ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬಜೆಟ್ ತಯಾರಿಯಲ್ಲಿ ಸಿದ್ದರಾಮಯ್ಯ ತೊಡಗಿಕೊಂಡಿದ್ದರೆ, ‘ಮುಂದಿನದನ್ನು ಕಾಲವೇ ಹೇಳುತ್ತದೆ’ ಎಂಬ ನಂಬಿಕೆಯ ಮಾತುಗಳನ್ನು ಶಿವಕುಮಾರ್ ಪುನರುಚ್ಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರ ಮಾತುಗಳು ಪಕ್ಷದಲ್ಲಿ ಅಂತರ್ಕಲಹದ ಕಿಡಿ ಹೊತ್ತಿಸಿವೆ. ನಾಯಕರ ಆಪ್ತರು ದಿನಕ್ಕೊಂದು ಹೇಳಿಕೆಯ ಬಾಣ ಬಿಡತೊಡಗಿದ್ದಾರೆ.
‘ಹೈಕಮಾಂಡ್ ಹೈಕಮಾಂಡೇ. ಮುಖ್ಯಮಂತ್ರಿ ಬದಲಾವಣೆಯ ವಿಚಾರವಾಗಿ ಹೈಕಮಾಂಡ್ ಏನೂ ಹೇಳದೇ ಇರುವುದರಿಂದ ಮುಖ್ಯಮಂತ್ರಿ ಬದಲಾವಣೆ ಆಗಲ್ಲ ಎಂದರ್ಥ, ಅವರೇ ಮುಂದುವರಿಯಲಿದ್ದಾರೆ.
– ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯ
'ಸಿದ್ದರಾಮಯ್ಯಗಿಂತ ಯತೀಂದ್ರ ಮೇಲೆ'
ಡಿಕೆಶಿ ಕೇಳಿದರೆ ಪ್ರಾಣ ಕೊಡುತ್ತೇವೆ: ಶಿವಗಂಗಾ
ನಾಯಕತ್ವ ಬದಲಾವಣೆ ಕುರಿತಂತೆ ಆಗಾಗ ಕೇಳಿ ಬರುತ್ತಿರುವ ವದಂತಿ ಕೇವಲ ಊಹಾಪೋಹ. ಅವೆಲ್ಲ ಅವರವರ ವೈಯಕ್ತಿಕ ಹೇಳಿಕೆಗಳು. ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ.
– ಸಲೀಂ ಅಹಮದ್, ಸರ್ಕಾರಿ ಮುಖ್ಯ ಸಚೇತಕ, ವಿಧಾನ ಪರಿಷತ್ತು
‘ಹೈಕಮಾಂಡ್ ಮೌನವೇ ಸೂಚನೆ’
ಯತೀಂದ್ರ ನೀಡುತ್ತಿರುವ ಹೇಳಿಕೆಗಳು ಅವರ ವಂಶಪಾರಂಪರ್ಯ ಅಧಿಕಾರದ ಪ್ರತೀಕ. ಮುಂದೆ ಕಾಂಗ್ರೆಸ್ನವರು ರಸ್ತೆಗಳಲ್ಲಿ ಹೊಡೆದಾಡುವ ಸ್ಥಿತಿ ಬರುತ್ತದೆ. ಇದು ಅದರ ಮುನ್ಸೂಚನೆ.