<p><strong>ಕಠ್ಮಂಡು:</strong> ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿರುವ 'ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್' (ಬಿಆರ್ಐ) ಬಗ್ಗೆ ಭಾರತ ಆಕ್ಷೇಪವೆತ್ತಬಾರದು. ಈ ಸಂಪರ್ಕ ಯೋಜನೆಯಿಂದ ಭಾರತವೂ ಪ್ರಯೋಜನ ಪಡೆಯಬಹುದು ಎಂದು ನೇಪಾಳ ಸಚಿವ ರಘುವೀರ್ ಮಹಾಸೇತ್ ಶುಕ್ರವಾರ ಹೇಳಿದ್ದಾರೆ.</p><p>ಸಾವಿರಾರು ಕೋಟಿ ಮೊತ್ತದ ಬಿಆರ್ಐ ಒಪ್ಪಂದಕ್ಕೆ ನೇಪಾಳ ಮತ್ತು ಚೀನಾ ಬುಧವಾರ ಸಹಿ ಮಾಡಿವೆ. ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಚೀನಾಗೆ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಈ ಒಪ್ಪಂದವಾಗಿದೆ. ಇದು ಚಿನಾವನ್ನು, ಆಗ್ನೇಯ ಏಷ್ಯಾ, ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಭಾರಿ ಯೋಜನೆಯಾಗಿದೆ. ಒಪ್ಪಂದವು ಉಭಯ ರಾಷ್ಟ್ರಗಳ ನಡುವಣ ಆರ್ಥಿಕ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ.</p><p>'ಚೀನಾಕ್ಕೆ ಕೆ.ಪಿ. ಶರ್ಮಾ ಓಲಿ ಭೇಟಿಯ ಬಳಿಕ ಬಿಆರ್ಐ ಅನುಷ್ಠಾನ' ಎಂಬ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಹಾಸೇತ್ ಮಾತನಾಡಿದ್ದಾರೆ.</p><p>ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ವಿದೇಶಾಂಗ ಇಲಾಖೆಯ ಮಾಜಿ ಸಚಿವರೂ ಆಗಿರುವ ಅವರು, 'ನೇಪಾಳವು ಬಿಆರ್ಐ ಯೋಜನೆಗೆ ಸಹಕಾರ ನೀಡಲು ಒಪ್ಪಂದ ಮಾಡಿಕೊಂಡಿರುವುದಕ್ಕೆ ಭಾರತ ಆಕ್ಷೇಪ ಎತ್ತಬಾರದು. ಏಕೆಂದರೆ, ಆ ರಾಷ್ಟ್ರಕ್ಕೂ ಯೋಜನೆಯಿಂದ ಪ್ರಯೋಜನವಾಗಲಿದೆ' ಎಂದು ಹೇಳಿದ್ದಾರೆ.</p><p>'ನೇಪಾಳ ಮತ್ತು ಚೀನಾ ನಡುವೆ ರೈಲು ಮತ್ತು ರಸ್ತೆ ಮಾರ್ಗಗಳಂತಹ ಮೂಲಸೌಕರ್ಯ ಅಭಿವೃದ್ಧಿಯಾದರೆ, ಅದನ್ನು ಭಾರತವೂ ಬಳಸಿಕೊಳ್ಳಬಹುದು. ಹಾಗಾಗಿ, ಈ ಒಪ್ಪಂದದ ಬಗ್ಗೆ ಭಾರತ ಕಳವಳಪಡುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.</p><p>ಕೆರುಂಗ್–ಕಠ್ಮಂಡು ಮಾರ್ಗ ಮತ್ತು ಕಠ್ಮಂಡು ರಕ್ಸಾಲ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಿದರೆ, ಭಾರತವು ಹೆಚ್ಚು ಪ್ರಯೋಜನ ಪಡೆಯಲಿದೆ ಎಂದಿರುವ ಅವರು, ಚೀನಾದ ಸರಕುಗಳನ್ನು ಒಂದೇ ದಿನದಲ್ಲಿ ಭಾರತಕ್ಕೆ ತರಲು ಸಾಧ್ಯವಾಗಲಿದೆ. ಇಲ್ಲವಾದರೆ, ವಾರಗಳೇ ಬೇಕಾಗಬಹುದು ಎಂದು ಒತ್ತಿಹೇಳಿದ್ದಾರೆ.</p>.ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್.ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯ ಕೊಲೆ; ಜೊತೆಯಲ್ಲೇ ವಾಸವಿದ್ದ ಆರೋಪಿ ಬಂಧನ.<p>ಕೆರುಂಗ್ ದಕ್ಷಿಣ ಟಿಬಟ್ನಲ್ಲಿರುವ ಪಟ್ಟಣವಾಗಿದೆ. ರಕ್ಷೌಲ್ ಭಾರತದ ಬಿಹಾರದಲ್ಲಿದೆ. ಇವೆರಡೂ ಗಡಿ ಭಾಗದಲ್ಲಿರುವ ಪ್ರಮುಖ ಪಟ್ಟಣಗಳಾಗಿವೆ.</p><p>ದೇಶದ ಹಿಸಾಸಕ್ತಿ ದೃಷ್ಟಿಯಿಂದ ಚೀನಾದಿಂದ ನೇಪಾಳ ಸಾಲ ಪಡೆದರೆ ಯಾವುದೇ ತಕರಾರುಗಳು ಇಲ್ಲ ಎಂದೂ ಮಹಾಸೇತ್ ಅಭಿಪ್ರಾಯಪಟ್ಟಿದ್ದಾರೆ.</p><p>ಜಾಗತಿಕ ಮಟ್ಟದಲ್ಲಿ ಚೀನಾದ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆ ದೇಶದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಮಹಾತ್ವಾಕಾಂಕ್ಷಿಯ ಯೋಜನೆಯಾಗಿರುವ ಬಿಆರ್ಐ ವಿರುದ್ಧ ಧ್ವನಿ ಎತ್ತಿದ ಮೊದಲ ರಾಷ್ಟ್ರ ಭಾರತ.</p><p>'ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಮುಂದಾಗಿದೆ. ಈ ಯೋಜನೆಯನ್ನು ವಿರೋಧಿಸುವ ಭಾರತದ ನಿಲುವಿನದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಈ ಹಿಂದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇತ್ತೀಚೆಗೆ ಹೇಳಿದ್ದಾರೆ. ಬ್ರೆಜಿಲ್ ಸಹ ಬಿಆರ್ಐ ಅನ್ನು ವಿರೋಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿರುವ 'ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್' (ಬಿಆರ್ಐ) ಬಗ್ಗೆ ಭಾರತ ಆಕ್ಷೇಪವೆತ್ತಬಾರದು. ಈ ಸಂಪರ್ಕ ಯೋಜನೆಯಿಂದ ಭಾರತವೂ ಪ್ರಯೋಜನ ಪಡೆಯಬಹುದು ಎಂದು ನೇಪಾಳ ಸಚಿವ ರಘುವೀರ್ ಮಹಾಸೇತ್ ಶುಕ್ರವಾರ ಹೇಳಿದ್ದಾರೆ.</p><p>ಸಾವಿರಾರು ಕೋಟಿ ಮೊತ್ತದ ಬಿಆರ್ಐ ಒಪ್ಪಂದಕ್ಕೆ ನೇಪಾಳ ಮತ್ತು ಚೀನಾ ಬುಧವಾರ ಸಹಿ ಮಾಡಿವೆ. ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ಅವರು ಚೀನಾಗೆ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಈ ಒಪ್ಪಂದವಾಗಿದೆ. ಇದು ಚಿನಾವನ್ನು, ಆಗ್ನೇಯ ಏಷ್ಯಾ, ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಭಾರಿ ಯೋಜನೆಯಾಗಿದೆ. ಒಪ್ಪಂದವು ಉಭಯ ರಾಷ್ಟ್ರಗಳ ನಡುವಣ ಆರ್ಥಿಕ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ.</p><p>'ಚೀನಾಕ್ಕೆ ಕೆ.ಪಿ. ಶರ್ಮಾ ಓಲಿ ಭೇಟಿಯ ಬಳಿಕ ಬಿಆರ್ಐ ಅನುಷ್ಠಾನ' ಎಂಬ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಹಾಸೇತ್ ಮಾತನಾಡಿದ್ದಾರೆ.</p><p>ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ವಿದೇಶಾಂಗ ಇಲಾಖೆಯ ಮಾಜಿ ಸಚಿವರೂ ಆಗಿರುವ ಅವರು, 'ನೇಪಾಳವು ಬಿಆರ್ಐ ಯೋಜನೆಗೆ ಸಹಕಾರ ನೀಡಲು ಒಪ್ಪಂದ ಮಾಡಿಕೊಂಡಿರುವುದಕ್ಕೆ ಭಾರತ ಆಕ್ಷೇಪ ಎತ್ತಬಾರದು. ಏಕೆಂದರೆ, ಆ ರಾಷ್ಟ್ರಕ್ಕೂ ಯೋಜನೆಯಿಂದ ಪ್ರಯೋಜನವಾಗಲಿದೆ' ಎಂದು ಹೇಳಿದ್ದಾರೆ.</p><p>'ನೇಪಾಳ ಮತ್ತು ಚೀನಾ ನಡುವೆ ರೈಲು ಮತ್ತು ರಸ್ತೆ ಮಾರ್ಗಗಳಂತಹ ಮೂಲಸೌಕರ್ಯ ಅಭಿವೃದ್ಧಿಯಾದರೆ, ಅದನ್ನು ಭಾರತವೂ ಬಳಸಿಕೊಳ್ಳಬಹುದು. ಹಾಗಾಗಿ, ಈ ಒಪ್ಪಂದದ ಬಗ್ಗೆ ಭಾರತ ಕಳವಳಪಡುವ ಅಗತ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.</p><p>ಕೆರುಂಗ್–ಕಠ್ಮಂಡು ಮಾರ್ಗ ಮತ್ತು ಕಠ್ಮಂಡು ರಕ್ಸಾಲ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಿದರೆ, ಭಾರತವು ಹೆಚ್ಚು ಪ್ರಯೋಜನ ಪಡೆಯಲಿದೆ ಎಂದಿರುವ ಅವರು, ಚೀನಾದ ಸರಕುಗಳನ್ನು ಒಂದೇ ದಿನದಲ್ಲಿ ಭಾರತಕ್ಕೆ ತರಲು ಸಾಧ್ಯವಾಗಲಿದೆ. ಇಲ್ಲವಾದರೆ, ವಾರಗಳೇ ಬೇಕಾಗಬಹುದು ಎಂದು ಒತ್ತಿಹೇಳಿದ್ದಾರೆ.</p>.ಪಾಕಿಸ್ತಾನ: ಅಸಹಕಾರ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್.ಕೆನಡಾದಲ್ಲಿ ಭಾರತ ಮೂಲದ ವಿದ್ಯಾರ್ಥಿಯ ಕೊಲೆ; ಜೊತೆಯಲ್ಲೇ ವಾಸವಿದ್ದ ಆರೋಪಿ ಬಂಧನ.<p>ಕೆರುಂಗ್ ದಕ್ಷಿಣ ಟಿಬಟ್ನಲ್ಲಿರುವ ಪಟ್ಟಣವಾಗಿದೆ. ರಕ್ಷೌಲ್ ಭಾರತದ ಬಿಹಾರದಲ್ಲಿದೆ. ಇವೆರಡೂ ಗಡಿ ಭಾಗದಲ್ಲಿರುವ ಪ್ರಮುಖ ಪಟ್ಟಣಗಳಾಗಿವೆ.</p><p>ದೇಶದ ಹಿಸಾಸಕ್ತಿ ದೃಷ್ಟಿಯಿಂದ ಚೀನಾದಿಂದ ನೇಪಾಳ ಸಾಲ ಪಡೆದರೆ ಯಾವುದೇ ತಕರಾರುಗಳು ಇಲ್ಲ ಎಂದೂ ಮಹಾಸೇತ್ ಅಭಿಪ್ರಾಯಪಟ್ಟಿದ್ದಾರೆ.</p><p>ಜಾಗತಿಕ ಮಟ್ಟದಲ್ಲಿ ಚೀನಾದ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ಆ ದೇಶದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಮಹಾತ್ವಾಕಾಂಕ್ಷಿಯ ಯೋಜನೆಯಾಗಿರುವ ಬಿಆರ್ಐ ವಿರುದ್ಧ ಧ್ವನಿ ಎತ್ತಿದ ಮೊದಲ ರಾಷ್ಟ್ರ ಭಾರತ.</p><p>'ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಮುಂದಾಗಿದೆ. ಈ ಯೋಜನೆಯನ್ನು ವಿರೋಧಿಸುವ ಭಾರತದ ನಿಲುವಿನದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಈ ಹಿಂದೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇತ್ತೀಚೆಗೆ ಹೇಳಿದ್ದಾರೆ. ಬ್ರೆಜಿಲ್ ಸಹ ಬಿಆರ್ಐ ಅನ್ನು ವಿರೋಧಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>