<p><strong>ತುಮಕೂರು</strong>: ಅಡುಗೆ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅವರು ಖರೀದಿಸಿದ್ದ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಸಿಕ್ಕಿದೆ!</p>.<p>ಕಳೆದ ಡಿಸೆಂಬರ್ 15ರಂದು ನಗರದ 1ನೇ ವಾರ್ಡ್ ವ್ಯಾಪ್ತಿಯ ದಾಸಿಮುದ್ದಯ್ಯನ ಪಾಳ್ಯದ ವಿಜಯಲಕ್ಷ್ಮಿ ಡಿಪೊದಲ್ಲಿ ಅಗತ್ಯ ಸಾಮಗ್ರಿಯ ಜತೆಗೆ ಎಣ್ಣೆ ಪ್ಯಾಕೇಟ್ ಖರೀದಿಸಿದ್ದರು. ಫೆ. 11ರಂದು ಪ್ಯಾಕೇಟ್ ತೆರೆದು ನೋಡಿದಾಗ ಸತ್ತ ಇಲಿ ಕಂಡು ಗಾಬರಿಯಾಗಿದ್ದಾರೆ.</p>.<p>‘ಜನ ಸಾಮಾನ್ಯರು ಅಡುಗೆಗೆ ಉಪಯೋಗಿಸುವ ‘ರುಚಿ ಗೋಲ್ಡ್’ ಎಣ್ಣೆ ಪ್ಯಾಕೇಟ್ನಲ್ಲಿ ಇಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಎಷ್ಟು ಚೆನ್ನಾಗಿ ತಪಾಸಣೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆ ಸೂಕ್ತ ಉದಾಹರಣೆ. ರುಚಿ ಗೋಲ್ಡ್ ಕಂಪನಿಯು ಇಲಿ ಇರುವ ಪ್ಯಾಕೇಟ್ ಅನ್ನು ಮಾರುಕಟ್ಟೆಗೆ ಬಿಟ್ಟಿರುವುದು ಜನಸಾಮಾನ್ಯರಿಗೆ ಮಾಡಿದ ಮೋಸ’ ಎಂದು ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ‘ರುಚಿ ಗೋಲ್ಡ್’ ಎಣ್ಣೆ ತಯಾರಿಸುವ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಅನ್ಯಾಯಕ್ಕೆ ದಂಡ ಸಮೇತ ವಸೂಲು ಮಾಡಬೇಕು. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಅಡುಗೆ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಅವರು ಖರೀದಿಸಿದ್ದ ಎಣ್ಣೆಯ ಪ್ಯಾಕೇಟ್ನಲ್ಲಿ ಸತ್ತ ಇಲಿ ಸಿಕ್ಕಿದೆ!</p>.<p>ಕಳೆದ ಡಿಸೆಂಬರ್ 15ರಂದು ನಗರದ 1ನೇ ವಾರ್ಡ್ ವ್ಯಾಪ್ತಿಯ ದಾಸಿಮುದ್ದಯ್ಯನ ಪಾಳ್ಯದ ವಿಜಯಲಕ್ಷ್ಮಿ ಡಿಪೊದಲ್ಲಿ ಅಗತ್ಯ ಸಾಮಗ್ರಿಯ ಜತೆಗೆ ಎಣ್ಣೆ ಪ್ಯಾಕೇಟ್ ಖರೀದಿಸಿದ್ದರು. ಫೆ. 11ರಂದು ಪ್ಯಾಕೇಟ್ ತೆರೆದು ನೋಡಿದಾಗ ಸತ್ತ ಇಲಿ ಕಂಡು ಗಾಬರಿಯಾಗಿದ್ದಾರೆ.</p>.<p>‘ಜನ ಸಾಮಾನ್ಯರು ಅಡುಗೆಗೆ ಉಪಯೋಗಿಸುವ ‘ರುಚಿ ಗೋಲ್ಡ್’ ಎಣ್ಣೆ ಪ್ಯಾಕೇಟ್ನಲ್ಲಿ ಇಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಎಷ್ಟು ಚೆನ್ನಾಗಿ ತಪಾಸಣೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆ ಸೂಕ್ತ ಉದಾಹರಣೆ. ರುಚಿ ಗೋಲ್ಡ್ ಕಂಪನಿಯು ಇಲಿ ಇರುವ ಪ್ಯಾಕೇಟ್ ಅನ್ನು ಮಾರುಕಟ್ಟೆಗೆ ಬಿಟ್ಟಿರುವುದು ಜನಸಾಮಾನ್ಯರಿಗೆ ಮಾಡಿದ ಮೋಸ’ ಎಂದು ಗಿರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ‘ರುಚಿ ಗೋಲ್ಡ್’ ಎಣ್ಣೆ ತಯಾರಿಸುವ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಅನ್ಯಾಯಕ್ಕೆ ದಂಡ ಸಮೇತ ವಸೂಲು ಮಾಡಬೇಕು. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>