<p><strong>ಬಳ್ಳಾರಿ:</strong> ‘ಸತೀಶ ಜಾರಕಿಹೊಳಿ ಅವರನ್ನು ಮಟ್ಟಹಾಕಲು ನನ್ನನ್ನು ಡಿ.ಕೆ ಶಿವಕುಮಾರ್ ಬಳಸಿಕೊಳ್ಳುತ್ತಿದ್ದಾರೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಜನಾರ್ದನ ರೆಡ್ಡಿ ಅವರ ಊಹೆ. ಅವರನ್ನು ಮಟ್ಟ ಹಾಕಲು ನಾನು ಯಾರು’ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದರು. </p><p>ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಂದು ಊರಿನ ರಾಜ ಇನ್ನೊಂದು ಊರಿನ ಗುಲಾಮ. ಸತೀಶ ಜಾರಕಿಹೊಳಿಗೆ ತೊಂದರೆ ಕೊಡುವಷ್ಟು ನಾನು ಸಣ್ಣವನಲ್ಲ; ನಾನೂ ದೊಡ್ಡ ನಾಯಕನೇ. ನಾನೀಗ ಸೋತಿದ್ದೇನೆ. ಕಾಂಗ್ರೆಸ್ಗೆ ನನ್ನ ಅಗತ್ಯವೇನಿದೆ? ಬಿಜೆಪಿಯಲ್ಲಿದ್ದೇನೆ ಇಲ್ಲಿಯೇ ಮುಂದುವರಿಯುತ್ತೇನೆ’ ಎಂದರು. </p><p>‘ಪಕ್ಷದಲ್ಲಿ ನಡೆದ ಬೆಳವಣಿಗೆಯಿಂದ ನನಗೆ ನೋವು ಆಗಿದ್ದಕ್ಕೆ ಮಾತನಾಡಿದ್ದೇನೆ. ನಾನು ಕಾಂಗ್ರೆಸ್ಗೆ ಹೋಗುತ್ತೇನೆಯೇ ಎಂಬುದರ ಬಗ್ಗೆ ಜನಾರ್ದನ ರೆಡ್ಡಿಯವರೇ ಸ್ಪಷ್ಟನೆ ನೀಡಲಿ. ಅವರು ಸುಳ್ಳಿನ ಮೇಲೆ ಕೋಟೆ ಕಟ್ಟುತ್ತಾರೆ. ಕಾಂಗ್ರೆಸ್ನಿಂದ ನನ್ನನ್ನು ಯಾರೂ ಆಹ್ವಾನಿಸಿಲ್ಲ’ ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ‘ಸತೀಶ ಜಾರಕಿಹೊಳಿ ಅವರನ್ನು ಮಟ್ಟಹಾಕಲು ನನ್ನನ್ನು ಡಿ.ಕೆ ಶಿವಕುಮಾರ್ ಬಳಸಿಕೊಳ್ಳುತ್ತಿದ್ದಾರೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಜನಾರ್ದನ ರೆಡ್ಡಿ ಅವರ ಊಹೆ. ಅವರನ್ನು ಮಟ್ಟ ಹಾಕಲು ನಾನು ಯಾರು’ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದರು. </p><p>ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಂದು ಊರಿನ ರಾಜ ಇನ್ನೊಂದು ಊರಿನ ಗುಲಾಮ. ಸತೀಶ ಜಾರಕಿಹೊಳಿಗೆ ತೊಂದರೆ ಕೊಡುವಷ್ಟು ನಾನು ಸಣ್ಣವನಲ್ಲ; ನಾನೂ ದೊಡ್ಡ ನಾಯಕನೇ. ನಾನೀಗ ಸೋತಿದ್ದೇನೆ. ಕಾಂಗ್ರೆಸ್ಗೆ ನನ್ನ ಅಗತ್ಯವೇನಿದೆ? ಬಿಜೆಪಿಯಲ್ಲಿದ್ದೇನೆ ಇಲ್ಲಿಯೇ ಮುಂದುವರಿಯುತ್ತೇನೆ’ ಎಂದರು. </p><p>‘ಪಕ್ಷದಲ್ಲಿ ನಡೆದ ಬೆಳವಣಿಗೆಯಿಂದ ನನಗೆ ನೋವು ಆಗಿದ್ದಕ್ಕೆ ಮಾತನಾಡಿದ್ದೇನೆ. ನಾನು ಕಾಂಗ್ರೆಸ್ಗೆ ಹೋಗುತ್ತೇನೆಯೇ ಎಂಬುದರ ಬಗ್ಗೆ ಜನಾರ್ದನ ರೆಡ್ಡಿಯವರೇ ಸ್ಪಷ್ಟನೆ ನೀಡಲಿ. ಅವರು ಸುಳ್ಳಿನ ಮೇಲೆ ಕೋಟೆ ಕಟ್ಟುತ್ತಾರೆ. ಕಾಂಗ್ರೆಸ್ನಿಂದ ನನ್ನನ್ನು ಯಾರೂ ಆಹ್ವಾನಿಸಿಲ್ಲ’ ಎಂದು ಅವರು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>