ರ ಅವರು ತಪ್ಪಿತಸ್ಥರು ಎಂದರಿತ ಸಿದ್ದರಾಮಯ್ಯನವರು ಸಂಪುಟದಲ್ಲಿ ಸಚಿವ ಸ್ಥಾನ ಏಕೆ ನೀಡಬೇಕು. ಒಂದು ವೇಳೆ ದ್ವೇಷ ಇಲ್ಲವಂದ್ರೆ ನಾಗೇಂದ್ರ ಅವರ ಪ್ರಕರಣಗಳನ್ನೂ ಸಹ ಹಿಂಪಡೆಯಬೇಕು. ಇಲ್ಲಿ ಡಿಕೆಶಿಗೆ ಒಂದು ನ್ಯಾಯ, ನಾಗೇಂದ್ರ ಅವರಿಗೆ ಒಂದು ನ್ಯಾಯನಾ’ ಎಂದು ಪ್ರಶ್ನಿಸಿದರು.