<p><strong>ಕಾಬೂಲ್:</strong> ಹಿಂದು ಕುಶ್ ಪರ್ವತ ಶ್ರೇಣಿಗಳು, ಕುನಾರ್ ಕಣಿವೆಯ ಸೊಬಗಿನ ಪೂರ್ವ ಅಫ್ಗಾನಿಸ್ತಾನವು ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ತತ್ತರಿಸಿದೆ. ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 1,400ಕ್ಕೂ ಹೆಚ್ಚು. 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ.</p><p>ರಾತ್ರಿ ಜನರು ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯ ದಾಯಿತು. ಮನೆಗಳಿಂದ ಹೊರಗೆ ಓಡಿಬಂದು ಜೀವ ಉಳಿಸಿ ಕೊಳ್ಳಲು ಹೆಚ್ಚಿನ ಜನರಿಗೆ ಆಗಲಿಲ್ಲ.</p><p>ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸಾವು–ನೋವು ಸಂಭವಿಸಿದೆ. ಸೋಮವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.</p>.<p><strong>ಮುಂದುವರಿದ ರಕ್ಷಣಾ ಕಾರ್ಯ</strong> </p><p>ಗಾಯಗೊಂಡವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಗೋಳಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. </p><p>ಕುನಾರ್ಗ್ ಪ್ರಾಂತ್ಯದಲ್ಲಿ ಹೆಚ್ಚಿನ ಮನೆಗಳನ್ನು ಮಣ್ಣಿನ ಇಟ್ಟಿಗೆ ಮತ್ತು ಮರ ಬಳಸಿ ನಿರ್ಮಿಸಲಾಗಿದೆ. ಕಳಪೆ ಗುಣಮಟ್ಟದ ಈ ಮನೆಗಳು ಭೂಕಂಪದಲ್ಲಿ ನಾಮಾವಶೇಷ ಆಗಿವೆ. ಕುನಾರ್ ಪ್ರಾಂತ್ಯದ ನುರ್ಗಲ್ ಜಿಲ್ಲೆಯಲ್ಲಿ ಗರಿಷ್ಠ ಹಾನಿ ಸಂಭವಿಸಿದೆ.</p><p>‘ವೃದ್ಧರು, ಮಕ್ಕಳು ಎಲ್ಲರೂ ಮಣ್ಣಿನಡಿ ಇದ್ದಾರೆ. ದಯವಿಟ್ಟು ನಮಗೆ ಸಹಾಯ ಮಾಡಿ. ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು ಅಂತ್ಯಸಂಸ್ಕಾರ ನೆರವೇರಿಸಿ’ ಎಂದು ಗ್ರಾಮಸ್ಥರೊಬ್ಬರು ನೋವಿನಿಂದ ನುಡಿದರು. </p>.<p><strong>ಬಿರುಗಾಳಿಯಂತೆ ಶಬ್ದ</strong> </p><p>‘ದೊಡ್ಡ ಬಿರುಗಾಳಿ ಸಮೀಪಿಸುತ್ತಿರುವಂತೆ ಶಬ್ದ ಕೇಳಿಬಂತು. ತಕ್ಷಣವೇ ನಿದ್ರೆಯಲ್ಲಿದ್ದ ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರಗೋಡಿದೆ. ತಿರುಗಿ ನೋಡುವಷ್ಟರಲ್ಲಿ ನನ್ನ ಮನೆ, ನನ್ನ ಕಣ್ಣೆದುರೇ ನೆಲಸಮಗೊಂಡಿತು. ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿದರು’ ಎಂದು ಭೂಕಂಪದಲ್ಲಿ ಜೀವ ಉಳಿಸಿಕೊಮಡ ನುರ್ಗಲ್ನ ಮಜಾದರ್ ಪ್ರದೇಶದ ಸಿದ್ದಿಕ್ ಹೇಳಿದರು. </p><p>ಅಫ್ಗಾನಿಸ್ತಾನದಲ್ಲಿ 2023ರ ಅಕ್ಟೋಬರ್ನಲ್ಲಿ ಸಂಭವಿಸಿದ ರಿಕ್ಟ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದು ಇದುವರೆಗಿನ ಭೀಕರ ದುರಂತ ಎಂದು ಅಲ್ಲಿನ ಸರ್ಕಾರ ಹೇಳಿದೆ. </p>.<div><blockquote>ಈ ಸಂಕಷ್ಟದ ಸಮಯದಲ್ಲಿ ಬಾಧಿತರಿಗೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು, ಪರಿಹಾರ ನೀಡಲು ಭಾರತ ಬದ್ಧವಾಗಿದೆ.</blockquote><span class="attribution">–ನರೇಂದ್ರ ಮೋದಿ, ಪ್ರಧಾನಿ (ಎಕ್ಸ್ ಪೋಸ್ಟ್ನಲ್ಲಿ) </span></div>.<div><blockquote>ಭೂಕಂಪದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕುನಾರ್ ಪ್ರಾಂತ್ಯಕ್ಕೆ ಸೇರಿದವರು. ಉಳಿದೆಡೆಗಿಂತ ಈ ಭಾಗದಲ್ಲಿ ಹೆಚ್ಚಿನ ಜೀವ ಹಾನಿ ಸಂಭವಿಸಿದೆ. </blockquote><span class="attribution">–ಜಬೀಬುಲ್ಲಾ ಮುಜಾಹಿದ್, ತಾಲಿಬಾನ್ ಸರ್ಕಾರದ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್:</strong> ಹಿಂದು ಕುಶ್ ಪರ್ವತ ಶ್ರೇಣಿಗಳು, ಕುನಾರ್ ಕಣಿವೆಯ ಸೊಬಗಿನ ಪೂರ್ವ ಅಫ್ಗಾನಿಸ್ತಾನವು ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ತತ್ತರಿಸಿದೆ. ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 1,400ಕ್ಕೂ ಹೆಚ್ಚು. 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ.</p><p>ರಾತ್ರಿ ಜನರು ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯ ದಾಯಿತು. ಮನೆಗಳಿಂದ ಹೊರಗೆ ಓಡಿಬಂದು ಜೀವ ಉಳಿಸಿ ಕೊಳ್ಳಲು ಹೆಚ್ಚಿನ ಜನರಿಗೆ ಆಗಲಿಲ್ಲ.</p><p>ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸಾವು–ನೋವು ಸಂಭವಿಸಿದೆ. ಸೋಮವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.</p>.<p><strong>ಮುಂದುವರಿದ ರಕ್ಷಣಾ ಕಾರ್ಯ</strong> </p><p>ಗಾಯಗೊಂಡವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಗೋಳಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. </p><p>ಕುನಾರ್ಗ್ ಪ್ರಾಂತ್ಯದಲ್ಲಿ ಹೆಚ್ಚಿನ ಮನೆಗಳನ್ನು ಮಣ್ಣಿನ ಇಟ್ಟಿಗೆ ಮತ್ತು ಮರ ಬಳಸಿ ನಿರ್ಮಿಸಲಾಗಿದೆ. ಕಳಪೆ ಗುಣಮಟ್ಟದ ಈ ಮನೆಗಳು ಭೂಕಂಪದಲ್ಲಿ ನಾಮಾವಶೇಷ ಆಗಿವೆ. ಕುನಾರ್ ಪ್ರಾಂತ್ಯದ ನುರ್ಗಲ್ ಜಿಲ್ಲೆಯಲ್ಲಿ ಗರಿಷ್ಠ ಹಾನಿ ಸಂಭವಿಸಿದೆ.</p><p>‘ವೃದ್ಧರು, ಮಕ್ಕಳು ಎಲ್ಲರೂ ಮಣ್ಣಿನಡಿ ಇದ್ದಾರೆ. ದಯವಿಟ್ಟು ನಮಗೆ ಸಹಾಯ ಮಾಡಿ. ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು ಅಂತ್ಯಸಂಸ್ಕಾರ ನೆರವೇರಿಸಿ’ ಎಂದು ಗ್ರಾಮಸ್ಥರೊಬ್ಬರು ನೋವಿನಿಂದ ನುಡಿದರು. </p>.<p><strong>ಬಿರುಗಾಳಿಯಂತೆ ಶಬ್ದ</strong> </p><p>‘ದೊಡ್ಡ ಬಿರುಗಾಳಿ ಸಮೀಪಿಸುತ್ತಿರುವಂತೆ ಶಬ್ದ ಕೇಳಿಬಂತು. ತಕ್ಷಣವೇ ನಿದ್ರೆಯಲ್ಲಿದ್ದ ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರಗೋಡಿದೆ. ತಿರುಗಿ ನೋಡುವಷ್ಟರಲ್ಲಿ ನನ್ನ ಮನೆ, ನನ್ನ ಕಣ್ಣೆದುರೇ ನೆಲಸಮಗೊಂಡಿತು. ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿದರು’ ಎಂದು ಭೂಕಂಪದಲ್ಲಿ ಜೀವ ಉಳಿಸಿಕೊಮಡ ನುರ್ಗಲ್ನ ಮಜಾದರ್ ಪ್ರದೇಶದ ಸಿದ್ದಿಕ್ ಹೇಳಿದರು. </p><p>ಅಫ್ಗಾನಿಸ್ತಾನದಲ್ಲಿ 2023ರ ಅಕ್ಟೋಬರ್ನಲ್ಲಿ ಸಂಭವಿಸಿದ ರಿಕ್ಟ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದು ಇದುವರೆಗಿನ ಭೀಕರ ದುರಂತ ಎಂದು ಅಲ್ಲಿನ ಸರ್ಕಾರ ಹೇಳಿದೆ. </p>.<div><blockquote>ಈ ಸಂಕಷ್ಟದ ಸಮಯದಲ್ಲಿ ಬಾಧಿತರಿಗೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು, ಪರಿಹಾರ ನೀಡಲು ಭಾರತ ಬದ್ಧವಾಗಿದೆ.</blockquote><span class="attribution">–ನರೇಂದ್ರ ಮೋದಿ, ಪ್ರಧಾನಿ (ಎಕ್ಸ್ ಪೋಸ್ಟ್ನಲ್ಲಿ) </span></div>.<div><blockquote>ಭೂಕಂಪದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕುನಾರ್ ಪ್ರಾಂತ್ಯಕ್ಕೆ ಸೇರಿದವರು. ಉಳಿದೆಡೆಗಿಂತ ಈ ಭಾಗದಲ್ಲಿ ಹೆಚ್ಚಿನ ಜೀವ ಹಾನಿ ಸಂಭವಿಸಿದೆ. </blockquote><span class="attribution">–ಜಬೀಬುಲ್ಲಾ ಮುಜಾಹಿದ್, ತಾಲಿಬಾನ್ ಸರ್ಕಾರದ ವಕ್ತಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>