<p><strong>ಗೋಕರ್ಣ</strong>: ಇಲ್ಲಿನ ಬಂಗ್ಲೆಗುಡ್ಡದಲ್ಲಿನ ಮುರಳೀಧರ ಕಾಮತ್ ಎಂಬವರ ಮನೆಯಲ್ಲಿ ಗುರುವಾರ ನಸುಕಿನ ಜಾವ ಅಡುಗೆ ಸಿಲಿಂಡರ್ ಸ್ಪೋಟಗೊಂಡು, ಮನೆ ಸಂಪೂರ್ಣ ಸುಟ್ಟುಹೋಗಿದೆ.</p>.ಗೋಕರ್ಣ | ಗಾಂಜಾ ಸೇವನೆ: ಆರೋಪಿಗಳ ಬಂಧನ.<p>ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಉಂಟಾಗಿಲ್ಲ. ಮುರಳೀಧರ ಹೋಟೆಲ್ ಉದ್ಯಮಿಯಾಗಿದ್ದು, ಕುಡ್ಲೆ ಬೀಚ್ ಸಮೀಪದ ಚಿಕ್ಕ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಮನೆಯವರೆಲ್ಲಾ ರಾತ್ರಿ ಅಲ್ಲಿಯೇ ಉಳಿದಿದ್ದರು. ಯಾರೂ ಇಲ್ಲದ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಮನೆಯ ಮಾಲೀಕ ಆರೋಪಿಸಿದ್ದಾರೆ.</p>.ಗೋಕರ್ಣ | ಸಿಆರ್ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ.<p>'ಸಿಲಿಂಡರ್ ಬಂದ್ ಇತ್ತು. ಆದರೂ ಸ್ಪೋಟವಾಗಲು ಹೇಗೆ ಸಾಧ್ಯ. ಇದು ಉದ್ದೇಶಪೂರ್ವಕವಾಗಿ ಯಾರೋ ಮಾಡಿರುವ ಕೃತ್ಯ' ಎಂದು ಮುರಳೀಧರ ಶಂಕೆ ವ್ಯಕ್ತಪಡಿಸಿದ್ದಾರೆ.</p><p>ಸ್ಥಳೀಯರು ಮತ್ತು ಕುಮಟಾದಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋಕರ್ಣ ಠಾಣೆ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ</p>.ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ</strong>: ಇಲ್ಲಿನ ಬಂಗ್ಲೆಗುಡ್ಡದಲ್ಲಿನ ಮುರಳೀಧರ ಕಾಮತ್ ಎಂಬವರ ಮನೆಯಲ್ಲಿ ಗುರುವಾರ ನಸುಕಿನ ಜಾವ ಅಡುಗೆ ಸಿಲಿಂಡರ್ ಸ್ಪೋಟಗೊಂಡು, ಮನೆ ಸಂಪೂರ್ಣ ಸುಟ್ಟುಹೋಗಿದೆ.</p>.ಗೋಕರ್ಣ | ಗಾಂಜಾ ಸೇವನೆ: ಆರೋಪಿಗಳ ಬಂಧನ.<p>ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಉಂಟಾಗಿಲ್ಲ. ಮುರಳೀಧರ ಹೋಟೆಲ್ ಉದ್ಯಮಿಯಾಗಿದ್ದು, ಕುಡ್ಲೆ ಬೀಚ್ ಸಮೀಪದ ಚಿಕ್ಕ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಮನೆಯವರೆಲ್ಲಾ ರಾತ್ರಿ ಅಲ್ಲಿಯೇ ಉಳಿದಿದ್ದರು. ಯಾರೂ ಇಲ್ಲದ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಮನೆಯ ಮಾಲೀಕ ಆರೋಪಿಸಿದ್ದಾರೆ.</p>.ಗೋಕರ್ಣ | ಸಿಆರ್ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ.<p>'ಸಿಲಿಂಡರ್ ಬಂದ್ ಇತ್ತು. ಆದರೂ ಸ್ಪೋಟವಾಗಲು ಹೇಗೆ ಸಾಧ್ಯ. ಇದು ಉದ್ದೇಶಪೂರ್ವಕವಾಗಿ ಯಾರೋ ಮಾಡಿರುವ ಕೃತ್ಯ' ಎಂದು ಮುರಳೀಧರ ಶಂಕೆ ವ್ಯಕ್ತಪಡಿಸಿದ್ದಾರೆ.</p><p>ಸ್ಥಳೀಯರು ಮತ್ತು ಕುಮಟಾದಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋಕರ್ಣ ಠಾಣೆ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ</p>.ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>