‘ಆತ್ಮಹತ್ಯೆ’ ಎಂದ ಪೊಲೀಸರು: ಕೊಲೆ ಎಂದಿದ್ದ ತಾಯಿ
‘ಪ್ರಬುದ್ಧಾ ಅವರದ್ದು ಆತ್ಮಹತ್ಯೆ ಇರಬಹುದು’ ಎಂಬುದಾಗಿ ಪೊಲೀಸರು ಆರಂಭದಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ‘ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ’ ಎಂಬುದಾಗಿ ಹೇಳಿದ್ದ ಪ್ರಬುದ್ಧಾ ತಾಯಿ ಕೆ.ಆರ್ ಸೌಮ್ಯಾ, ‘ನನ್ನ ಪುತ್ರಿ ಎಂತಹ ಪರಿಸ್ಥಿತಿಯನ್ನೂ ಧೈರ್ಯದಿಂದ ಎದುರಿಸುತ್ತಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಳ್ಳುವಂಥ ಹುಡುಗಿ ಅಲ್ಲ. ಯಾರೋ ರಾಕ್ಷಸರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸಾವಿನ ಕುರಿತು ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ’ ಎಂದು ಪೊಲೀಸರನ್ನು ಒತ್ತಾಯಿಸಿದ್ದರು.