ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಸೂರು ಲೋಕಸಭಾ ಕ್ಷೇತ್ರ: ಸಾಮಾನ್ಯರೊಂದಿಗೆ ಅರಸೊತ್ತಿಗೆಗೂ ಮಣೆ

ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯ ವಿಶೇಷ: ಯುವಕ, ಅರಸು, ಮಹಿಳೆ, ಪತ್ರಕರ್ತಗೆ ಮಣೆ
ಎಂ. ಮಹೇಶ
Published : 21 ಮಾರ್ಚ್ 2024, 6:50 IST
Last Updated : 21 ಮಾರ್ಚ್ 2024, 6:50 IST
ಫಾಲೋ ಮಾಡಿ
Comments
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಎಂ.ಡಿ.ತುಳಸಿದಾಸಪ್ಪ ಗುರುಪಾದಸ್ವಾಮಿ
ಎಂ.ಡಿ.ತುಳಸಿದಾಸಪ್ಪ ಗುರುಪಾದಸ್ವಾಮಿ
ಸಿ.ಎಚ್.ವಿಜಯಶಂಕರ್
ಸಿ.ಎಚ್.ವಿಜಯಶಂಕರ್
ಎಚ್‌.ವಿಶ್ವನಾಥ್
ಎಚ್‌.ವಿಶ್ವನಾಥ್
ಪ್ರತಾಪ ಸಿಂಹ
ಪ್ರತಾಪ ಸಿಂಹ
ಬಿಜೆಪಿ ಗೆಲುವು
1996ರಲ್ಲಿ ಪುಟಿದೆದ್ದ ಶ್ರೀಕಂಠದತ್ತ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರನ್ನು 1998ರಲ್ಲಿ ಚುನಾವಣೆಯಲ್ಲಿ ಸೋಲಿಸಿದವರು ಬಿಜೆಪಿಯ ಸಿ.ಎಚ್. ವಿಜಯಶಂಕರ್‌. ಇದರೊಂದಿಗೆ ಕ್ಷೇತ್ರದಲ್ಲಿ ಬಿಜೆಪಿಯು ಗೆಲುವಿನ ಖಾತೆ ತೆರೆದ ಸಾಧನೆಯೂ ಸಾಧ್ಯವಾಗಿತ್ತು. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಕಂಡ ಶ್ರೀಕಂಠದತ್ತರು ಬಿಜೆಪಿಯ ವಿರುದ್ಧ ಸೇಡು ತೀರಿಸಿಕೊಂಡಿದ್ದರು. 2004ರಲ್ಲಿ ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಜಯಿಸಿದ್ದರು. 2009ರಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್‌ ಪಾಲಾಯಿತು. ಆಗ ಎಚ್‌. ವಿಶ್ವನಾಥ್ ಗೆದ್ದಿದ್ದರು. 2014 ಹಾಗೂ 2019 ಎರಡೂ ಚುನಾವಣೆಯಲ್ಲೂ ಬಿಜೆಪಿ ತನ್ನ ವಶಪಡಿಸಿಕೊಂಡಿತು. ಸತತ ಎರಡು ಚುನಾವಣೆಗಳಲ್ಲೂ ಪ್ರತಾಪ ಸಿಂಹ ಸ್ಪರ್ಧಿಸಿದ್ದರು; ಆಯ್ಕೆಯೂ ಆಗಿದ್ದರು. ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯಾಗಿಯೇ ಬಂದಿದ್ದ ಅವರಿಗೆ ಪಕ್ಷ ಈ ಬಾರಿ ಕೊಕ್ ಕೊಟ್ಟಿದೆ. ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಇಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ; ಆಗೆಲ್ಲವೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದರು. ಈಗ ಅವರ ಪುತ್ರ ಯದುವೀರ್ ಬಿಜೆಪಿಯಿಂದಲೇ ರಾಜಕೀಯ ಭವಿಷ್ಯ ಅರಸುತ್ತಾ ಜನಾದೇಶ ಬೇಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT