<p>‘ನಾಳೆ ನಮ್ಮ ಆಪ್ತ ನಾಯಕರನ್ನೆಲ್ಲ ಡಿನ್ನರ್ಗೆ ಕರೆದಿದ್ದೇನೆ, ಯಾವುದೇ ತೊಂದರೆ ಆಗದಂಗೆ ನೋಡ್ಕೊ’ ಎಮ್ಮೆಲ್ಲೆ ವಿಜಿ, ಪಿಎ ಮುದ್ದಣ್ಣನಿಗೆ ಹೇಳಿದ. </p>.<p>‘ಏನ್ ವಿಶೇಷ ಸರ್’ ಕುತೂಹಲದಿಂದ ಕೇಳಿದ ಮುದ್ದಣ್ಣ. </p>.<p>‘ಏನಿಲ್ಲ, ಸುಮ್ಮನೆ ಹೊಸ ವರ್ಷಕ್ಕೆ ಸೇರೋಣ ಅಂತ’. </p>.<p>‘ಹೊಸ ವರ್ಷ ಬಂದು ಒಂದು ವಾರ ಆಯ್ತು, ಈಗ ಪಾರ್ಟಿ ಯಾಕೆ ಸರ್?’ </p>.<p>‘ಹೇಳಿದಷ್ಟು ಮಾಡು, ಔತಣಕೂಟದ ಬಗ್ಗೆ ನಿನಗ್ಯಾಕಿಷ್ಟು ಆಸಕ್ತಿ?’ ಸಿಟ್ಟಿನಲ್ಲಿ ಹೇಳಿದ ವಿಜಿ. </p>.<p>‘ನನಗಲ್ಲ ಸರ್, ಮಾಧ್ಯಮದವರಿಗೆ ಆಸಕ್ತಿ, ಏನೇನೋ ಸುದ್ದಿ ಬರ್ತಿದೆ ನಿಮ್ಮ ಔತಣಕೂಟದ ಬಗ್ಗೆ’. </p>.<p>‘ಏನೇನು ಬರ್ತಿದೆ?’ </p>.<p>‘ಪಾರ್ಟಿಗೆ ಎಲ್ಲರನ್ನೂ ಕರೀಬೇಕು, ಆದರೆ, ಕೆಲವೇ ಕೆಲವರನ್ನ ಮಾತ್ರ ಯಾಕೆ ಕರೀತಿದಾರೆ, ಅದರಲ್ಲೂ ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಆಹ್ವಾನ ಏಕೆ ಅಂತೆಲ್ಲ ಕೇಳ್ತಿದ್ದಾರೆ. ಅಲ್ಲದೆ, ಇದೆಲ್ಲ ರಾಜಕಾರಣ ಅಂತ ಹೇಳ್ತಿದ್ದಾರೆ ಸರ್’.</p>.<p>‘ರಾಜಕಾರಣಿಗಳೆಲ್ಲ ಒಂದ್ಕಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಮಾತನಾಡದೇ ಇರೋಕಾಗುತ್ತಾ?’ ಎಮ್ಮೆಲ್ಲೆಗೆ ಮತ್ತೆ ಸಿಟ್ಟು ಬಂತು. </p>.<p>‘ಆದರೂ ಒಬ್ಬರಾದ ಮೇಲೆ ಒಬ್ಬೊಬ್ಬ ನಾಯಕರು ಔತಣಕೂಟ ಮಾಡ್ತಿರೋದೇಕೆ ಅಂತ’. </p>.<p>‘ಇದೊಳ್ಳೆ ಆಯ್ತಲ್ಲ, ರಾಜಕಾರಣಿಗಳಾದರೆ ನಾವು ಊಟ–ತಿಂಡಿಗೂ ಜೊತೆಗೆ ಸೇರಬಾರದಾ?’ </p>.<p>‘ಸೇರಬಹುದು ಸರ್, ಆದರೆ ಸೇರುತ್ತಿರುವ ಟೈಮ್ ಬಗ್ಗೆ ಮಾಧ್ಯಮದವರ ತಕರಾರು’.</p>.<p>‘ಮಾಧ್ಯಮದವರ ತಕರಾರು ತಾನೆ, ಜನ ಏನೂ ಕೇಳ್ತಿಲ್ಲವಲ್ಲ’. </p>.<p>‘ಆದರೂ, ಇತರ ಎಮ್ಮೆಲ್ಲೆಗಳಲ್ಲಿ ಅಸಮಾಧಾನ ಇದೆ ಸರ್’. </p>.<p>‘ಯಾಕ್ ಅಸಮಾಧಾನ?’ </p>.<p>‘ಬ್ರೇಕ್ಫಾಸ್ಟ್, ಲಂಚ್, ಡಿನ್ನರ್ಗೆ ಕರೆಯು<br />ತ್ತಿರುವ ನಾಯಕರು ಆಯ್ದ ಎಮ್ಮೆಲ್ಲೆಗಳಿಗೆ ಮಾತ್ರ ಆಹ್ವಾನ ನೀಡ್ತಿದ್ದಾರೆ ಅನ್ನೋದು’ ನಕ್ಕ ಮುದ್ದಣ್ಣ. </p>.<p>‘ಎಲ್ಲರೂ, ಎಲ್ಲರನ್ನ ಕರೆದರೆ ಹೈಕಮಾಂಡ್ಗೆ ಹೇಗೆ ಗೊತ್ತಾಗಬೇಕು ಯಾರ ಪವರ್, ಎಷ್ಟು ಅಂತ’ ನಿಗೂಢವಾಗಿ ನಕ್ಕ ಎಮ್ಮೆಲ್ಲೆ ವಿಜಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಾಳೆ ನಮ್ಮ ಆಪ್ತ ನಾಯಕರನ್ನೆಲ್ಲ ಡಿನ್ನರ್ಗೆ ಕರೆದಿದ್ದೇನೆ, ಯಾವುದೇ ತೊಂದರೆ ಆಗದಂಗೆ ನೋಡ್ಕೊ’ ಎಮ್ಮೆಲ್ಲೆ ವಿಜಿ, ಪಿಎ ಮುದ್ದಣ್ಣನಿಗೆ ಹೇಳಿದ. </p>.<p>‘ಏನ್ ವಿಶೇಷ ಸರ್’ ಕುತೂಹಲದಿಂದ ಕೇಳಿದ ಮುದ್ದಣ್ಣ. </p>.<p>‘ಏನಿಲ್ಲ, ಸುಮ್ಮನೆ ಹೊಸ ವರ್ಷಕ್ಕೆ ಸೇರೋಣ ಅಂತ’. </p>.<p>‘ಹೊಸ ವರ್ಷ ಬಂದು ಒಂದು ವಾರ ಆಯ್ತು, ಈಗ ಪಾರ್ಟಿ ಯಾಕೆ ಸರ್?’ </p>.<p>‘ಹೇಳಿದಷ್ಟು ಮಾಡು, ಔತಣಕೂಟದ ಬಗ್ಗೆ ನಿನಗ್ಯಾಕಿಷ್ಟು ಆಸಕ್ತಿ?’ ಸಿಟ್ಟಿನಲ್ಲಿ ಹೇಳಿದ ವಿಜಿ. </p>.<p>‘ನನಗಲ್ಲ ಸರ್, ಮಾಧ್ಯಮದವರಿಗೆ ಆಸಕ್ತಿ, ಏನೇನೋ ಸುದ್ದಿ ಬರ್ತಿದೆ ನಿಮ್ಮ ಔತಣಕೂಟದ ಬಗ್ಗೆ’. </p>.<p>‘ಏನೇನು ಬರ್ತಿದೆ?’ </p>.<p>‘ಪಾರ್ಟಿಗೆ ಎಲ್ಲರನ್ನೂ ಕರೀಬೇಕು, ಆದರೆ, ಕೆಲವೇ ಕೆಲವರನ್ನ ಮಾತ್ರ ಯಾಕೆ ಕರೀತಿದಾರೆ, ಅದರಲ್ಲೂ ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ಆಹ್ವಾನ ಏಕೆ ಅಂತೆಲ್ಲ ಕೇಳ್ತಿದ್ದಾರೆ. ಅಲ್ಲದೆ, ಇದೆಲ್ಲ ರಾಜಕಾರಣ ಅಂತ ಹೇಳ್ತಿದ್ದಾರೆ ಸರ್’.</p>.<p>‘ರಾಜಕಾರಣಿಗಳೆಲ್ಲ ಒಂದ್ಕಡೆ ಸೇರಿದ ಮೇಲೆ ರಾಜಕಾರಣದ ಬಗ್ಗೆ ಮಾತನಾಡದೇ ಇರೋಕಾಗುತ್ತಾ?’ ಎಮ್ಮೆಲ್ಲೆಗೆ ಮತ್ತೆ ಸಿಟ್ಟು ಬಂತು. </p>.<p>‘ಆದರೂ ಒಬ್ಬರಾದ ಮೇಲೆ ಒಬ್ಬೊಬ್ಬ ನಾಯಕರು ಔತಣಕೂಟ ಮಾಡ್ತಿರೋದೇಕೆ ಅಂತ’. </p>.<p>‘ಇದೊಳ್ಳೆ ಆಯ್ತಲ್ಲ, ರಾಜಕಾರಣಿಗಳಾದರೆ ನಾವು ಊಟ–ತಿಂಡಿಗೂ ಜೊತೆಗೆ ಸೇರಬಾರದಾ?’ </p>.<p>‘ಸೇರಬಹುದು ಸರ್, ಆದರೆ ಸೇರುತ್ತಿರುವ ಟೈಮ್ ಬಗ್ಗೆ ಮಾಧ್ಯಮದವರ ತಕರಾರು’.</p>.<p>‘ಮಾಧ್ಯಮದವರ ತಕರಾರು ತಾನೆ, ಜನ ಏನೂ ಕೇಳ್ತಿಲ್ಲವಲ್ಲ’. </p>.<p>‘ಆದರೂ, ಇತರ ಎಮ್ಮೆಲ್ಲೆಗಳಲ್ಲಿ ಅಸಮಾಧಾನ ಇದೆ ಸರ್’. </p>.<p>‘ಯಾಕ್ ಅಸಮಾಧಾನ?’ </p>.<p>‘ಬ್ರೇಕ್ಫಾಸ್ಟ್, ಲಂಚ್, ಡಿನ್ನರ್ಗೆ ಕರೆಯು<br />ತ್ತಿರುವ ನಾಯಕರು ಆಯ್ದ ಎಮ್ಮೆಲ್ಲೆಗಳಿಗೆ ಮಾತ್ರ ಆಹ್ವಾನ ನೀಡ್ತಿದ್ದಾರೆ ಅನ್ನೋದು’ ನಕ್ಕ ಮುದ್ದಣ್ಣ. </p>.<p>‘ಎಲ್ಲರೂ, ಎಲ್ಲರನ್ನ ಕರೆದರೆ ಹೈಕಮಾಂಡ್ಗೆ ಹೇಗೆ ಗೊತ್ತಾಗಬೇಕು ಯಾರ ಪವರ್, ಎಷ್ಟು ಅಂತ’ ನಿಗೂಢವಾಗಿ ನಕ್ಕ ಎಮ್ಮೆಲ್ಲೆ ವಿಜಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>