ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ನಿಲ್ಲಿಸಿ, ಜನರ ಜೀವ ಉಳಿಸಿ: ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೀನ್ ಮನವಿ

Published 27 ಅಕ್ಟೋಬರ್ 2023, 16:11 IST
Last Updated 27 ಅಕ್ಟೋಬರ್ 2023, 16:11 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಯುದ್ಧ ನಿಲ್ಲಿಸಿ ಮತ್ತು ಜನರ ಜೀವ ಉಳಿಸಿ’ ಎಂದು ಪ್ಯಾಲೆಸ್ಟೀನ್‌ನ ರಾಯಭಾರಿ ರಿಯಾದ್ ಮನ್ಸೌರ್‌ ಗುರುವಾರ ವಿಶ್ವಸಂಸ್ಥೆಯ ಸಭೆಯಲ್ಲಿ ಮನವಿ ಮಾಡಿದರು. ಆದರೆ ಇಸ್ರೇಲ್‌ನ ರಾಜತಾಂತ್ರಿಕ ಅಧಿಕಾರಿ ‘ಹಮಾಸ್‌ ಬಂಡುಕೋರರು ನಿರ್ನಾಮವಾಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ಮತ್ತೆ ಘೋಷಿಸಿದರು.

ಇಸ್ರೇಲ್‌ ದಾಳಿ ಕುರಿತಂತೆ ಸಾಮಾನ್ಯ ಸಭೆಯ ತುರ್ತು ವಿಶೇಷ ಸಭೆಯಲ್ಲಿ ಗುರುವಾರ ಕದನ ವಿರಾಮ ಘೋಷಿಸಬೇಕೆಂಬ ಅರಬ್‌ ರಾಷ್ಟ್ರಗಳ ನಿರ್ಣಯವನ್ನು ಭಾಷಣಕಾರರು ಬೆಂಬಲಿಸಿದರು. ಆದರೆ ವಿಶ್ವಸಂಸ್ಥೆಯಲ್ಲಿರುವ ಇಸ್ರೇಲ್‌ ರಾಯಭಾರಿ ಗಿಲಾಡ್‌ ಎರ್ಡನ್‌ ಅವರು ‘ಕದನ ವಿರಾಮ ಎಂದರೆ ಶಸ್ತ್ರಸಜ್ಜಿತರಾಗಲು ಹಮಾಸ್‌ ಬಂಡುಕೋರರಿಗೆ ಮತ್ತೆ ಸಮಯ ನೀಡಿದಂತೆ. ಆಗ ಅವರು ಮತ್ತೆ ನಮ್ಮನ್ನು ಕೊಲ್ಲುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT